By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Politics
    Politics
    Politics is the art of looking for trouble, finding it everywhere, diagnosing it incorrectly and applying the wrong remedies.
    Show More
    Top News
    Latest News
  • Articles
    ArticlesShow More
    ಚಹಾ ಮತ್ತು ಉತ್ತರ ಕರ್ನಾಟಕ
    May 21, 2025
    “ಬುದ್ಧ ಪೌರ್ಣಮಿ ವಿಶೇಷ “
    May 11, 2025
    ಯುವ ಜನಾಂಗಕ್ಕೆ ತಾಯಿಯ ಮಹತ್ವದ ಅರಿವಿಲ್ಲವೇಕೆ?
    May 11, 2025
    ತಾಯಿ
    May 11, 2025
    ದೊಡ್ಡ ವಿದ್ಯಾವಂತರೆಲ್ಲಾ ವಿವೇಕಿಗಳೇ……….?
    May 10, 2025
  • Sports
  • National
  • International
  • Crime
  • Contact Us
Reading: ದೊಡ್ಡ ವಿದ್ಯಾವಂತರೆಲ್ಲಾ ವಿವೇಕಿಗಳೇ……….?
Share
Font ResizerAa
VarthamanVarthaman
  • Home
  • Karnataka
  • Politics
  • Articles
  • Sports
  • National
  • International
  • Crime
  • Contact Us
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Politics
  • Articles
  • Sports
  • National
  • International
  • Crime
  • Contact Us
Follow US
Varthaman > Blog > Articles > ದೊಡ್ಡ ವಿದ್ಯಾವಂತರೆಲ್ಲಾ ವಿವೇಕಿಗಳೇ……….?
ArticlesTrending

ದೊಡ್ಡ ವಿದ್ಯಾವಂತರೆಲ್ಲಾ ವಿವೇಕಿಗಳೇ……….?

Team Varthaman
Last updated: May 10, 2025 8:24 am
Team Varthaman Published May 10, 2025
Share
SHARE

ಇತ್ತೀಚೆಗೆ ನನ್ನ ಮೆಸೆಂಜರ್ ನಲ್ಲಿ ಪರಿಚಿರೊಬ್ಬರು ” ವಿದ್ಯೆಗೂ ವಿವೇಕಕ್ಕೂ ತುಂಬಾ ವ್ಯತ್ಯಾಸವಿದೆ‌ ” ಎಂದು ನಿಮ್ಮ ಯಾವುದೋ‌ ಒಂದು‌ ಬರಹದಲ್ಲಿ ಓದಿದ್ದೆ. ಹಾಗೆಂದರೆ ಏನು ” ಎಂದು ಕೇಳಿದ್ದರು.

ಇದಕ್ಕೆ ಸ್ಪಷ್ಟ ವ್ಯಾಖ್ಯಾನ‌ ಕೊಡುವಷ್ಟು ಪದಜ್ಞಾನ, ಬುದ್ದಿಶಕ್ತಿ ನನ್ನಲ್ಲಿಲ್ಲವಾದರೂ, ನಮ್ಮ ದಿನನಿತ್ಯದ ಒಂದು ಘಟನೆಯನ್ನೇ ಉದಾಹರಿಸಿ ಅದಕ್ಕೆ ಅರ್ಥ ಹುಡುಕಲು ಯತ್ನಿಸಿದ್ದೆ.

ಒಬ್ಬ ಡಬಲ್ ಡಿಗ್ರೀ ಮಾಡಿರುವ ವಿದ್ಯಾವಂತನಿಗೆ ಮತ್ತು ಕೇವಲ ಮೂರನೇ ಕ್ಲಾಸು ಓದಿರುವ ಇನ್ನೊಬ್ಬನಿಗೆ ಒಂದು ಅತ್ಯಂತ ಸೂಕ್ಷ್ಮವಾದ ಮೆಸೇಜು ಅವರ ವಾಟ್ಸಪ್ ನಲ್ಲಿ ಬರುತ್ತದೆ ಎಂದಿಟ್ಟುಕೊಳ್ಳಿ. ಅದು ಎಂತಹ ಸೂಕ್ಷ್ಮ ಮೆಸೇಜು ಅಂದರೆ ಅದು ತುಂಬಾ ವೈರಲ್ ಆದಷ್ಟೂ ಎರಡು ಧರ್ಮ ಅಥವಾ ಜಾತಿಗಳ ನಡುವೆ ಬೆಂಕಿಯೇ ಹತ್ತಿ ಉರಿದು ಸಾಮಾಜಿಕ ಅಶಾಂತಿಗೆ ಕಾರಣವಾಗುವಂತಹ ಯಾರೋ ಕಿಡಿಗೇಡಿಗಳು ವೈರಲ್ ಮಾಡಿರುವ ಫ಼ೇಕ್ ಮೆಸೇಜು .

ಡಿಗ್ರೀ ಮಾಡಿರುವ ಒಳ್ಳೆಯ ಉದ್ಯೋಗದಲ್ಲೂ ಇರುವ ವಿದ್ಯಾವಂತ ಅದನ್ನು ಓದಿ ಅಥವಾ ಓದದೆಯೂ ಹಿಂದೆ ಮುಂದೆ ನೋಡದೇ ಇತರೆ ಇನ್ನೊಂದಷ್ಟು ಮಂದಿಗೆ ಬ್ಲೈಂಡಾಗಿ ಫ಼ಾರ್ವರ್ಡ್ ಮಾಡುತ್ತಾನೆ. ಅವನಿಗಿರುವ‌ ವಿದ್ಯೆ‌-ಬುದ್ದಿಯನ್ನು ಬಳಸಿಕೊಂಡು ತನಗೆ ಬಂದಿರುವ ಮೆಸೇಜ್ ನ ಸತ್ಯಾಸತ್ಯತೆ , ನೈಜತೆ ಅಥವಾ ಮೂಲದ ಅಧಿಕೃತತೆಯನ್ನು ಪರಿಶೀಲಿಸಿ, ಬಂದಿರುವುದು ಫ಼ೇಕ್ ಸುದ್ದಿಯೋ ಅಲ್ಲವೋ ಎಂದು ತಿಳಿಯುವಷ್ಟು‌ ಬುದ್ದಿಶಕ್ತಿ ಅವನಲ್ಲಿದ್ದರೂ , ಜೊತೆಗೆ ಆ ರೀತಿ ಫ಼ಾರ್ವರ್ಡ್‌ ಮಾಡುವುದರಿಂದ ಸಮಾಜಕ್ಕೆ ಸುಳ್ಳು ಸುದ್ದಿ ಹರಡಿ ಅಶಾಂತಿಯುಂಟಾಗಲಿದೆ ಎಂಬ ಸಣ್ಣ‌ಮಟ್ಟದ ಅರಿವಿದ್ದರೂ ಆತ ಅದನ್ನು ಶೇರ್ ಮಾಡುತ್ತಾನೆ.

Join WhatsApp Group

ಮತ್ತೊಬ್ಬ ಮೂರನೇ ಕ್ಲಾಸು ಓದಿರುವವನಲ್ಲಿ ವಿದ್ಯೆ ಕಡಿಮೆಯಿದ್ದರೂ ಆ‌ ಮೆಸೇಜು ನೋಡಿ ಅದರ ಸೂಕ್ಷ್ಮ ಅಂಶಗಳನ್ನು ತನ್ನ ಯೋಚನಾಶಕ್ತಿಗೆ ತಕ್ಕಂತೆ ಅರಿತು ಅದರಿಂದಾಗಬಹುದಾದ ಸಾಮಾಜಿಕ ದುಷ್ಪರಿಣಾಮಗಳನ್ನು ಕಾಮನ್ ಸೆನ್ಸ್ ನಿಂದ ಮನಗಂಡು ಅದನ್ನು ಡಿಲಿಟ್ ಮಾಡಿ ಸುಮ್ಮನಾಗುತ್ತಾನೆ.

ತನಗೆ ಬಂದಿರುವ ಸೂಕ್ಷ್ಮ ಸಂದೇಶವನ್ನು ಮುಂದಾಲೋಚನೆಯಿಲ್ಲದೇ ಫ಼ಾರ್ವರ್ಡ್ ಮಾಡಿದ ಡಬಲ್ ಡಿಗ್ರೀ ಮಾಡಿರುವ‌ವನಲ್ಲಿ‌ ಸಾಕಷ್ಟು ವಿದ್ಯೆ ಇದೆ, ಆದರೆ ಕಿಂಚಿತ್ತೂ ವಿವೇಕವಿಲ್ಲ.

ಆದರೆ ಜಾತಿ- ಧರ್ಮ‌ಗಳ ನಡುವೆ ಗಲಭೆಯೆಬ್ಬಿಸ ಬಹುದಾದ ಅಥವಾ ಸಾಮಾಜಿಕ‌ ಕ್ಷೋಭೆಗೆ ಕಾರಣವಾಗಬಹುದಾದ ಸಂದೇಶವನ್ನು ಮುಂಜಾಗ್ರತೆಯಿಂದ ಡಿಲಿಟ್ ಮಾಡಿದವನಲ್ಲಿ ವಿದ್ಯೆ ಇಲ್ಲ, ಆದರೆ‌ ವಿವೇಕವೆಂಬುದು ಸಾಕಷ್ಟಿದೆ. ಇವನು ನನ್ನ‌ ಪ್ರಕಾರ ಉನ್ನತ ವಿದ್ಯೆಯನ್ನು ಹೊಂದಿ ಉನ್ನತ ಹುದ್ದೆಯಲ್ಲಿರುವ ಬುದ್ದಿವಂತನಿಗಿಂತಲೂ ಹೆಚ್ಚು ಜ್ಞಾನಿ….ವಿವೇಕಿ .!

ಈಗ ಹೇಳಿ ? ಯಾವುದು ವಿವೇಕ…, ಯಾವುದು ವಿದ್ಯೆ ಹಾಗೂ ಸಮಾಜಕ್ಕೆ ಎಂತಹ ವಿದ್ಯೆ ಬೇಕೆಂದು ?

ಮರೆಯುವ ಮುನ್ನ

ನಾವಿಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಂಖ್ಯೆಯ ಫ಼ಾರ್ವರ್ಡೆಡ್ ಮೆಸೇಜು, ಎಡಿಟೆಡ್ ಮೆಸೇಜು, ಕೃತಕ ಬುದ್ದಿಮತ್ತೆ ( AI ) ಬಳಸಿ ಸೃಷ್ಟಿಸಿರುವ ಫೋಟೋ, ಇತ್ಯಾದಿಗಳನ್ನು‌ ನೋಡುತ್ತಲೇ ಇರುತ್ತೇವೆ. ಅವುಗಳಲ್ಲಿ‌ ಬಹುಪಾಲು ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಲಕ್ಷಾಂತರ ಜನರನ್ನು ತಲುಪಿ, ಬೇಡವೆಂದರೂ ನೂರಾರು ಬಾರಿ ಫ಼ಾರ್ವರ್ಡ್ ಆಗಿ ನಮಗೆ ಬರುತ್ತವೆ. ಅದರಲ್ಲೂ ಚುನಾವಣೆ, ಯುದ್ಧ, ಹತ್ಯೆ, ಕೋಮು ಗಲಭೆ, ಜಾತಿ ಸಂಘರ್ಷ, ಕೊರೋನಾ , ಸೆಲೆಬ್ರಿಟಿಗಳ ಸುದ್ದಿ , ಧಾರ್ಮಿಕ ಅವಹೇಳನ ಹಾಗೂ ರಾಜಕೀಯ ನಾಯಕರ ಹೇಳಿಕೆಗಳನ್ನು‌ ಉಲ್ಟಾ ಮಾಡಿ ಕೆರಳಿಸುವಂತೆ ಅರ್ಥ ಬರುವ ಫ಼ಾರ್ವರ್ಡೆಡ್ ಸಂದೇಶಗಳಲ್ಲಿ ಮುಕ್ಕಾಲು ವಾಸಿ ಎಡಿಟ್ ಮಾಡಿರುವ ಫ಼ೇಕು ಸಂದೇಶಗಳೇ ತುಂಬಿರುತ್ತವೆ. ಇತಿಹಾಸವನ್ನೇ ಬದಲಿಸುವ ಎಡಿಟೆಡ್ ಮೆಸೇಜುಗಳೂ ಸಾಕಷ್ಟು ಬರುತ್ತಲೇ ಇವೆ.

ಈ ರೀತಿ ಸಾಮಾಜಿಕ ಕ್ಷೋಭೆಯನ್ನುಂಟುಮಾಡುವ, ಸಮಾಜದಲ್ಲಿ ಜನರ ಸೂಕ್ಷ್ಮ ಭಾವನೆಗಳನ್ನು ಕೆರಳಿಸುವ, ತಪ್ಪುದಾರಿಗೆಳೆಯುವ ಫ಼ೇಕು ಸಂದೇಶಗಳನ್ನು ಸೃಷ್ಟಿಸಲೆಂದೇ ಆಯಾ ರಾಜಕೀಯ ಪಕ್ಷಗಳು, ಸಂಘಟನೆಗಳು, ಗುಂಪುಗಳು ಅಂತಹ ದೊಡ್ಡ ಕಾರ್ಖಾನೆಗಳನ್ನೇ ತೆರೆದಿಟ್ಟು ಒಂದಷ್ಟು ‌ಫ಼ೇಕ್ ತಜ್ಞರನ್ನು ಸಿಕ್ಕಾಪಟ್ಟೆ ಹಣ‌ ಕೊಟ್ಟು ಸಾಕುತ್ತಿರುತ್ತವೆ. ಇವರ ಕೆಲಸವೇ ಆಯಾ ಸಿದ್ದಾಂತಗಳಿಗೆ ವಿರುದ್ಧವಾದವರನ್ನು ಗುರಿಯಾಗಿಸಿ ಸುಳ್ಳು ಸುದ್ದಿಗಳನ್ನು ಸಮಾಜದಲ್ಲಿ ಹರಡಿ ಜನರಲ್ಲಿ ದ್ವೇಷ ಸೃಷ್ಟಿಸುವುದು. ಅಲ್ಲದೇ ಜನಸಾಮಾನ್ಯರ ಭಾವನೆಗಳನ್ನು ಕೆರಳಿಸಿ ಸಂದೇಶವನ್ನು‌ ಲಕ್ಷಾಂತರ ಜನರು‌ ಓದುವಂತೆ ಮಾಡುವುದು.

ನಮ್ಮ ಬಹಳಷ್ಟು ಜನರಲ್ಲಿ ಹಾಗೆ ಬಂದ ಮೆಸೇಜುಗಳನ್ನು ಫ಼್ಯಾಕ್ಟ್ ಚೆಕ್ ಮಾಡದೇ ತಮ್ಮ ಸಿದ್ದಾಂತ ಹಾಗೂ ಮನೋಭಾವಕ್ಕನುಗುಣವಾಗಿ ಫ಼ಾರ್ವರ್ಡ್ ಮಾಡುವ ವೀಕ್‌ನೆಸ್ ಚೆನ್ನಾಗಿ ಗೊತ್ತಿರುವುದರಿಂದಲೇ ಇವರೆಲ್ಲಾ ಹೀಗೆ ಸುಳ್ಳುಸುದ್ದಿಗಳನ್ನು ಯಥೇಚ್ಛವಾಗಿ ಹರಡುತ್ತಲೇ ಬಂದಿದ್ದಾರೆ.

ಈಗ ಮೊನ್ನೆ ಕಾಶ್ಮೀರದಲ್ಲಿ‌ ಉಗ್ರರು ಪ್ರವಾಸಿಗರ‌ ಮೇಲೆ ಗುಂಡಿನ ಮಳೆಗರೆದು ಇಪ್ಪತ್ತಾರು ಅಮಾಯಕರನ್ನು‌ ಹತ್ಯೆಗೈದ‌ ವಿಚಾರಕ್ಕೆ ಸಂಬಂಧಿಸಿದಂತೆ ಎಷ್ಟು ಫ಼ಾರ್ವರ್ಡೆಡ್ ಸಂದೇಶಗಳು, ವಿಡಿಯೋಗಳು‌ ಬರುತ್ತಿವೆಯೆಂದರೆ ಅದರ ನೈಜಾಂಶ ಅರಿಯದೇ ಲಕ್ಷಾಂತರ ಬಾರಿ ಅವು ಫ಼ಾರ್ವರ್ಡ್ ಆಗಿಬರುತ್ತಿವೆ. AI ತಂತ್ರಜ್ಞಾನ ಬಳಸಿ ಬದುಕಿರುವವರನ್ನೂ ಸಾಯಿಸಿರುವ ಫೋಟೋಗಳೂ ಬಂದಿವೆ. ಆದರೆ ಅಂತಹ ಸಂದೇಶಗಳ, ಚಿತ್ರಗಳ ವಸ್ತುಸ್ಥಿತಿ, ಒರಿಜಿನಾಲಿಟಿ ಅರಿಯದೇ ಅವುಗಳನ್ನು ಯಾವ್ಯಾವುದೋ ಕಾರಣಕ್ಕೆ ಹಂಚಿಕೊಳ್ಳುತ್ತಲೇ ನಾವೂ ಸಹಾ ಸಾಮಾಜಿಕ ‌ಭಯೋತ್ಪಾದನೆಗೆ ಕ್ಷೋಭೆಗೆ ಕಾರಣರಾಗುತ್ತಿದ್ದೇವೆ.

ನಾಡಿನಲ್ಲಿ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು‌ ನಿಜ‌. ಆದರೆ ವಿವೇಕವಿಲ್ಲದ ವಿದ್ಯೆ, ವಿನಯವಿಲ್ಲದ ವಿದ್ವತ್ತು, ಸಂಸ್ಕಾರವಿಲ್ಲದ ಜ್ಞಾನ, ಸಾಮಾನ್ಯಜ್ಞಾನವಿಲ್ಲದ ಅಧಿಕಾರ….ಇವೆಲ್ಲವೂ ಸಮಾಜದ ಪಾಲಿಗೆ ನಾಯಿಮೊಲೆ ಹಾಲಿದ್ದಂತೆ !!

ಪ್ರೀತಿಯಿಂದ…..

ಹಿರಿಯೂರು ಪ್ರಕಾಶ್.

  • TDR ಹಗರಣ : 9 ಕಡೆಗಳಲ್ಲಿ ED ದಾಳಿ, ದಾಖಲೆಗಳ ಪರಿಶೀಲನೆ
    by Team Varthaman
    May 23, 2025
  • ಮೇ 24 ರಂದು ಸಿಇಟಿ ಫಲಿತಾಂಶ ಪ್ರಕಟ
    by Team Varthaman
    May 23, 2025
  • ರಾಜ್ಯದಲ್ಲಿ 51,000 ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರದ ಒಪ್ಪಿಗೆ
    by Team Varthaman
    May 23, 2025
  • IPL ಹೆಸರಿನಲ್ಲಿ ಯುವ ಕ್ರಿಕೇಟಿಗನಿಗೆ 23 ಲಕ್ಷ ವಂಚನೆ
    by Team Varthaman
    May 23, 2025
  • 180 ಸರ್ಕಾರಿ ಆಸ್ಪತ್ರೆಗಳಿಂದ ಜನೌಷಧಿ ತೆಗೆದುಹಾಕಲು ಸರ್ಕಾರ ಚಿಂತನೆ: ಸಚಿವ ದಿನೇಶ್ ಗುಂಡೂರಾವ್
    by Team Varthaman
    May 23, 2025

ಲೋಕಾಯುಕ್ತ ದಾಳಿ: ಪರಾರಿಯಾದ ಪೊಲೀಸ್ ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್‌ ಸೇರಿ ಐವರು ಬಂಧನ

ಭಾರತ-ಪಾಕ್‌ ತಕ್ಷಣವೇ ಕದನ ವಿರಾಮ ಘೋಷಣೆಗೆ ಸಮ್ಮತಿಸಿವೆ: ಟ್ರಂಪ್‌ ಟ್ವೀಟ್

ಮೈಸೂರು ನಗರದ ವಿವಿಧೆಡೆ ಬಾಂಬ್ ಇಟ್ಟಿದ್ದೇವೆ ಎಂದು ಇ-ಮೇಲ್ ಬೆದರಿಕೆ

2025ರ ದ್ವಿತೀಯ ಪಿಯುಸಿ ಪರೀಕ್ಷೆ–3: ಪುನರಾವರ್ತನೆ ಹಾಗೂ ಅಂಕ ಸುಧಾರಣೆಗೆ ಅರ್ಜಿ ಆಹ್ವಾನ

ಬಾನು ಮುಷ್ತಾಕ್ ‘ಹಸೀನಾ’ ಕೃತಿಗೆ ಬೂಕರ್ ಪ್ರಶಸ್ತಿಯ ಗರಿ

TAGGED:Articlegreat scholarsKannada Articlelatestnewsscholars
Share This Article
Facebook Email Print
Leave a comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
ArticlesTrending

ಚಹಾ ಮತ್ತು ಉತ್ತರ ಕರ್ನಾಟಕ

Team Varthaman Team Varthaman May 21, 2025
ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ
IPL ಮ್ಯಾಚ್ ಫಿಕ್ಸಿಂಗ್ ಭೀತಿಗೆ BCCI ಎಚ್ಚರಿಕೆ – ಹೈದ್ರಾಬಾದ್ ಉದ್ಯಮಿಯ ವಿರುದ್ಧ ಶಂಕೆ
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
ಭಾರತ-ಪಾಕ್ ನಡುವೆ ಉದ್ವಿಗ್ನತೆ: ಚಾರ್ ಧಾಮ ಯಾತ್ರೆಯ ಹೆಲಿಕಾಪ್ಟರ್ ಸೇವೆ ಸ್ಥಗಿತ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • National News
  • Politics
  • IPL 2025
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?