By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
    ಸ್ವಭಾವದ ಸ್ವರೂಪ
    May 3, 2026
    “ರೈಟ್ ಟು ಡ್ರೈ”
    May 3, 2026
    ಸುಡುವ ಸೂರ್ಯನಿಗೊಂದು ಪತ್ರ
    May 3, 2026
  • Sports
  • National
  • International
  • Crime
Reading: ಜಾತಿ ಜನಗಣತಿ : ಸಿಎಂಗೆ ಬಿಸಿತುಪ್ಪ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Bengaluru > ಜಾತಿ ಜನಗಣತಿ : ಸಿಎಂಗೆ ಬಿಸಿತುಪ್ಪ
BengaluruKarnatakaPoliticsTrending

ಜಾತಿ ಜನಗಣತಿ : ಸಿಎಂಗೆ ಬಿಸಿತುಪ್ಪ

Team Varthaman
Last updated: April 19, 2025 2:58 PM
Team Varthaman
Published: April 19, 2025
Share
SHARE
  • ಏ.22-ಮೇ 2 ರ ಸಂಪುಟ ಸಭೆಯಲ್ಲಿ ತಾರ್ಕಿಕ ಆಂತ್ಯ ?

ಮೈಸೂರು:ಒಕ್ಕಲಿಗ – ಲಿಂಗಾಯತ ಸಚಿವರ ಒತ್ತಡದ ಹಿನ್ನೆಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಾದಾಸ್ಪದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿ ಜನಗಣತಿ) ವರದಿಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಿದ್ದ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.

ಈ ಕುರಿತು ಏಪ್ರಿಲ್ 22 ರಂದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತು ಮೇ 2 ರಂದು ಬೆಂಗಳೂರುದಲ್ಲಿ ನಡೆಯುವ ಸಚಿವ ಸಂಪುಟ ಸಭೆಗಳಲ್ಲಿ ಇನ್ನೂ ಎರಡು ಸುತ್ತಿನ ಚರ್ಚೆ ನಡೆಸಿ ಜಾತಿ ಜನಗಣಿತಿಗೆ ತಾರ್ಕಿಕ ಅಂತ್ಯ ಹಾಡಲು ತೀರ್ಮಾನಿಸಿದ್ದಾರೆ.

ಕಳೆದ ಗುರುವಾರ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಸಚಿವರೊಬ್ಬರು ವರ್ತಮಾನಕ್ಕೆ ಮಾಹಿತಿ ನೀಡಿ , ಜಾತಿ ಜನಗಣತಿ ವರದಿಯ ಕುರಿತು ಸಂಪುಟದಲ್ಲಿ ಗಂಭೀರವಾದ ಭಿನ್ನಾಭಿಪ್ರಾಯವಿತ್ತು ಎಂದು ತಿಳಿಸಿದ್ದಾರೆ.

Join WhatsApp Group

ಲಿಂಗಾಯತ/ವೀರಶೈವ ಮತ್ತು ಒಕ್ಕಲಿಗ ಸಮುದಾಯದ ಸಚಿವರು ಈ ವರದಿಯನ್ನು “ವೈಜ್ಞಾನಿಕವಲ್ಲ” ಎಂದು ಗಾಢವಾಗಿ ವಿರೋಧಿಸಿದ್ದಾರೆ, ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮುಸ್ಲಿಂ ಸಮುದಾಯದ ಸಚಿವರು ತಕ್ಷಣವೇ ವರದಿಯನ್ನು ಯಾವುದೇ ಬದಲಾವಣೆಯಿಲ್ಲದೇ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ. ಚರ್ಚೆಯ ವೇಳೆ ಗರಿಗೆದರಿದ ವಾಗ್ಯುದ್ಧ ಗಳು ನಡೆದಿದರೂ ಮುಖ್ಯಮಂತ್ರಿ ಮಾತ್ರ ಈ ವಿಚಾರದಲ್ಲಿ ತುಟಿಬಿಚ್ಚಿ ಅಭಿಪ್ರಾಯ ಹೇಳದೇ ಎಲ್ಲಾ ಸಚಿವರಿಗೂ ತಮ್ಮ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ನೀಡುವಂತೆ ಸೂಚಿಸಿರುವುದು ರಾಜಕೀಯದ ಜಾಣ ನಡೆಯನ್ನು ಎತ್ತಿ ತೋರಿಸುತ್ತದೆ

ಆ ಸಚಿವರ ಹೇಳಿಕೆಯಂತೆ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಸಚಿವರು ವರದಿಯಲ್ಲಿರುವ ಜನಸಂಖ್ಯಾ ಅಂಕಿ ಅಂಶಗಳು ಸಂಪೂರ್ಣ ತಪ್ಪಾಗಿದೆ ಎಂದು ಹೇಳಿ ಹೊಸ ಸಮೀಕ್ಷೆ ನಡೆಸುವಂತೆ ಒತ್ತಾಯಿಸಿದ್ದಾರೆ. ಈ ವರದಿ 10 ವರ್ಷಗಳ ಹಿಂದಿನದ್ದು .

ಈ ಅವಧಿಯಲ್ಲಿ ದೊಡ್ಡ ಮಟ್ಟದ ಜನಸಾಂಖ್ಯಿಕ ಬದಲಾವಣೆಗಳಾಗಿವೆ ಎಂಬುದನ್ನು ಅವರುಗಳು ಸೂಚಿಸಿದ್ದಾರೆ. ಇಂತಹ “ಅವೈಜ್ಞಾನಿಕ” ವರದಿಯನ್ನು ಜಾರಿಗೆ ತರಲು ಪ್ರಯತ್ನಿಸುವುದು ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಗಳಲ್ಲಿ ಹಾನಿಕಾರಕವಾಗಬಹುದು ಎಂಬ ಎಚ್ಚರಿಕೆಯನ್ನು ಅವರುಗಳು ನೀಡಿ,
ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳ ವಿರೋಧ ಕಟ್ಟಿ ಕೊಂಡರೆ ಪಕ್ಷಕ್ಕೆ ತೀವ್ರ ಪರಿಣಾಮ ಉಂಟುಮಾಡಬಹುದು” ಎಂಬುದಾಗಿ ಅವರು ಹೇಳಿದರು.

ಕೆಲವರು ಎಲ್ಲಾ ಪ್ರಮುಖ ಸಮುದಾಯಗಳ ಪ್ರತಿನಿಧಿಗಳೊಂದಿಗೆ ತಜ್ಞ ಸಮಿತಿಯನ್ನು ರಚಿಸಿ ವರದಿಯನ್ನು ಪರಿಶೀಲಿಸುವುದಾಗಿ ಸಲಹೆ ನೀಡಿದರೂ, ಒಕ್ಕಲಿಗ ಮತ್ತು ಲಿಂಗಾಯತ ಸಚಿವರು ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿ ಹೊಸ ಸಮೀಕ್ಷೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಎರಡು ಗಂಟೆಗಳ ಚರ್ಚೆಯ ನಂತರ, ಈ ಕುರಿತ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಏಪ್ರಿಲ್ 22 ಮತ್ತು ಮೇ 2ರಂದು ನಡೆಯಲಿರುವ ವಿಶೇಷ ಸಂಪುಟ ಸಭೆಗಳಲ್ಲಿ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ. ವರದಿಯನ್ನು ಯಾವುದೇ ಬದಲಾವಣೆ ಇಲ್ಲದೇ ಅನುಮೋದಿಸಲು ಮುಖ್ಯಮಂತ್ರಿಗಳು ನಿರೀಕ್ಷೆ ಇಟ್ಟಿದ್ದರೂ, ಸಚಿವರುಗಳಿಂದ ಎದುರಾದ ತೀವ್ರ ವಿರೋಧದಿಂದಾಗಿ ಜಾತಿ ಜನಗಣತಿ ಜಾರಿ ಅಸಾಧ್ಯವಾಯಿತು. ಇದನ್ನು ಓದಿ –ಸಿದ್ದರಾಮಯ್ಯ ಕಾಲದಲ್ಲಿ ಬ್ರಾಹ್ಮಣರು ಸಾಫ್ಟ್‌ ಟಾರ್ಗೆಟ್‌: ಪ್ರತಾಪ್‌ ಸಿಂಹ

ಅಂತಿಮವಾಗಿ ಈ ವರದಿ ಜಾರಿಯಾದರೂ ಕಷ್ಟ. ಜಾರಿ ಮಾಡದಿದ್ದರೂ ಕಷ್ಟ. ಒಟ್ಟಾರೆ ಮುಖ್ಯಮಂತ್ರಿಗಳಿಗೆ ಬಿಸಿ ತುಪ್ಪವಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಮಾಡುವ ಹಲವಾರು ತಂತ್ರಗಳು ಯಾವ ರೀತಿ ಫಲಿಸುತ್ತವೆ ಎನ್ನುವುದನ್ನು ಕಾದು ನೋಡಬೇಕು.

  • ದೌರ್ಜನ್ಯ ಆರೋಪ: ವಚನಾನಂದ ಶ್ರೀ ವಿರುದ್ಧ ಪೋಕ್ಸೊ ಪ್ರಕರಣ
    by Team Varthaman
    May 13, 2026
  • ಹೃದಯಾಘಾತದಿಂದ ನಟ ದಿಲೀಪ್ ರಾಜ್ ನಿಧನ
    by Team Varthaman
    May 13, 2026
  • ರಾಜ್ಯದಲ್ಲಿ ಜಲಕಂಟಕ :ಕೋಡಿ ಶ್ರೀ ಭವಿಷ್ಯ
    by Team Varthaman
    May 12, 2026
  • ಕೆಪಿಎಸ್‌ಸಿ ಹಾಳಾಗಲು ಕಾಂಗ್ರೆಸ್ ಕಾರಣ – ಹೆಚ್.ಡಿ.ಕೆ
    by Team Varthaman
    May 12, 2026
  • ಅಕ್ರಮ ಆರೋಪ: NEET ಪರೀಕ್ಷೆ ರದ್ದು
    by Team Varthaman
    May 12, 2026
ಕರ್ನಾಟಕ ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಎಂ.ಎಸ್. ಆತ್ಮಾನಂದ ನೇಮಕ
ಮಂಡ್ಯ KSRTC ಬಸ್ ಡಿಕ್ಕಿ – ಇಬ್ಬರು ಬೈಕ್ ಸವಾರರ ದುರ್ಮರಣ
ರಸ್ತೆ ಅಭಿವೃದ್ಧಿ: ಟನಲ್ ರಸ್ತೆ, ರಿಂಗ್‌ರೋಡ್‌ ಸೇರಿದಂತೆ 7 ಯೋಜನೆಗಳ ಕುರಿತು ಚರ್ಚೆ
ಕೇಂದ್ರ ಸರ್ಕಾರದಿಂದ ₹25,000 ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
RTE ಅಡಿಯಲ್ಲಿ ವಿಶೇಷ ದಾಖಲಾತಿ ಆಂದೋಲನಕ್ಕೆ ಆದೇಶ
TAGGED:breakingnewsCaste censusKarnataka GovtlatestnewsPoliticsSiddaramaiah
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
ChikkaballapurCrimeKarnatakaTrending

ಕಾರು ಚಾಲಕನ ಆತ್ಮಹತ್ಯೆ: ಡಾ. ಕೆ. ಸುಧಾಕರ್ ಸೇರಿದಂತೆ ಮೂವರ ವಿರುದ್ಧ FIR

Team Varthaman
Team Varthaman
August 8, 2025
ಅಕ್ರಮ ಗಣಿಗಾರಿಕೆ ಪ್ರಕರಣ : ಜನಾರ್ದನ್ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ
ಏಷ್ಯಾಕಪ್ ಪಂದ್ಯದ ಶುಲ್ಕವನ್ನು ಪಹಲ್ಗಾಮ್ ಸಂತ್ರಸ್ತರಿಗೆ ದೇಣಿಗೆ ನೀಡಿದ ಸೂರ್ಯಕುಮಾರ್
ಮೈಸೂರು: 14.1 ಕೆ.ಜಿ ಗಾಂಜಾ ವಶ — ಓರ್ವನ ಬಂಧನ
ಬ್ರಹ್ಮಾಂಡದ ಮೂಲ ಶಕ್ತಿ ಕೂಷ್ಮಾಂಡ ದೇವಿ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?