ತಿರುವನಂತಪುರಂ: ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಚಿನ್ನದ ಕಳ್ಳತನ ಪ್ರಕರಣ ಹೊರಬಿದ್ದಿದೆ. ದ್ವಾರಪಾಲಕ ವಿಗ್ರಹಕ್ಕೆ ಹೊದಿಸಿದ್ದ ಒಟ್ಟು 42.8 ಕೆಜಿ ತೂಕದ ಚಿನ್ನದ ಕವಚದಲ್ಲಿ 4.5 ಕೆಜಿ ಚಿನ್ನ ನಾಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2019ರಲ್ಲಿ ದೇವರ ವಿಗ್ರಹಗಳಿಗೆ ಪುನರ್ಲೇಪನ ಕಾರ್ಯ ನಡೆದಿತ್ತು. ಆ ಸಮಯದಲ್ಲಿ ತಾಮ್ರದ ವಿಗ್ರಹಗಳಿಗೆ ಹೊದಿಸಿದ್ದ ಚಿನ್ನದ ಕವಚದಲ್ಲಿ ವ್ಯತ್ಯಾಸ ಉಂಟಾಗಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಹಳೆಯ ತಾಮ್ರ ಹಾಗೂ ಚಿನ್ನದ ಲೇಪನ ಮೂರ್ತಿಗಳ ತೂಕ ಪರಿಶೀಲನೆ ವೇಳೆ ಅಂತರ ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ, ಹೈಕೋರ್ಟ್ನ ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ ಮತ್ತು ಕೆ.ವಿ. ಜಯಕುಮಾರ್ ಅವರ ವಿಭಾಗೀಯ ಪೀಠವು ಪ್ರಕರಣ ಗಂಭೀರವೆಂದು ಪರಿಗಣಿಸಿ ಸ್ಥಳೀಯ ಪೊಲೀಸರಿಗೆ ತುರ್ತು ಮತ್ತು ಸಮಗ್ರ ತನಿಖೆ ನಡೆಸುವಂತೆ ಆದೇಶಿಸಿದೆ.