ಮಂಗಳೂರು: ಮನೆಯ ನೆಲದಲ್ಲಿ ಬಿಸಾಡಿದ್ದ ಬೀಡಿ ತುಂಡು ನುಂಗಿದ ಪರಿಣಾಮ 10 ತಿಂಗಳ ಶಿಶುವೊಂದು ದುರ್ಮರಣಕ್ಕೊಳಗಾದ ಘಟನೆ ಮಂಗಳೂರಿನ ಅಡ್ಯಾರ್ನಲ್ಲಿ ನಡೆದಿದೆ.
ಬಿಹಾರ ಮೂಲದ ದಂಪತಿಗಳಾದ ಲಕ್ಷ್ಮಿ ದೇವಿ ಮತ್ತು ಅವರ ಗಂಡನ ಪುತ್ರ ಅನೀಶ್ ಎಂಬ 10 ತಿಂಗಳ ಮಗುವು ಈ ದುರ್ಘಟನೆಯಿಂದ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ಶಿಶು ನುಂಗಿದ ಬೀಡಿ ತುಂಡು ಗಂಟಲಲ್ಲಿ ಸಿಲುಕಿದ ಪರಿಣಾಮ ತಕ್ಷಣವೇ ಅಸ್ವಸ್ಥಗೊಂಡು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.
ಮಕ್ಕಳಿರುವ ಮನೆಗಳಲ್ಲಿ ಧೂಮಪಾನ ಮಾಡಿದ ಬಳಿಕ ಬಿಸಾಡುವ ವಸ್ತುಗಳ ಬಗ್ಗೆ ಎಚ್ಚರ ವಹಿಸಬೇಕೆಂಬುದು ಈ ಘಟನೆಯ ಮೂಲಕ ಮತ್ತೆ ಸಾಬೀತಾಗಿದೆ.
ಈ ಕುರಿತು ಮಗುವಿನ ತಾಯಿ ಲಕ್ಷ್ಮೀ ದೇವಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, “ಇದಕ್ಕೂ ಮೊದಲು ಮನೆ ಒಳಗೆ ಬೀಡಿ ತುಂಡು ಬಿಸಾಕಬೇಡವೆಂದು ಹಲವು ಬಾರಿ ಎಚ್ಚರಿಸಿದ್ದರೂ ಗಂಡನು ಅಲಕ್ಷ್ಯ ವಹಿಸಿದ್ದ. ಅದರ ಫಲವಾಗಿ ನನ್ನ ಮಗುವು ಪ್ರಾಣ ಕಳೆದುಕೊಂಡಿದೆಯೆಂದು” ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹೇಮಾವತಿ ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಹೆಚ್ಚಳ
ಸ್ಥಳೀಯ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.