By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Politics
    Politics
    Politics is the art of looking for trouble, finding it everywhere, diagnosing it incorrectly and applying the wrong remedies.
    Show More
    Top News
    Latest News
  • Articles
    ArticlesShow More
    ನಾನು ಕಂಡಂತೆ ಜೀವನ ಶೈಲಿಯಲ್ಲಿ ಬದಲಾವಣೆ
    August 3, 2025
    ಪಾರಂಪರಿಕ ಹಣ್ಣು ಬೇಲದ ಉಪಯೋಗಗಳು
    August 2, 2025
    ಕಣ್ಣಿನ ಮೇಕಪ್ ಬದಿಗೊತ್ತಿ ಕಣ್ಣನ್ನು ಕಾಪಾಡಿ
    August 1, 2025
    ದೇಶಾದ್ಯಂತ ವ್ಯಸನ ಮುಕ್ತ ಜಾಗೃತಿ ಮೂಡಿಸಿದ ಶ್ರೀಗಳು | ಆಗಸ್ಟ್ 01 ವ್ಯಸನ ಮುಕ್ತ ದಿನ
    August 1, 2025
    ನಾಗರ ಚೌತಿ ಮತ್ತು ಪಂಚಮಿ
    July 28, 2025
  • Sports
  • National
  • International
  • Crime
  • Contact Us
Reading: ಯಾವ ಮೋಹನ‌ ಮುರಳಿ ಕರೆಯಿತೋ…..!
Share
Font ResizerAa
VarthamanVarthaman
  • Home
  • Karnataka
  • Politics
  • Articles
  • Sports
  • National
  • International
  • Crime
  • Contact Us
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Politics
  • Articles
  • Sports
  • National
  • International
  • Crime
  • Contact Us
Follow US
Varthaman > Blog > Articles > ಯಾವ ಮೋಹನ‌ ಮುರಳಿ ಕರೆಯಿತೋ…..!
Articles

ಯಾವ ಮೋಹನ‌ ಮುರಳಿ ಕರೆಯಿತೋ…..!

Team Varthaman
Last updated: July 26, 2025 4:34 am
Team Varthaman Published July 26, 2025
Share
SHARE

ಈ ನಮ್ಮ‌ ಮನಸ್ಸು ಎಂಥಾ ವಿಚಿತ್ರ ಅಂದ್ರೆ ಸದಾ‌ ನಮ್ಮ‌ಜೊತೆಯಲ್ಲೇ ನಮ್ಮೆದುರೇ ಇರುವವರಿಗಿಂತ ದೂರದಲ್ಲೆಲ್ಲೋ ಇರುವವರನ್ನು ನೆನೆದು ಒಮ್ಮೊಮ್ಮೆ ತುಂಬಾ ಭಾವುಕವಾಗಿ ಬಿಡುತ್ತೆ.

ಹಾಂ…ದೂರದಲ್ಲಿರುವವರೆಂದರೆ ಅವರು ನಮಗೆ ಚೆನ್ನಾಗಿ ಗೊತ್ತಿರಲೇಬೇಕೆಂದೇನೂ‌ ಅಲ್ಲ ಅಥವಾ ಅವರು ನಮ್ಮ ಬಂಧುಗಳು ಸ್ನೇಹಿತರೂ ಆಗಬೇಕೆಂದೇನೂ ಇಲ್ಲ. ಎಲ್ಲೋ ನೋಡಿದ, ಕೇಳಿದ ಅಥವಾ ಇದುವರೆಗೂ ನೋಡಿಯೇ‌ ಇಲ್ಲದ ವ್ಯಕ್ತಿಗಳೂ, ಅವರ ವ್ಯಕ್ತಿತ್ವಗಳ ಒಂದು ಸಣ್ಣ‌ ನೆನಪಿನ‌ ಫ಼್ಲಾಷ್ ಸಹಾ ನಮ್ಮೊಳಗೆ ಒಂಥರಾ ಪಾಸಿಟೀವ್ ವೈಬ್ಸ್ ಹುಟ್ಟುಹಾಕಬಲ್ಲದು !

ಅದೆಂತಹಾ ಪಾಸಿಟೀವ್ ವೈಬ್ಸ್ ಗಳೆಂದರೆ ಜೀವನದಲ್ಲಿ ನಿರಾಶೆಯ ಕ್ಷಣಗಳೇ ಕಣ್ಣೆದುರಿಗಿದ್ದಾಗ, ನೋವುಗಳೇ ಸುತ್ತುವರೆದಾಗ, ಬದುಕಿನ ನಿತ್ಯ ಜಂಜಾಟಗಳೇ ಜಡಿದು ಕೂರಿಸಿರುವಾಗ, ನಮ್ಮವರೇ ನಮಗೆ‌ ಹಿತಶತ್ರುಗಳೆಂದೆನಿಸಿದಾಗ , ಬದುಕಲ್ಲಿ ಅಂದುಕೊಂಡ ಯಾವುದೂ ಕೈ‌ಹಿಡಿಯದೇ ಹೋದಾಗ, ಹತ್ತಿರದವರಿಗೇ ನೀವೇನೆಂದು ಅರ್ಥವಾಗದಾಗ, ನಂಬಿದವರೇ ಬೆನ್ನ‌ಹಿಂದೆ ತಿವಿದಾಗ ಅಥವಾ ಇದಾವುದಲ್ಲದಿದ್ದರೂ ತಥಾಕಥಿತ ಬದುಕಿನ ಏಕತಾನತೆಯಿಂದ ಕಿಂಚಿತ್‌ ವಿಮುಖನಾಗಿ ನೋಡಿದಾಗ, ಆಕಸ್ಮಾತ್ ಮನದೊಳಗೆ ಮೂಡುವ ಇಂತಹ ವ್ಯಕ್ತಿಗಳ ನೆನಪುಗಳು, ಯೋಚನೆಗಳು, ಅಥವಾ ಅಂದುಕೊಳ್ಳದೇ ಮೂಡಬಹುದಾದ ಸ್ಮರಣೆಯೇ ನಮ್ಮೊಳಗೆ ಈ ಎಲ್ಲಾ ದುಗುಡಗಳನ್ನೂ ಮೀರಿ ಎಂಥಾದ್ದೋ ಒಂದು ಧನಾತ್ಮಕ ಸಂವೇದನೆಗಳನ್ನು ಅನಾಮತ್ತು ಹುಟ್ಟುಹಾಕಬಲ್ಲದು …ಒಂಥರಾ ಬಿಸಿಲಿನ ಧಗೆಯಲ್ಲಿ ಬೆವರಿಳಿಸಿ ಕೂತವನಿಗೆ ಹಿತವಾದ ತಂಗಾಳಿ‌ ಬೀಸಿದಂತೆ !

Join WhatsApp Group

ಅಂದ ಮಾತ್ರಕ್ಕೆ ಇದು ದಿನವಿಡೀ ಹತ್ತಿರವಿರುವವರ ಬಗೆಗಿನ ತಾತ್ಸಾರವಾಗಲೀ , ಚಲ್ತಾ ಹೈ ಆಟಿಟ್ಯೂಡು ಅಂತಾಗಲೀ ಅಥವಾ ಎಲ್ಲೋ ಒಮ್ಮೊಮ್ಮೆ‌ ಅಪರೂಪಕ್ಕೆ ಸಿಗುವವರ ಮೇಲೆ‌ ಸಹಜ ಕೌತುಕದಿಂದ ಹುಟ್ಟಿಕೊಳ್ಳಬಹುದಾದ ಔಪಚಾರಿಕ ಭಾವನೆಗಳಾಗಲೀ ಅಲ್ಲ. ಇದೊಂಥರಾ ಅವ್ಯಕ್ತ ಆಲಾಪನೆಯಂತೆ, ಹೃದಯದೊಳಗೆ ಅವಿತುಕೊಂಡೇ ಇರಬಹುದಾದ ಅನಿಸಿಕೆಗಳಂತೆ , ಅಂದುಕೊಂಡಾಗಲೆಲ್ಲಾ ಆವಿರ್ಭವಿಸುವ ಆಮೋದದಂತೆ ಮನದೊಳಗೆ ಆ‌ ಕ್ಷಣದ ಜೀವಸೆಲೆಯನ್ನು ಉದ್ದೀಪನಗೊಳಿಸಬಲ್ಲ‌ ” ಸವಿ ಚೇತನ ” ವುಳ್ಳದ್ದು, ಪವಿತ್ರವಾದದ್ದು , ಪಾರಮಾರ್ಥಿಕವಾದದ್ದು ಅಥವಾ ಯಾವ ಅಕ್ಷರಗಳ ಅಂಕೆಗೂ ಸಿಗದಿರುವ ಶ್ರೇಷ್ಠ ಭಾವನೆಗಳಂಥಾದ್ದು.

ಹಾಗಾದರೆ ನಮ್ಮ‌ನಡುವೆ ಇರುವವರಲ್ಲಿ‌ ಇಲ್ಲದೇ ಇರುವ , ಹೀಗೆ ಎಲ್ಲೋ ಬೇರೆಡೆಯಿರುವವರಲ್ಲಿ ಇರಬಹುದಾದ ಈ ತೆರನಾದ ಜೀವನೋತ್ಸಾಹದ ಚುಳುಕು ಸೃಜಿಸಬಲ್ಲ ಶಕ್ತಿ ಅದಾವುದು ? ಅದಾವ ಮೋಡಿಯದು ? ಅದಾವ ಸೆಳೆತವದು…?

ಅದೇನು‌ ಪ್ರೀತಿಯೋ, ಪ್ರೇಮವೋ ? ಸ್ನೇಹವೋ , ಮೋಹವೋ, ಅನುರಾಗವೋ , ಅಭಿಮಾನವೋ, ಆರಾಧನೆಯೋ..?

ಚಕ್ಕನೇ ಹೇಳಲಾಗೋಲ್ಲಾರೀ….!

ಅದು ಅವರವರ ಭಾವನೆಗಳಿಗೆ ತಕ್ಕಂತೆ , ಆಲೋಚನೆಗಳಿಗೆ ನಿಲುಕುವಂತೆ ಇವುಗಳಲ್ಲಿ ಯಾವುದಾದರೂ ಆಗಿರಬಹುದು ಅಥವಾ ಇದಾವುವೂ ಅಲ್ಲದೆಯೂ ಇರಬಹುದು. ಮನುಷ್ಯನ ಭಾವನೆಗಳ ಅಭಿವ್ಯಕ್ತಿಗೆ ಸಿಗದ ಅನೇಕಾನೇಕ ಸೂಕ್ಷ್ಮ ಸಂಗತಿಗಳಲ್ಲಿ ಒಂದಾಗಿರಬಹುದು.

ಇದರ ಅಸಲಿಯತ್ತೇನು ಗೊತ್ತಾ..? ಈ ಫ಼ೀಲಿಂಗುಗಳು ಕೇವಲ ಭಾವಜೀವಿಗಳಲ್ಲಿ ಅಥವಾ ಭಾವುಕತೆಯ ಬಕ್ರಾಗಳಲ್ಲಿ ಮಾತ್ರ ಇರುತ್ತವೆ ಅಂತಲ್ಲ. ಬದುಕಿನ‌ ಯಾವುದೋ ಒಂದು‌ ಹಂತದಲ್ಲಿ ಈ ರೀತಿಯ ಸ್ಥಿತಿಗೆ ಮನುಷ್ಯನ ಮನಸ್ಸು ತಾನಾಗಿಯೇ ತೆರೆದುಕೊಂಡಿರ ಬಲ್ಲದು. ಅದಕ್ಕೆ ಭಾವುಕ- ನಿರ್ಭಾವುಕ ಎಂಬ ಬೇಧವಿರುವುದಿಲ್ಲ. ಭಾವುಕರು ಅದನ್ನು ಗುರುತಿಸಬಲ್ಲರಾದರೆ ನಿರ್ಭಾವುಕರಿಗೆ ಅಥವಾ‌ ನಿತ್ಯ ಜೀವನದ ತಾಪತ್ರಯಗಳಲ್ಲೇ ತಾನು‌ ಮುಳುಗಿದ್ದೇನೆಂದು‌ ಭ್ರಮಿಸುವವರಿಗೆ ಅದರ ಸೂಕ್ಷ್ಮತೆಯ ರಿಚ್, ಟಚ್ ಆಗದೇ ಹೋಗಬಹುದು.

ಕೇವಲ ನೆನಪು ಮಾತ್ರದಿಂದಲೇ ಆ ರೀತಿಯ‌ ಜೀವಸೆಲೆ ಉಕ್ಕಿಸಬಲ್ಲ‌ ವ್ಯಕ್ತಿತ್ವವುಳ್ಳವರು ಇಂಥವರೇ ಎಂದು ಆಗಬೇಕಿಲ್ಲ, ಅಥವಾ ಅಂಥವರು ಜೀವಂತವಾಗಿಯೇ ಇರಬೇಕಿಲ್ಲ. ಅಸಲು ನಮ್ಮಿಂದ ಎಲ್ಲೋ ಬಹುದೂರದಲ್ಲಿರುವ ಚೇತನಗಳು, ನಾವು‌ ನೇರವಾಗಿ ನೋಡಿಯೇ ಇರದ‌, ಭೇಟಿಯಾಗದೇ ಇರುವ ವ್ಯಕ್ತಿಗಳು‌- ಶಕ್ತಿಗಳು ಹೇಗಿದ್ದರೇನು ಅಲ್ಲವೇ..? ಅದು ಅಮೂರ್ತವಾಗಿದ್ದರೂ ಅವರಿಗೆಂದೇ‌ ಮನದಲ್ಲೆಲ್ಲೋ ಒಂದೆಡೆ ವಿಶೇಷ ಜಾಗ ಮನೆ ಮಾಡಿರಬಲ್ಲದು.

ಅವರ ನೆನಪು- ಸ್ಮರಣೆ ಮಾತ್ರ ನಮ್ಮೊಳಗೆ‌ ಒಂದು ವಿನೂತನ ಸಂವೇದನೆಯನ್ನು‌ , ಅವ್ಯಕ್ತವಾದ ಸಂತೃಪ್ತಿಯನ್ನು , ಬರಡಾದ ಹೃದಯಕ್ಕೆ ಪ್ರೀತಿ ಪ್ರೇಮಗಳ ಅಥವಾ ಪೂಜ್ಯ ಆರಾಧನೆಗಳ ಜೀವನೋತ್ಸಾಹಗಳ ಜೀವಸೆಲೆಯನ್ನು ಹುಟ್ಟುಹಾಕಬಲ್ಲದ್ದಾದರೆ……

ಅದಕ್ಕಿಂತ ಮತ್ತೇನು‌ ಬೇಕು…. ?

ಮರೆಯುವ ಮುನ್ನ

ಜೀವನದಲ್ಲಿ ಇರುವುದಕ್ಕಿಂತಲೂ ಇಲ್ಲದಿರುವ ಕಡೆಗೆ, ಹತ್ತಿರವಿರುವವರಿಗಿಂತಲೂ ದೂರದಲ್ಲಿರುವವರೆಡೆಗೆ ನಮ್ಮೊಳಗೆ ಉಂಟಾಗುವ ಈ ವಿಚಿತ್ರ ಭಾವನೆ ಗಳಿಗಿರಬಹುದಾದ ಸೆಳಕುಗಳನ್ನು ಹುಡುಕುವುದು ಒಂಥರಾ ನದಿಮೂಲ‌ ಋಷಿಮೂಲ ಹುಡುಕಿದಂತೆ. ! ಅವೊಂಥರಾ ನಮಗೆ ಗೊತ್ತಿದ್ದೂ‌ ಗೊತ್ತಿಲ್ಲದಂತೆ, ಅರಿವಿದ್ದೂ ಅರಿವಿಲ್ಲದಂತೆ ಇರಬಹುದಾದ ನಿರಾಮಯ ಸ್ಥಿತಿ .

ಕೆಲವೊಮ್ಮೆ ಸೊರಗಿದ ಮರಿದುಂಬಿಯಂತಾಗಿದ್ದ ನಿಮ್ಮ ನೀರಸ ಕ್ಷಣಗಳಲ್ಲೂ ತಮ್ಮ ಸ್ಮರಣೆ ಮಾತ್ರದಿಂದಲೇ ಸ್ವರ ಹಾಡಿಸಬಲ್ಲ ತಾಕತ್ತಿರುವ ಅಂತಹ ವ್ಯಕ್ತಿಗಳು- ವ್ಯಕ್ತಿತ್ವಗಳು ನಿಮ್ಮ ಬಾಳಪುಟದ ಲಿಸ್ಟ್ ನಲ್ಲಿದ್ದಾರೆಯೇ…..?

ಒಮ್ಮೆ ತಿರುವಿ ನೋಡಿ. ಏಕೆಂದರೆ ಅದು….. ಸಿರ್ಫ಼್ ನಿಮಗೆ ಮಾತ್ರ ಗೊತ್ತು.!

ಪ್ರೀತಿಯಿಂದ…..

ಹಿರಿಯೂರು ಪ್ರಕಾಶ್.

  • ಇಂದಿನ ಚಿನ್ನದ ಬೆಲೆ ತಿಳಿಯಿರಿ | Gold Price in India
    by Team Varthaman
  • 19 ನವಿಲುಗಳ ನಿಗೂಢ ಸಾವು
    by Team Varthaman
  • ಇಂದು ರಾಜ್ಯದ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ
    by Team Varthaman
  • ಭಾರತದ ಆಮದುಗಳ ಮೇಲೆ 24 ಗಂಟೆಗಳಲ್ಲಿ ಭಾರೀ ಸುಂಕ ಹೆಚ್ಚಳ: ಟ್ರಂಪ್
    by Team Varthaman
  • ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ
    by Team Varthaman

ಸುರಿಯುವ ಮಳೆಯ ನಿಲ್ಲಿಸಲಾರೆ

UPI ಬಳಕೆದಾರರ ಗಮನಕ್ಕೆ: ಏಪ್ರಿಲ್ 1ರಿಂದ ಮಹತ್ವದ ನಿಯಮಗಳಲ್ಲಿ ಬದಲಾವಣೆ

“ಸೀಮಾತೀತ ಸ್ವಾದದ ಸೀಬೆಯ ಸೊಬಗು ಬಲ್ಲಿರಾ?”

ಮಹಾಕಾವ್ಯಗಳು ಬದುಕಿನ ಮಾರ್ಗಕ್ಕೆ ದಿಕ್ಸೂಚಿ

ಎಲ್ಲಾ ಧರ್ಮಗಳಿಗೂ ಸಮನ್ವಯತೆಯೇ ನಮ್ಮ ಮಂತ್ರ

TAGGED:Kannada Article
Share This Article
Facebook Email Print
Leave a comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Main NewsTrending

ಭಾರತಕ್ಕೆ ಶೇ 25ರಷ್ಟು ಸುಂಕ ವಿಧಿಸಿದ ಅಮೆರಿಕ

Team Varthaman Team Varthaman July 30, 2025
ಸಾರಿಗೆ ನೌಕರರ ಮುಷ್ಕರ: KSRTC ಬಸ್‌ಗೆ ಕಲ್ಲು ತೂರಾಟ
ತುಂಗಭದ್ರಾ ಡ್ಯಾಂ ಬಳಿ ಗುಡ್ಡದಲ್ಲಿ ಭಾರೀ ಅಗ್ನಿಕಾಂಡ
ಐಪಿಎಲ್ ಪಂದ್ಯ ಮುಂದೂಡಿಕೆ..?
ಪಹಲ್ಗಾಮ್ ಉಗ್ರರ ದಾಳಿಗೆ ಪಾಕ್ ಸೇನಾ ಅಧಿಕಾರಿ ಹಾಶಿಂ ಮುಸಾ ನೇರ ಸಂಬಂಧ: ದೃಢ ಮಾಹಿತಿ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • National News
  • Politics
  • IPL 2025
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?