- ನಿವೃತ್ತ ಜಸ್ಟೀಸ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ಒನ್ ಮ್ಯಾನ್ ಕಮಿಷನ್
- ಆರ್ ಸಿ ಬಿ, ಕೆಎಸ್ಸಿಎ, ಡಿಎನ್ ಎ ಮ್ಯಾನೇಜ್ಮೆಂಟ್ ಮುಖ್ಯಸ್ಥರ ಬಂಧನಕ್ಕೆ ಸೂಚನೆ
- ಸುದ್ದಿಗೋಷ್ಟಿಯಲ್ಲಿ ಸಿಎಂ ಮಹತ್ವದ ನಿರ್ಧಾರ
ಬೆಂಗಳೂರು:ಚಿನ್ನಸ್ವಾಮಿಯಲ್ಲಿ ನಿನ್ನೆ ನಡೆದ ದುರಂತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಬಂಧ ಸುದ್ದಿಗೋಷ್ಟಿ ನಡೆಸಿ ಸಿಎಂ ಸಿದ್ದರಾಮಯ್ಯ, ಸರ್ಕಾರದ ಮುಂದಿನ ನಿರ್ಧಾರಗಳ ಬಗ್ಗೆ ತಿಳಿಸಿದರು.
ಸುದ್ದಿಗೋಷ್ಟಿಯ ಪ್ರಮುಖ ಅಂಶಗಳು
1)ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ಮೈಕಲ್ ಕುನ್ಹಾ ನೇತೃತ್ವದಲ್ಲಿ ‘ಒನ್ ಮ್ಯಾನ್ ಕಮಿಷನ್’ ರಚನೆ ಮಾಡಲಾಗಿದೆ.
2)ಆರ್ಸಿಬಿ, ಡಿಎನ್ಎ ಮ್ಯಾನೇಜ್ಮೆಂಟ್, ಕೆಎಸ್ಸಿಎ ಮುಖ್ಯ ಅಧಿಕಾರಿಗಳ ಬಂಧನಕ್ಕೆ ಸೂಚನೆ
3)ಆರ್ಸಿಬಿ ಮೇಲೆ, ಈವೆಂಟ್ ಮ್ಯಾನೇಜ್ಮೆಂಟ್ ಡಿಎನ್ಎ, ಕೆಎಸ್ಸಿಎನಲ್ಲಿ ಪ್ರತಿನಿಧಿಸುತ್ತಾರೆ ಅವರನ್ನು ಅರೆಸ್ಟ್ ಮಾಡಲು ಸೂಚನೆ
4)ಆರ್ ಸಿ ಬಿ, ಕೆಎಸ್ಸಿಎ, ಡಿಎನ್ ಎ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ
5) ಕಾಲ್ತುಳಿತ ಪ್ರಕರಣದ ತನಿಖೆಗೆ ಸಿಐಡಿಗೆ ವಹಿಸಲಾಗಿದೆ
6) ಕಬ್ಬನ್ ಪಾರ್ಕ್ ಪೊಲೀಸ್ ಇನ್ಸ್ಪೆಕ್ಟರ್, ಎಸಿಪಿ, ಸೆಂಟ್ರಲ್ ಡಿಸಿಪಿ, ಕ್ರಿಕೆಟ್ ಸ್ಟೇಡಿಯಂನ ಇನ್ಚಾರ್ಜ್, ಕಮಿಷನರ್ ಆಪ್ ಪೊಲೀಸ್ ಇವರನ್ನ ತಕ್ಷಣದಿಂದ ಅಮಾನತು ಮಾಡಲಾಗಿದೆ
7)ಸಿಪಿಐ, ಅಸಿಸ್ಟೆಂಟ್ ಕಮಿಷನರ್ ಅಪ್ ಪೊಲೀಸ್, ಬೆಂಗಳೂರು ನಗರದ ಕಮಿಷನರ್ ಅಫ್ ಪೊಲೀಸರನ್ನು ಅಮಾನತುಗೊಳಿಸುವ ತೀರ್ಮಾನ .