- – ಪೊಲೀಸರು ತುರ್ತು ಪರಿಶೀಲನೆ
ಹಾಸನ: ಹಾಸನ ಜಿಲ್ಲೆಯ ಮೂರು ಖಾಸಗಿ ಶಾಲೆಗಳಿಗೆ ಬಾಂಬ್ ಇಟ್ಟು ಸ್ಪೋಟಗೊಳಿಸುವುದಾಗಿ ದುಷ್ಕರ್ಮಿಯೋರ್ವ ಇ-ಮೇಲ್ ಮೂಲಕ ಬೆದರಿಕೆ ನೀಡಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ವಿದ್ಯಾಸೌಧ ಪಬ್ಲಿಕ್ ಶಾಲೆ, ವಿದ್ಯಾಸೌಧ ಕಿಡ್ಸ್ ಶಾಲೆ (ಮಂಜೇಗೌಡ ಅವರಿಗೆ ಸೇರಿರುವುದು) ಸೇರಿದಂತೆ ವಿಜಯನಗರ, ಇಂಡಸ್ಟ್ರಿಯಲ್ ಏರಿಯಾ ಮತ್ತು ಕೆ.ಆರ್.ಪುರಂ ಪ್ರದೇಶಗಳಲ್ಲಿರುವ ಶಾಲೆಗಳಿಗೆ ಈ ಇ-ಮೇಲ್ ಸಂದೇಶ ಬಂದಿದೆ. ಇ-ಮೇಲ್ನಲ್ಲಿ, ಕೇವಲ ಒಂದು ಗಂಟೆಯೊಳಗೆ ಶಾಲಾ ಕಟ್ಟಡಗಳನ್ನು ಸ್ಪೋಟಿಸುತ್ತೇನೆ ಎಂಬ ಬೆದರಿಕೆ ನೀಡಲಾಗಿದೆ.
ಈ ಕುರಿತು ಶಾಲಾ ಆಡಳಿತ ಮಂಡಳಿ ಹಾಸನ ನಗರ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ (Bomb Disposal Squad) ಸಹ ಸ್ಥಳಕ್ಕೆ ಬಂದು ಶಾಲಾ ಆವರಣದ ಸಂಪೂರ್ಣ ಪರಿಶೀಲನೆ ನಡೆಸಿದೆ.ಇದನ್ನು ಓದಿ –ಭಾರೀ ಮಳೆ ಮುನ್ಸೂಚನೆ – ರಾಜ್ಯದ ಹಲವೆಡೆ ಅಲರ್ಟ್
ಪ್ರಸ್ತುತ ಯಾವುದೇ ಸ್ಪೋಟಕ ಪತ್ತೆಯಾಗದಿದ್ದರೂ, ಪೊಲೀಸರು ಮುಂದಿನ ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ಬಿಗಿ ಭದ್ರತೆ ಒದಗಿಸಿದ್ದಾರೆ. ಈ ಬೆದರಿಕೆ ಹಿಂದೆ ಯಾರ ಕೈವಾಡವಿದೆಯೆಂದು ಗಂಭೀರ ತನಿಖೆ ಮುಂದುವರಿಸಲಾಗುತ್ತಿದೆ.