ಮೈಸೂರು: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ(ಪಿಎಚ್ಸಿ) ಕ್ಯಾನ್ಸರ್ ಅರಿವು ಘಟಕ ಸ್ಥಾಪಿಸುವ ಮೂಲಕ ಈಗಿನ ಗ್ರಾಮೀಣ ಜನತೆ ಹಾಗೂ ಯುವಕರು ಕ್ಯಾನ್ಸರ್ ರೋಗಕ್ಕೆ ತುತ್ತಾಗುವುದನ್ನು ತಡೆಗಟ್ಟಬಹುದಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಬೇಕೆಂದು ಭಾರತ್ ಹಾಸ್ಟಿಟಲ್ ಅಂಡ್ ಇನ್ಸ್ಟಿಟ್ಯೂಟ್ ನ ಕನ್ಸಲ್ಟೆಂಟ್ ರೇಡಿಯೇಷನ್ ಆಂಕಾಲಜಿಸ್ಟ್ ಅಂಡ್ ಮೆಡಿಕಲ್ ಸೂಪರಿಡೆಂಟ್ ಡಾ.ವೈ.ಎಸ್.ಮಾಧವಿ ತಿಳಿಸಿದರು.
ಭಾರತ್ ಹಾಸ್ಪಿಟಲ್ ಅಂಡ್ ಇನ್ಸ್ಟಿಟ್ಯೂಟ್ ಆಫ್ ಆಂಕಾಜಿಯಿಂದ “ಬಾಯಿ ಕ್ಯಾನ್ಸರ್ ನಿಂದ ರಕ್ಷಣೆಗೆ ಎರಡು ನಿಮಿಷಗಳ ಕ್ರಮ” ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಶೇ.೭೦ಕ್ಕಿಂತ ಹೆಚ್ಚು ಕ್ಯಾನ್ಸರ್ ಖಾಯಿಲೆಗೆ ತುತ್ತಾಗುತ್ತಿರುವವರು ಮೂರು ಹಾಗೂ ನಾಲ್ಕನೇ ಹಂತದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈ ಸಮಯದಲ್ಲಿ ಹೆಚ್ಚಿನ ಹಣ ಹಾಗೂ ಹೆಚ್ಚಿನ ಚಿಕಿತ್ಸೆಯೂ ಅಗತ್ಯವಾಗುತ್ತದೆ. ಅದರಲ್ಲಿ ಗುಣಮುಖರಾಗುವವರ ಸಂಖ್ಯೆಯೂ ಶೇ.೫೦ರಷ್ಟಿರುತ್ತದೆ ಅಷ್ಟೇ ಎಂದರು.
ಈ ಹಿನ್ನೆಲೆಯಲ್ಲಿ ಸರ್ಕಾರದಿಂದಲೇ ಶಾಲಾ -ಕಾಲೇಜುಗಳಲ್ಲಿ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಕೆಲಸ ಆಗಬೇಕು. ಅದರಲ್ಲೂ ಬಾಯಿ, ಹಲ್ಲು,ಗಂಟಲಿಗೆ ಸಂಬಂಧಿಸಿದ ಕ್ಯಾನ್ಸರ್ ಅಪಾಯಕಾರಿಯಾಗಿದ್ದು ಇವುಗಳನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಿದಾಗ ಮಾತ್ರವೇ ಗುಣಪಡಿಸಲು ಸಾಧ್ಯ. ಇಲ್ಲದಿದ್ದರೆ ಎಷ್ಟೇ ಹಣ ವ್ಯಯಿಸಿದರೂ ರೋಗಿ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪುವ ಅವಕಾಶಗಳು ಹೆಚ್ಚಿರುತ್ತವೆ.
ಈ ದೃಷ್ಠಿಯಿಂದಲೇ ಮರ್ಕ್ ಸ್ಪೆಷಾಲಿಟೀಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಆಸ್ಪತ್ರೆಯಿಂದ ಹೊಸ ವಿಧಾನವನ್ನು ಕಂಡು ಹಿಡಿದಿದ್ದು ಇದರಲ್ಲಿ ಐದು ನಿಮಿಷದಲ್ಲಿ ವ್ಯಕ್ತಿಯ ಕ್ಯಾನ್ಸರ್ ಲಕ್ಷಣಗಳನ್ನು ಪತ್ತೆ ಹಚ್ಚುವ ತಂತ್ರಜ್ಞಾನವಿದೆ ಎಂದು ಹೇಳಿದರು.
ಪ್ರತಿಯೊಬ್ಬರು ಮಾಸಿಕ ಎರಡು ನಿಮಿಷಗಳ ಸ್ವಯಂ-ಪರೀಕ್ಷೆಯು ಕ್ಯಾನ್ಸರ್ ಮುಂಚೆಯೇ ಪತ್ತೆಯಾಗಲು ನೆರವಾಗುತ್ತದೆ. ಜನರಿಗೆ ಬಿಳಿ ಅಥವಾ ಕೆಂಪು ಕಲೆಗಳು, ಗುಣವಾಗದ ಅಲ್ಸರ್, ಸತತ ಊತ ಧ್ವನಿ ಬದಲಾವಣೆಗಳು ಅಥವಾ ವಿವರಿಸಲಾಗದ ರಕ್ತಸ್ರಾವದ ಮುನ್ನೆಚ್ಚರಿಕೆ ಸೂಚನೆಗಳನ್ನು ಗಮನಿಸಲು ಉತ್ತೇಜಿಸಲಾಗುತ್ತದೆ. ಕನ್ನಡಿಯ ಮುಂದೆ ಕೇವಲ ಎರಡು ನಿಮಿಷಗಳು ಜೀವ ಉಳಿಸಬಲ್ಲದು. ಆಸ್ಪತ್ರೆಗಳ ಕಾಯುವ ಸ್ಥಳಗಳಲ್ಲಿ ಕನ್ನಡಿಗಳನ್ನು ಇರಿಸುವುದು ಕೂಡಾ ಅರಿವು ಹೆಚ್ಚಿಸಬಲ್ಲದು ಮತ್ತು ರೋಗಿಗಳು ಹಾಗೂ ಸಂದರ್ಶಕರಲ್ಲಿ ಸ್ವಯಂ-ಪರೀಕ್ಷೆ ಉತ್ತೇಜಿಸಬಲ್ಲದಾಗಿದೆ ಎಂದು ಹೇಳಿದರು.ಇದನ್ನು ಓದಿ – ತಂಬಾಕು ಬೆಳೆಗಾರರಿಗೆ ದಂಡ ವಿಧಿಸದಂತೆ ಯದುವೀರ್ ಸೂಚನೆ
ಈ ಅಭಿಯಾನ ಪ್ರಾರಂಭದ ಸಮಯದಲ್ಲಿ ಡಾ.ವೈ.ಎಸ್. ಮಾಧವಿ (ಕನ್ಸಲ್ಟೆಂಟ್ ರೇಡಿಯೇಷನ್ ಆಂಕಾಲಜಿಸ್ಟ್ ಅಂಡ್ ಮೆಡಿಕಲ್ ಸೂಪರಿಂಟೆಂಡೆಂಟ್), ಸೀನಿಯರ್ ಸರ್ಜಿಕಲ್ ಆಂಕಾಲಜಿಸ್ಟ್ ಮತ್ತು ರೊಬಿಟಿಕ್ ಸರ್ಜನ್ ಡಾ.ಎಂ.ವಿಜಯ್ ಕುಮಾರ್, ಸೀನಿಯರ್ ಕನ್ಸಲ್ಟೆಂಟ್ ಮೆಡಿಕಲ್ ಆಂಕಾಲಜಿಸ್ಟ್ ಡಾ.ಕೆ.ಜಿ.ಶ್ರೀನಿವಾಸ್, ಸೀನಿಯರ್ ಕನ್ಸಲ್ಟೆಂಟ್ ರೇಡಿಯೇಷನ್ ಆಂಕಾಲಜಿಸ್ಟ್ ಡಾ.ವಿನಯ್ ಕುಮಾರ್ ಮುತ್ತಗಿ, ಸರ್ಜಿಕಲ್ ಆಂಕಾಲಜಿಸ್ಟ್ ಅಂಡ್ ರೊಬೊಟಿಕ್ ಸರ್ಜನ್ ಡಾ.ರಕ್ಸಿತ್ ಶೃಂಗೇರಿ, ಕನ್ಸಲ್ಟೆಂಟ್ ಮೆಡಿಕಲ್ ಆಂಕಾಲಜಿಸ್ಟ್ ಡಾ.ಜಿ.ಎಚ್.ಅಭಿಲಾಷ್ ಮತ್ತು ಚೀಫ್ ಆಪರೇಟಿಂಗ್ ಆಫೀಸರ್ ಗೌತಮ್ ಧಮೇರಿಯಾ ಉಪಸ್ಥಿತರಿದ್ದರು.