- ಎರಡು ಹಂತಗಳಲ್ಲಿ ಪ್ರಕ್ರಿಯೆ
ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಜನಗಣತಿ ಪ್ರಕ್ರಿಯೆ ಆರಂಭಗೊಂಡಿದ್ದು, ಇದು ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಮನೆಗಳ ಗಣತಿ ಮತ್ತು ಎರಡನೇ ಹಂತದಲ್ಲಿ ಜನರ ಗಣತಿ ನಡೆಯಲಿದೆ.
ಈ ಬಾರಿ ಸ್ವಯಂ ಗಣತಿ ವ್ಯವಸ್ಥೆಯನ್ನೂ ಪರಿಚಯಿಸಲಾಗಿದೆ. ಇದರಲ್ಲಿ ನಾಗರಿಕರು ಸ್ವತಃ ತಮ್ಮ ಮಾಹಿತಿಯನ್ನು ಆನ್ಲೈನ್ ಮೂಲಕ ದಾಖಲಿಸಿಕೊಳ್ಳಬಹುದು. ಮನೆಯ ಯಾವುದೇ ಒಬ್ಬ ಸದಸ್ಯರು ವೆಬ್ ಪೋರ್ಟಲ್ ಮೂಲಕ ಕುಟುಂಬದ ವಿವರಗಳನ್ನು ಸಲ್ಲಿಸಲು ಅವಕಾಶವಿದೆ.
ಏಪ್ರಿಲ್ 1ರಿಂದ ಏಪ್ರಿಲ್ 15ರವರೆಗೆ ಸ್ವಯಂ ಗಣತಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಈ ಅವಧಿಯ ನಂತರ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ.
ಎರಡನೇ ಹಂತದಲ್ಲಿ ಏಪ್ರಿಲ್ 16ರಿಂದ ಮೇ 15ರವರೆಗೆ ಗಣತಿದಾರರು ಮನೆಗಳಿಗೆ ತೆರಳಿ ಮಾಹಿತಿ ಪರಿಶೀಲನೆ ಹಾಗೂ ಸಂಗ್ರಹಣೆ ನಡೆಸಲಿದ್ದಾರೆ.
ಸ್ವಯಂ ಗಣತಿ ವಿಧಾನ:
• ಅಧಿಕೃತ ಪೋರ್ಟಲ್ಗೆ ಭೇಟಿ ನೀಡಿ
• ಮೊಬೈಲ್ ಸಂಖ್ಯೆಯಿಂದ OTP ಮೂಲಕ ಲಾಗಿನ್ ಆಗಿ
• ರಾಜ್ಯ, ಜಿಲ್ಲೆ ಸೇರಿದಂತೆ ಸ್ಥಳೀಯ ವಿವರಗಳನ್ನು ನಮೂದಿಸಿ
• ಡಿಜಿಟಲ್ ಮ್ಯಾಪ್ನಲ್ಲಿ ಮನೆಯ ಸ್ಥಳ ಗುರುತಿಸಿ
• ಕುಟುಂಬದ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿ
• ನೋಂದಣಿಯ ನಂತರ ಸ್ವಯಂ ಗಣತಿ ಐಡಿ ಪಡೆಯಿರಿ
• ಐಡಿಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಿ
• ಗಣತಿದಾರರು ಬಂದಾಗ ಆ ಐಡಿಯನ್ನು ನೀಡಿ ದೃಢೀಕರಿಸಬಹುದು
ಇದನ್ನು ಓದಿ –ಕಮರ್ಷಿಯಲ್ LPG ಸಿಲಿಂಡರ್ ದರ ₹195 ಏರಿಕೆ
ಈ ಮೂಲಕ ಜನಗಣತಿ ಪ್ರಕ್ರಿಯೆಯನ್ನು ಸರಳ ಹಾಗೂ ವೇಗವಾಗಿ ಪೂರ್ಣಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದೆ.








