ಮೈಸೂರು: ರಾಜ್ಯದಲ್ಲಿ ಭ್ರಷ್ಟಚಾರ ಮೀತಿ ಮೀರಿದೆ, ಆದರೆ,ಸಿದ್ದರಾಮಯ್ಯ ಯಾವುದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪಿಸಿದರು.
ಸಿದ್ದರಾಮಯ್ಯ ಯಾವುದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.ನೀವೆ ಕಳ್ಳ ಬಿಜೆಪಿಯವರನ್ನು ಕಳ್ಳ ಎನ್ನುತ್ತೀರಾ? ಸಿದ್ದರಾಮಯ್ಯ ರಾಜ್ಯವನ್ನು ಹರಾಜು ಹಾಕಿದ್ದಾರೆ ಎಂದು ಜಲದರ್ಶಿನಿ ಅತಿಥಿಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
ವಸತಿ ಮನೆಗಳ ಹಂಚಿಕೆಯಲ್ಲಿ ಆಶ್ರಯ ಸಮಿತಿಯೇ ಪರಮೋಚ್ಚ. ಆಶ್ರಯ ಸಮಿತಿ, ಶಾಸಕರ ಹಂತದಲ್ಲೇ ಮನೆಗಳು ಮಾರಾಟ ಆಗುತ್ತವೆ.ಕಾಮಗಾರಿಯಲ್ಲಿ ಸಚಿವರಿಗೆ ಶೇ.10 ಕಮಿಷನ್ ಹೋಗುತ್ತದೆ. ಕೆಲಸ ಮುಗಿಸುವವರೆಗೆ ಶೇ.25 ಆಗುತ್ತದೆ. ಮನೆಗಳ ಹಂಚಿಕೆಯಲ್ಲಿ ಆಶ್ರಯ ಸಮಿತಿ ಗ್ರಾಮಸಭೆ ಮೂಲಕ ಆಯ್ಕೆ ಆಗಬೇಕು ಎಂದರು.
ವಸತಿ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಸ್ವತಃ ಶಾಸಕ ಬಿ.ಆರ್. ಪಾಟೀಲ್ ಧ್ವನಿ ಎತ್ತಿದ್ದಾರೆ.ಶಾಸಕ ರಾಜುಕಾಗೆ ಕೂಡ ರಾಜ್ಯ ಸರಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಭ್ರಷ್ಟಚಾರದ ವಿರುದ್ದ ಯಾಕೆ ಮಾತನಾಡುತ್ತಿಲ್ಲವೆಂದು ಪ್ರಶ್ನಿಸಿದರು.
ಮದ್ಯದ ಬೆಲೆ ಜಾಸ್ತಿ ಮಾಡಿದ್ದು ಕುಡಿಯೋರು ಕಡಿಮೆ ಆಗಲಿ ಅಂತಾ ಮಾಡಿದ್ದು ಅಂತಾರೆ. ಮದ್ಯದ ಬೆಲೆ ಏರಿಕೆ ಮಾಡಿದ ಮಾತ್ರಕ್ಕೆ ಕುಡಿಯುವವರು ಕಡಿಮೆಯಾಗಿಲ್ಲ.ಯುವಕರು ಗಾಂಜಾ ಅಫೀಮು ಮೊರೆ ಹೋಗುತ್ತಿದ್ದಾರೆ.ಗಾಂಜಾ ಅಫೀಮು ಎಲ್ಲಾ ಕಡೆ ಹೆಚ್ಚಾಗಿದೆ. ಇದರ ಚಟ ಯುವಕರನ್ನು ಬಲಿ ತೆಗೆದು ಕೊಳ್ಳುತ್ತಿದೆ,ಸಿಗರೇಟು ಸೇದುತ್ತಿದ್ದವರು ಗಾಂಜಾ ಹೊಡೆಯುತ್ತಿದ್ದಾರೆ.ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ರಾಜ್ಯ ಹಾಳಾಗಿ ಹೋಯಿತು ಎಂದು ಕಿಡಿಕಾರಿದರು.
26ನೆ ತಾರೀಖು ದಸರಾ ಆಚರಣೆ ಸಂಬಂಧ ಹೈ ಪರ್ವ ಕಮಿಟಿ ಮೀಟಿಂಗ್ ಇದೆ.
ಅಧಿಕಾರಿಗಳು ಸಿಎಂ ಅವರನ್ನೇ ಗಣನೆಗೆ ತೆಗೆದುಕೊಳ್ಳುತ್ತಿಲ್ಲ.ಅರಮನೆಗೆ ಉಪನಿರ್ದೇಶಕರೇ ಲೀಡರ್ ಆಗಿದ್ದಾರೆ.ಅರಮನೆ ನಿರ್ವಹಣೆಯನ್ನು ಮಹಾರಾಜರಿಗೆ ಕೊಡೋದು ಒಳ್ಳೆಯದು ಎಂದರು.
ಅರಮನೆ ಆಡಳಿತ ಮಂಡಳಿಗೆ ಕೆಎಎಸ್ ಅಧಿಕಾರಿಯನ್ನು ನೇಮಕ ಮಾಡಬೇಕು ಅಂತ ಇದೆ. ಆದರೆ ಆ ವ್ಯಕ್ತಿಯನ್ನು ಬದಲು ಮಾಡಲು ಇವರು ಬಿಡುತ್ತಿಲ್ಲ.ಅರಮನೆಗೆ ಬರುವ ಪ್ರವಾಸಿಗರ ಟಿಕೆಟ್ ದರ ಏರಿಕೆ ಮಾಡಲಾಗಿದೆ.ಇದನ್ನು ಕೇಳುವವರೇ ಯಾರು ಇಲ್ಲ ಎಂದು ಕಿಡಿಕಾರಿದರು.
ಸಿಎಂ ಕ್ಷೇತ್ರದಲ್ಲಿ ಮುಡಾ ಹಾಳಾಯ್ತು, ಈಗ ಅರಮನೆ ದಿವಾಳಿ ಆಗುತ್ತಿದೆ. ಮೈಸೂರು ಅರಮನೆಗೆ ವಿಶ್ವವಿಖ್ಯಾತ ಮನ್ನಣೆ ಇದೆ.ಮೂರು ಜನ ಗುಂಪು ಕಟ್ಟಿಕೊಂಡು ದಸರಾ ಆಚರಣೆ ಮಾಡುತ್ತಾರೆ. ಎಲ್ಲಾ ಕಡೆ ಸಿದ್ದರಾಮಯ್ಯ ಶಿಷ್ಯರೇ ಕುಳಿತು ಹಾಳು ಮಾಡಿದ್ದಾರೆ. ಮಿಸ್ಟರ್ ಸಿದ್ದರಾಮಯ್ಯ ಇನ್ನೇನು ಉದ್ದಾರ ಮಾಡುತ್ತಿರಾ? ರಾಜ್ಯ ಸರಕಾರ ಮೈಸೂರು ಅರಮನೆ ಕಡೆಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಗೆ ಕೆಲ ಶಾಸಕರು ಸ್ಪರ್ಧಿಸಿರುವ ವಿಚಾರವಾಗಿ ಮಾತನಾಡಿ, ಜಿ.ಟಿ. ದೇವೇಗೌಡ, ಅವರ ಪುತ್ರ ಹರೀಶ್ ಗೌಡ ಸಹಕಾರ ಕ್ಷೇತ್ರದಲ್ಲಿ ಈ ಮೊದಲಿನಿಂದಲೂ ಇದ್ದಾರೆ.ಸಹಕಾರ ಕ್ಷೇತ್ರದಲ್ಲಿ ಇವರ ಹಿಡಿತ ತಪ್ಪಿಸಬೇಕು.ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರಬೇಕು ಅಂತ ಸಿದ್ದರಾಮಯ್ಯ ಈ ರೀತಿ ಮಾಡಿಸುತ್ತಿದ್ದಾರೆ ಎಂದರು.ಇದನ್ನು ಓದಿ –ಟಿಟಿಡಿಗೆ ನಂದಿನಿ ತುಪ್ಪದ ದಾಹ: 10 ಲಕ್ಷ ಕೆಜಿ ಬೇಡಿಕೆ
ಕಾರ್ಯಕರ್ತರು ಚುನಾವಣೆಗೆ ನಿಂತರೆ ಹಣದ ಕೊರತೆ ಆಗುತ್ತದೆ.ಶಾಸಕರೇ ಚುನಾವಣೆಗೆ ನಿಂತರೆ ಯಥೇಚ್ಛವಾಗಿ ಹಣ ಖರ್ಚು ಮಾಡುತ್ತಾರೆ.ಸಹಕಾರ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ ಕುಟುಂಬದ ಪ್ರಾಬಲ್ಯ ಮುಗಿಸುವುದು ಸಿಎಂ ಸಿದ್ದರಾಮಯ್ಯ ಪ್ಲಾನ್ ಇರಬೇಕು ಎಂದು ಹೇಳಿದರು.