ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ನಲ್ಲಿ ಭಾಗಿಯಾಗಿದ್ದ ಗೋಲ್ಡ್ ಸುರೇಶ್ ವಿರುದ್ಧ ಇದೀಗ ಲಕ್ಷಾಂತರ ರೂಪಾಯಿ ವಂಚನೆಯ ಆರೋಪ ಕೇಳಿಬಂದಿದೆ. ಕೇಬಲ್ ಚಾನೆಲ್ ವ್ಯವಸ್ಥೆ ಸ್ಥಾಪನೆ ಮಾಡುವುದಾಗಿ ಭರವಸೆ ನೀಡಿದ ಅವರು ಹಣ ಪಡೆದು ವಂಚನೆ ಮಾಡಿರುವ ಬಗ್ಗೆ ಆರೋಪ ಹೊರವಿದ್ಯಾಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬವರು ಈ ಆರೋಪವನ್ನು ಮಾಡಿದ್ದಾರೆ.
ಅವರ ಹೇಳಿಕೆಯಂತೆ, ಗೋಲ್ಡ್ ಸುರೇಶ್ ಕೇಬಲ್ ಚಾನೆಲ್ ಸೆಟ್ಅಪ್ ಮಾಡಿಕೊಡುತ್ತೇನೆ ಎಂದು ಹೇಳಿ ಭಾರೀ ಮೊತ್ತದ ಹಣ ಪಡೆದುಕೊಂಡು ಬಳಿಕ ಯಾವುದೇ ಕೆಲಸ ಮಾಡದೇ ಕಣ್ಮರೆಯಾಗಿದ್ದಾರೆ.ಇದನ್ನು ಓದಿ –ಕೆಆರ್ಎಸ್ ಡ್ಯಾಂ ಭರ್ತಿಗೆ ಇನ್ನು 11 ಅಡಿ ಬಾಕಿ
ಈ ಕುರಿತು ಮೈನುದ್ದಿನ್ ಸಂಬಂಧಿತ ಪ್ರಾಧಿಕಾರಿಗಳ ಮುಂದೆ ದೂರು ದಾಖಲಿಸಿದ್ದು, ಈ ಘಟನೆಗೆ ಸಂಬಂಧಪಟ್ಟಂತೆ ತನಿಖೆ ನಡೆಯುತ್ತಿದೆ.
ಜನಪ್ರಿಯತೆಯನ್ನು ದುರುಪಯೋಗಪಡಿಸಿಕೊಂಡು ಜನರಿಂದ ಹಣ ಪಡೆದು ವಂಚನೆ ಮಾಡಿದ ಆರೋಪ ಗೋಲ್ಡ್ ಸುರೇಶ್ ವಿರುದ್ಧ ತೀವ್ರವಾಗಿ ಮೂಡಿಬಂದಿದೆ.