ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರದಿಂದ ಹೊಸ ಭರವಸೆ – ಈ ಬಾರಿ ಹೆಚ್ಚುವರಿ 5 ಕೆಜಿ ಅಕ್ಕಿಗೆ ಬದಲಾಗಿ ವಿಶೇಷ ಆಹಾರ ಕಿಟ್ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈ ಕುರಿತು ಆಹಾರ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಸಚಿವ ಸಂಪುಟದ ಮುಂದಿನ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದ್ದು, ಜುಲೈ 2ರಂದು ನಂದಿಬೆಟ್ಟದಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಚರ್ಚೆ ಮತ್ತು ಒಪ್ಪಿಗೆ ದೊರೆಯಬಹುದಾಗಿದೆ.
ಆಹಾರ ಕಿಟ್ನಲ್ಲಿ ಏನು ಇರಲಿದೆ?
ಈ ಕಿಟ್ನಲ್ಲಿ ಪಡಿತರದಾರರಿಗೆ ಅಗತ್ಯವಿರುವ ದಿನಸಿಗಳನ್ನು ಒಳಗೊಂಡಂತೆ ಕೆಳಕಂಡ ವಸ್ತುಗಳನ್ನು ನೀಡುವ ಯೋಚನೆ ಇದೆ:
- ಸಕ್ಕರೆ
- ಉಪ್ಪು
- ತೊಗರಿಬೇಳೆ
- ಕಾಫಿಪುಡಿ
- ಟೀಪುಡಿ
- ಅಡುಗೆ ಎಣ್ಣೆ
- ಗೋಧಿ
ಇದನ್ನು ಓದಿ –ರಾಜ್ಯದಾದ್ಯಂತ ಲೋಕಾಯುಕ್ತ ದಾಳಿ
ಇವುಗಳನ್ನೊಳಗೊಂಡ ಆಹಾರ ಕಿಟ್ಗಳನ್ನು ಹೆಚ್ಚುವರಿ ಅಕ್ಕಿಗೆ ಬದಲಾಗಿ ವಿತರಣೆ ಮಾಡುವ ಯೋಜನೆಯಿದೆ. ಆದರೆ, ಇದು ಜಾರಿಗೆ ಬರಬೇಕಾದರೆ ಸಚಿವ ಸಂಪುಟದ ಒಪ್ಪಿಗೆ ಅಗತ್ಯವಿದೆ.