ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ 5 ವರ್ಷದ ಬಾಲಕಿ ಹತ್ಯೆ ಪ್ರಕರಣ ರಾಜ್ಯದಾದ್ಯಂತ ಆತಂಕ ಸೃಷ್ಟಿಸಿತ್ತು. ಈ ದಾರುಣ ಪ್ರಕರಣದ ಆರೋಪಿ, ಬಿಹಾರ ಮೂಲದ ರಿತೇಶ್ ಎಂಬಾತನ ವಿರುದ್ಧದ ಎನ್ಕೌಂಟರ್ ಪ್ರಕರಣವನ್ನು ರಾಜ್ಯ ಸರ್ಕಾರ ಈಗ CID ತನಿಖೆಗೆ ವಹಿಸಿ ಆದೇಶ ಹೊರಡಿಸಿದೆ.
ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯನ್ನು ಅಪಹರಿಸಿ, ಹತ್ಯೆ ಮಾಡಿದ ಆರೋಪದ ಮೇಲೆ ರಿತೇಶ್ ವಿರುದ್ಧ ಪೊಲೀಸರ ಕಾರ್ಯಾಚರಣೆ ನಡೆದಿತ್ತು. ಆತನ ಬಂಧನದ ವೇಳೆಯಲ್ಲಿ, ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದ ರಿತೇಶ್, ಆತ್ಮರಕ್ಷಣೆಗೆ ಪೊಲೀಸರು ಕೈಗೊಂಡ ಕ್ರಮವಾಗಿ ಗುಂಡೇಟಿಗೆ ಒಳಗಾಗಿದ್ದನು.
ಪಿಎಸ್ಐ ಅನ್ನಪೂರ್ಣ ಅವರು ಫೈರಿಂಗ್ ಮಾಡಿದ್ದ ಗುಂಡು ರಿತೇಶ್ ಎದೆಗೆ ತಗುಲಿತ್ತು. ಪರಿಣಾಮವಾಗಿ, ಈ ಎನ್ಕೌಂಟರ್ನಲ್ಲಿ ರಿತೇಶ್ ಮೃತಪಟ್ಟನು.
ಈ ಹಿನ್ನಲೆಯಲ್ಲಿ, ಈ ಎನ್ಕೌಂಟರ್ ಪ್ರಕರಣದಲ್ಲಿ ಯಾವುದೇ ಅನುಮಾನವಿಲ್ಲದೆ ಸತ್ಯ ಬಹಿರಂಗಪಡಿಸಲು ಹಾಗೂ ನ್ಯಾಯ ನಿರ್ವಹಣೆಗೆ ಅನುವು ಮಾಡಿಕೊಡಲು, ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವುದಾಗಿ ಅಧಿಕೃತವಾಗಿ ತಿಳಿಸಿದೆ.ಇದನ್ನು ಓದಿ –ಮೈಸೂರು: ಕಾರು-ಬೈಕ್ ನಡುವೆ ಭೀಕರ ಅಪಘಾತ – ತಾಯಿ , ಮಗ ಸ್ಥಳದಲ್ಲೇ ಸಾವು
ಅಂತೆಯೇ, ಮುಂದಿನ ದಿನಗಳಲ್ಲಿ ಸಿಐಡಿ ಅಧಿಕಾರಿಗಳು ತನಿಖೆ ಆರಂಭಿಸುವ ನಿರೀಕ್ಷೆ ಇದೆ.