ತುಮಕೂರು: ಜಿಲ್ಲೆಯಲ್ಲಿ ಭ್ರಷ್ಟಾಚಾರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಲೋಕಾಯುಕ್ತ ಇಲಾಖೆ, 11 ಸಬ್ ರಿಜಿಸ್ಟರ್ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದೆ. ಈ ದಾಳಿ ತುಮಕೂರು ಲೋಕಾಯುಕ್ತ ಎಸ್ಪಿ ಲಕ್ಷ್ಮೀನಾರಾಯಣ್ ಅವರ ನೇತೃತ್ವದಲ್ಲಿ ನಡೆದಿದ್ದು, ಅಧಿಕಾರಿಗಳು ದಾಖಲೆಗಳ ಪರಿಶೀಲನೆಗೆ ತೊಡಗಿದ್ದಾರೆ.
ದಾಳಿಗೆ ಒಳಪಟ್ಟ ಸ್ಥಳಗಳು:
- ತುಮಕೂರು ನಗರ
- ತಿಪಟೂರು
- ತುರುವೇಕೆರೆ
- ಗುಬ್ಬಿ
- ಇತರೆ 7 ಕಡೆಗಳು ಸೇರಿ ಒಟ್ಟು 11 ಕಚೇರಿಗಳು
ದಾಖಲೆಗಳ ಪರಿಶೀಲನೆಯು ಶಂಕಿತ ದಾಖಲೆಗಳು, ನಕಲಿ ದಾಖಲೆಗಳ ಬಳಕೆ, ಲಂಚದ ಆರೋಪಗಳು, ಉದ್ದೇಶಿತ ವಿಳಂಬದ ಆರೋಪಗಳ ಹಿನ್ನೆಲೆಯಲ್ಲಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.ಇದನ್ನು ಓದಿ –ಅಂತರರಾಷ್ಟ್ರೀಯ ಯೋಗ ದಿನಾಚರಣೆ: ನಾಳೆ ವಿಶಾಖಪಟ್ಟಣಂನಲ್ಲಿ ಪ್ರಧಾನಿ ಮೋದಿ
ಈ ದಾಳಿ ಸಂಬಂಧ ಹೆಚ್ಚಿನ ಮಾಹಿತಿ ಹಾಗೂ ವರದಿಗಳು ಬೇಗಲೇ ಲಭಿಸುವ ನಿರೀಕ್ಷೆಯಿದೆ.