ಮಂಡ್ಯ:ಮಂಡ್ಯ ಜಿಲ್ಲೆಯ ಕರೋಟಿ ಗ್ರಾಮದಲ್ಲಿ ಶೋಕಾಂತಿಕ ಘಟನೆ ಬೆಳಕಿಗೆ ಬಂದಿದೆ. ವಿವಾಹಿತ ಪ್ರೇಯಸಿಯ ಹತ್ಯೆ ಮಾಡಿ ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಹತ್ಯೆಯಾದ ಮಹಿಳೆಯನ್ನು ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ (35) ಎಂದು ಗುರುತಿಸಲಾಗಿದೆ. ಆರೋಪಿಯಾಗಿರುವ ಪುನೀತ್ ಎಂಬಾತ ಕರೋಟಿ ಗ್ರಾಮದವನೇ ಆಗಿದ್ದಾನೆ.
ಇನ್ಸ್ಟಾಗ್ರಾಂ ಮೂಲಕ ಇಬ್ಬರ ನಡುವೆ ಪರಿಚಯವಾಗಿದ್ದು, ನಂತರ ಪ್ರೀತಿಯ ಸಂಬಂಧದಲ್ಲಿ ಜೋತೆಯಾಗಿ ಮುಳುಗಿದ್ದರು. ಪ್ರೀತಿಗೆ ಗಂಡು ಹಾಗೂ ಮಕ್ಕಳು ಇದ್ದರೂ, ಪುನೀತ್ ಜೊತೆಗೆ ಅವಳ ಸಂಬಂಧ ಮುಂದುವರಿಯುತ್ತಿತ್ತು.
ಕಳೆದ ಭಾನುವಾರ ಇಬ್ಬರೂ ಮೈಸೂರಿಗೆ ಕಾರಿನಲ್ಲಿ ಹೋಗಿ ಮರಳುವ ವೇಳೆ, ಕೆ.ಆರ್.ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ ಜಗಳ ಉಂಟಾಗಿ, ಪುನೀತ್ ಮಹಿಳೆಯನ್ನು ಕೊಂದು, ಅವಳ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಬಳಿಕ ಪ್ರೀತಿಯ ಶವವನ್ನು ಜಮೀನಿನಲ್ಲಿ ಮುಚ್ಚಿಟ್ಟಿದ್ದ.ಇದನ್ನು ಓದಿ –ಇಂಜಿನಿಯರಿಂಗ್ ಸೀಟ್ ಬ್ಲಾಕ್ ದಂಧೆ: 18 ಕಡೆಗಳಲ್ಲಿ ಇಡಿ ದಾಳಿ
ಈ ಕುರಿತು ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.