ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರ ತಾಲೂಕಿನ ಕೊಪ್ಪದಲ್ಲಿ ನರ್ಸ್ ಒಬ್ಬರು ಹೆರಿಗೆ ಆದ ಎರಡು ದಿನಗಳ ಹೆಣ್ಣು ಮಗುವನ್ನು ₹1 ಲಕ್ಷಕ್ಕೆ ಮಾರಾಟ ಮಾಡಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಕೊಪ್ಪದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ರತ್ನ ಎಂಬ ಮಹಿಳೆಗೆ ಹೆರಿಗೆ ಆಗಿದ್ದು, ಹೆರಿಗೆನಂತರ ಕೇವಲ 2 ದಿನಗಳಲ್ಲಿ ಮಗು ಮಾರಾಟವಾಗಿದೆ. ಕಾರ್ಕಳ ಮೂಲದ ರಾಘವೇಂದ್ರ ಎಂಬಾತನಿಗೆ ₹5 ಸಾವಿರ ಅಡ್ವಾನ್ಸ್ ಪಡೆದು, ಒಟ್ಟು ₹1 ಲಕ್ಷಕ್ಕೆ ಮಗು ವಹಿಸಲಾಗಿತ್ತು.
ಈ ದುರ್ಘಟನೆಯಲ್ಲಿ ನಿವೃತ್ತ ನರ್ಸ್ ಕುಸುಮಾ ಎಂಬವರು ತಮ್ಮ ಸಹೋದರ ರಾಘವೇಂದ್ರನಿಗೆ ಮಗು ಮಾರಾಟ ಮಾಡಿದ ಆರೋಪ ಎದುರಿಸುತ್ತಿದ್ದಾರೆ.ಇದನ್ನು ಓದಿ –ತನಿಖಾಧಿಕಾರಿ ಬದಲಾವಣೆಗೆ ಸ್ನೇಹಮಯಿ ಕೃಷ್ಣ ಅರ್ಜಿ
ಸದ್ಯ, ಈ ಕುರಿತಂತೆ ಸ್ಥಳೀಯ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಂಡಿದ್ದಾರೆ. ಮಗು ಪ್ರತ್ಯೇಕಿಸಿ ಸುರಕ್ಷಿತವಾಗಿರಿಸಲಾಗಿದ್ದು, ಪ್ರಕರಣ ತನಿಖೆ ಹಿನ್ನಲೆಯಲ್ಲಿ ಮುಂದಿನ ಕ್ರಮ ನಿರ್ಧರಿಸಲಾಗುತ್ತಿದೆ.