ಬೆಂಗಳೂರು:ಪ್ರಜಾವಾಣಿ ಕೊಡಗು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ವರದಿಗಾರರಾಗಿ ಅತ್ಯಂತ ಸಮರ್ಥವಾಗಿ ಸೇವೆ ಸಲ್ಲಿಸಿದ್ದ ಕುಸುಮಾ ಶಾನುಭಾಗ್ ಇಂದು ಕೊನೆಯುಸಿರೆಳೆದರು
ರಾಜೀವ್ ಗಾಂಧಿ ಹಂತಕ ಶಿವರಾಸನ್ ಮತ್ತು ತಂಡವನ್ನು ಕರ್ನಾಟಕ ಪೋಲಿಸರು ಬೆನ್ನಟ್ಟಿದಾಗ ಈ ಸುದ್ದಿಯ ಬೆನ್ನಟ್ಟಿದ್ದು ಕುಸುಮಾ ಶಾನುಭಾಗ್ ಅವರು ಜನಪರ ವರದಿಗಾರಿಕೆ ಮಾಡುವಲ್ಲಿ
ನಿಪುಣತೆ , ಪ್ರಾಮಾಣಿಕತೆ ತೋರಿ ಪ್ರಸಿದ್ದರಾಗಿದ್ದರು.
ಜಿಲ್ಲಾ ಕೇಂದ್ರ ಮಂಡ್ಯದಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿ ಮುತ್ತತ್ತಿಗೆ ಪೋಲಿಸ್ ಇನ್ಸ್ ಪೆಕ್ಟರ್ ಮುತ್ತುರಾಯ ಮತ್ತವರ ತಂಡ ಮೆಟಾಡಾರ್ ಒಂದನ್ನು ಹಿಂಬಾಲಿಸಿದ ಜಾಡನ್ನು ಹಿಡಿದ ಕುಸುಮಾ ಅವರು ತಮ್ಮ ಲೂನಾದಲ್ಲಿ ಪೋಲಿಸರನ್ನು ಹಿಂಬಾಲಿಸಿದರು. ಮರು ದಿನ ಬೆಳಿಗ್ಗೆ ಪ್ರಜಾವಾಣಿಯಲ್ಲಿ
ಸ್ಪೋಟಕ ಸುದ್ದಿ ಪ್ರಕಟವಾಗುವಂತೆ ನೋಡಿದ್ದರು
ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದ ಕೊಳವೆಗೆ ವಿಷ ಬೆರೆಸಲು ಸಂಚು ರೂಪಿಸಿದ್ದ ಶಿವರಾಸನ್ ತಂಡ ಪೋಲಿಸರ ಆಗಮನ ಕಂಡು ಮೆಟಡಾರ್ ಅಲ್ಲೇ ಬಿಟ್ಟು ಕಾಲ್ಕಿತ್ತರು ಎಂಬ ಆ ಸುದ್ದಿ ಸಂಚಲನ ಮೂಡಿಸಿತ್ತು.
ಅದೂ ರಾತ್ರಿ ಹೊತ್ತಿನಲ್ಲಿ ನಿಖರ ಸುದ್ದಿಗಾಗಿ ಏಕಾಂಗಿಯಾಗಿ ಹೊರಟ ಈ ದಿಟ್ಟ ಪತ್ರಕರ್ತೆಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಮಾಡುವ ಮುನ್ನ ಬೆಂಗಳೂರಿನ ನಂದಿನಿ ಬಡಾವಣೆಯ ಆಕೆಯ ಮನೆಗೆ ತೆರಳಿ ಸಮ್ಮತಿ ಕೋರಿದಾಗ ತನ್ನ ಮುದ್ದಿನ ಶ್ವಾನದೊಂದಿಗೆ ಕುಳಿತಿದ್ಧ ಆಕೆ ತನಗೆ ಪ್ರಶಸ್ತಿ ಬೇಡ ಎಂದು ನಯವಾಗಿ ತಿರಸ್ಕರಿಸಿದ್ದು ಈಗ ನೆನಪು ಮಾತ್ರ.