ಮೈಸೂರು : ಜಾತಿಗಣತಿ ವಿಚಾರವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಯತೀಂದ್ರಗೆ ಜಾತಿಗಣತಿ ಹಾಗೂ ಸಾಮಾಜಿಕ-ಆರ್ಥಿಕ ಸಮೀಕ್ಷೆಗಳ ಬಗ್ಗೆ ಬೇರೆ ಏನು ಗೊತ್ತು? ಅವರು ಇನ್ನೂ ಈ ವಿಷಯದಲ್ಲಿ ತಿಳಿದುಕೊಳ್ಳಬೇಕು” ಎಂದು ಟೀಕಿಸಿದರು.
“ರಾಜ್ಯ ವಿಧಾನಸಭೆಯಲ್ಲಿ 39 ಲಿಂಗಾಯತ ಶಾಸಕರು ಇದ್ದಾರೆ. ಅವರು ವಿರೋಧಿಸುತ್ತಿದ್ದರೆ ಸಿದ್ದರಾಮಯ್ಯ ಅವರು ತಮ್ಮ ಸಿಎಂ ಸ್ಥಾನದಿಂದ ರಾಜೀನಾಮೆ ನೀಡಲಿ. ಅದಕ್ಕೇನಾದರೂ ಧೈರ್ಯವಿದೆಯಾ?” ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.
ಅದಕ್ಕೂ ಮಿಕ್ಕಿ, “150 ಕೋಟಿ ರೂ. ವೆಚ್ಚದಲ್ಲಿ ಸಿದ್ದರಾಮಯ್ಯ ಸರ್ಕಾರ ಕೈಗೊಂಡಿದ್ದ ಮೊದಲ ಜಾತಿಗಣತಿ ಅವೈಜ್ಞಾನಿಕವಾಗಿತ್ತು. ಅದನ್ನು ಬಿಜೆಪಿ ಮತ್ತು ಜೆಡಿಎಸ್ ವಿರೋಧಿಸಿತ್ತು. ಈಗ ರಾಹುಲ್ ಗಾಂಧಿ ಭೇಟಿ ಮಾಡಿದ ನಂತರ ಮತ್ತೊಮ್ಮೆ ಸಮೀಕ್ಷೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದು ಸರ್ಕಾರದ ವೈಫಲ್ಯ ಮುಚ್ಚಲು ಮಾಡಿಕೊಂಡಿರುವ ರಾಜಕೀಯ ಕಸರತ್ತು ಮಾತ್ರ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಈ ಹಿಂದೆ ಕಾಟಾಚಾರದಂತೆ ನಡೆಸಿದ ಜಾತಿಗಣತಿಯಲ್ಲೇ 150 ಕೋಟಿ ರೂಪಾಯಿ ವ್ಯರ್ಥವಾಗಿದೆ. ಈಗ ಮತ್ತೊಮ್ಮೆ ಗಣತಿ ಮಾಡುವುದು ಸರಿಯಲ್ಲ. ಕೇಂದ್ರ ಸರ್ಕಾರವೇ ಈಗ ಜಾತಿಗಣತಿ ಮಾಡುವ ಭರವಸೆ ನೀಡಿದೆ. ಇದಲ್ಲದೆ ಇನ್ನೊಂದು ಸಮೀಕ್ಷೆ ಬೇಕೆಂದು ಹೇಳುವುದು ಜನತೆಗೂ ಧಿಕ್ಕಾರವೇ” ಎಂದು ತೀವ್ರ ಟೀಕೆ ಮಾಡಿದರು.ಇದನ್ನು ಓದಿ –3 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್
ಇದೇ ಸಂದರ್ಭದಲ್ಲೇ ಅವರು, “ನಿಮ್ಮ ಹುಳುಕು ಮುಚ್ಚಿಕೊಳ್ಳಲು ಏನೇನು ಹೇಳಬೇಡಿ ಯತೀಂದ್ರ” ಎಂಬಂತ ಸಂದೇಶವನ್ನೂ ನೀಡಿದ್ದಾರೆ.