ಬೆಂಗಳೂರು: ಆರ್ಸಿಬಿ (RCB) ಅಭಿಮಾನಿಗಳಿಗೆ ಮತ್ತೊಂದು ಹರ್ಷದ ಕ್ಷಣ! 18 ವರ್ಷಗಳ ನಿರೀಕ್ಷೆಯ ನಂತರ ಇದೀಗ ಆರ್ಸಿಬಿ ಯ ಕನಸು ನನಸಾಗಿದೆ. ಈ ಹಿನ್ನಲೆಯಲ್ಲಿ, ಇಂದು ಸಂಜೆ ಬೆಂಗಳೂರು ನಗರ ಆರ್ ಸಿಬಿಯ ವಿಜಯೋತ್ಸವ ಮೆರವಣಿಗೆಗೆ ಸಾಕ್ಷಿಯಾಗಲಿದೆ.
ಆರ್ಸಿಬಿ ಅಧಿಕೃತವಾಗಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಮೆರವಣಿಗೆ ಇಂದು ಮಧ್ಯಾಹ್ನ 3:30ಕ್ಕೆ ವಿಧಾನಸೌಧದ ಮುಂಭಾಗದಿಂದ ಪ್ರಾರಂಭವಾಗಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತ್ಯವಾಗಲಿದೆ ಎಂದು ತಿಳಿಸಿದೆ.
ಫೈನಲ್ ಪಂದ್ಯದಲ್ಲಿ ಜಯದ ಬಳಿಕ ವಿರಾಟ್ ಕೊಹ್ಲಿಯವರು ಬೆಂಗಳೂರಿನಲ್ಲಿ ವಿಜಯ ಮೆರವಣಿಗೆ ನಡೆಯಲಿದೆ ಎಂದು ಹಿಂದೆ ಹೇಳಿದ್ದಾರೆ. ಇದೀಗ ಅದೇ ಮಾತು ನಿಜವಾಗುತ್ತಿದೆ.
ಆರ್ಸಿಬಿಯು ತಮ್ಮ ಅಭಿಮಾನಿಗಳನ್ನು “12ನೇ ಸೇನೆ” ಎಂದು ಗೌರವಿಸುತ್ತಿದ್ದು, “ಈ ಕಿರೀಟ ನಿಮ್ಮದು” ಎಂಬ ಸಂದೇಶವನ್ನೂ ಹಂಚಿಕೊಂಡಿದೆ.
ಹೀಗಾಗಿ, ಬೆಂಗಳೂರು ಆರ್ಸಿಬಿ ಅಭಿಮಾನಿಗಳು ಈ ಸಂಜೆ ತಂಡದ ಈ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಲು ಸಜ್ಜಾಗಿರಿ.