ಹುಬ್ಬಳ್ಳಿ: ಖ್ಯಾತ ಕನ್ನಡ ರಂಗಭೂಮಿ ನಟ, ನಾಟಕ ನಿರ್ದೇಶಕ ಮತ್ತು ಕಲಾವಿದ ಯಶವಂತ ಸರದೇಶಪಾಂಡೆ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಅವರು ಅನೇಕ ನಾಟಕಗಳಲ್ಲಿ ನಟಿಸಿ ಮತ್ತು ನಿರ್ದೇಶನಮಾಡಿ ಪ್ರೇಕ್ಷಕರ ಮನಮೋಹಿಸಿದ್ದವರು. ವಿಶೇಷವಾಗಿ, ಅವರ “ಆಲ್ ದಿ ಬೆಸ್ಟ್” ನಾಟಕವು ಅಭೂತಪೂರ್ವ ಯಶಸ್ಸು ಕಂಡಿತ್ತು.
ಕಿರುತೆರೆ ಹಾಗೂ ಚಲನಚಿತ್ರಗಳಲ್ಲಿ ಸಹ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ‘ರಾಮ ಶ್ಯಾಮ ಭಾಮಾ’ ನಾಟಕದಲ್ಲಿ ಅಭಿನಯಿಸುವ ಮೂಲಕ ಅವರು ಖ್ಯಾತಿ ಗಳಿಸಿದ್ದರು.ಇದನ್ನು ಓದಿ –ಇಂದಿನಿಂದ ಅ. 4ರವರೆಗೆ ರಾಜ್ಯದಲ್ಲಿ ಮಳೆ ಭೀತಿ
ಅವರ ನಿಧನಕ್ಕೆ ಕುಟುಂಬದವರು, ಅಭಿಮಾನಿಗಳು ಮತ್ತು ನಾಡಿನ ಗಣ್ಯರು ಕಂಬನಿ ಮಿಡಿದು ಶೋಕ ವ್ಯಕ್ತಪಡಿಸಿದ್ದಾರೆ.








