By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Politics
    Politics
    Politics is the art of looking for trouble, finding it everywhere, diagnosing it incorrectly and applying the wrong remedies.
    Show More
    Top News
    Latest News
  • Articles
    ArticlesShow More
    ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ
    August 12, 2025
    “ತುಂಗಾ ತೀರದಲಿ ನಿಂತ ಯತಿವರ್ಯ “
    August 12, 2025
    ಬಾಂಧವ್ಯದ ಸಂಕೇತ ರಕ್ಷಾ ಬಂಧನ
    August 9, 2025
    ನಾನು ಕಂಡಂತೆ ಜೀವನ ಶೈಲಿಯಲ್ಲಿ ಬದಲಾವಣೆ
    August 3, 2025
    ಪಾರಂಪರಿಕ ಹಣ್ಣು ಬೇಲದ ಉಪಯೋಗಗಳು
    August 2, 2025
  • Sports
  • National
  • International
  • Crime
  • Contact Us
Reading: ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ
Share
Font ResizerAa
VarthamanVarthaman
  • Home
  • Karnataka
  • Politics
  • Articles
  • Sports
  • National
  • International
  • Crime
  • Contact Us
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Politics
  • Articles
  • Sports
  • National
  • International
  • Crime
  • Contact Us
Follow US
Varthaman > Blog > Articles > ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ
Articles

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ

Team Varthaman
Last updated: August 12, 2025 6:35 am
Team Varthaman Published August 12, 2025
Share
SHARE

ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯು ಮಂತ್ರಾಲಯದಲ್ಲಿ ಮತ್ತು ದೇಶದಾದ್ಯಂತ ಇರುವ ರಾಘವೇಂದ್ರ ಮಠಗಳಲ್ಲಿ ಆಚರಿಸಲಾಗುವ ಒಂದು ಪ್ರಮುಖ ಉತ್ಸವವಾಗಿದೆ. ಇದು ರಾಘವೇಂದ್ರ ಸ್ವಾಮಿಗಳು ಜೀವ ಸಮಾಧಿಯಾದ ದಿನದ ಸ್ಮರಣೆಯಲ್ಲಿ ಆಚರಿಸಲಾಗುತ್ತದೆ. ಈ ವರ್ಷ ೩೫೪ ನೇ ಆರಾಧನಾ ಮಹೋತ್ಸವವನ್ನು ಆಗಸ್ಟ್ ೮ ರಿಂದ ೧೪ ರವರೆಗೆ ಆಚರಿಸಲಾಗುತ್ತಿದೆ.

ಶ್ರೀ ಗುರು ರಾಘವೇಂದ್ರ ಸ್ವಾಮಿಗಳು (೧೫೯೫-೧೬೭೧), ೨೫-೦೨-೧೫೯೫ ರಂದು ಭುವನಗಿರಿಯಲ್ಲಿ,(ತಮಿಳುನಾಡು)ಜನಿಸಿದರು.ಅವರು ಹಿಂದೂ ಧರ್ಮದ ಬ್ರಾಹ್ಮಣ ಮಾಧ್ವ ಸಂತರಲ್ಲಿ ಪ್ರಮುಖರು. ಅವರು ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ.

Join WhatsApp Group

೧೬ ನೇ ಶತಮಾನದ ಪೂಜ್ಯ ಸಂತ ಮತ್ತು ಆಧ್ಯಾತ್ಮಿಕ ಗುರು ಶ್ರೀ ರಾಘವೇಂದ್ರ ಸ್ವಾಮಿಗಳು ವೈಷ್ಣವ ಸಂಪ್ರದಾಯವನ್ನು ಸಕ್ರಿಯವಾಗಿ ಪ್ರಚಾರ ಮಾಡಿದರು ಮತ್ತು ಮಧ್ವಾಚಾರ್ಯರ ದ್ವೈತ ತತ್ವಶಾಸ್ತ್ರವನ್ನು ಹರಡುವಲ್ಲಿ ಮಹತ್ವದ ಪಾತ್ರ ವಹಿಸಿದರು

ಶ್ರೀ ಪ್ರಹ್ಲಾದ ರಾಯರ ನಾಲ್ಕನೇ ಅವತಾರ ಶ್ರೀ ಗುರು ರಾಘವೇಂದ್ರರು. ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತರು ರಾಯರು, ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ.
ಶ್ರದ್ಧೆ, ಭಕ್ತಿಯಿಂದ ನೆನೆದು ಸ್ಮರಿಸುವವರ ಎಂದಿಗೂ ಕೈ ಬಿಡರು ಈ ಕಲಿಯುಗದ ಕಾಮಧೇನು.ಬೇಡಿದ ವರಗಳ ನೀಡುವ ಕಲ್ಪವೃಕ್ಷ ಈ ಗುರುಸಾರ್ವಭೌಮರು

ರಾಘವೇಂದ್ರ ಸ್ವಾಮಿ (ಮೂಲತಃ ವೆಂಕಟನಾಥ) ತಮಿಳುನಾಡಿನ ಭುವನಗಿರಿ ಪಟ್ಟಣದಲ್ಲಿ ಸಂಗೀತ ಮತ್ತು ಪಾಂಡಿತ್ಯದಲ್ಲಿ ಪರಿಣತಿ ಹೊಂದಿರುವ ದೇಶಸ್ಥ ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ಮುತ್ತಜ್ಜ ಕೃಷ್ಣಭಟ್ಟರು ವಿಜಯನಗರದ ದೊರೆ ಕೃಷ್ಣದೇವರಾಯರಿಗೆ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಅವರ ಅಜ್ಜ ಕನಕಾಚಲ ಭಟ್ಟ ಮತ್ತು ಅವರ ತಂದೆ ತಿಮ್ಮಣ್ಣಾಚಾರ್ಯರು ಇಬ್ಬರೂ ಬಹಳ ನುರಿತ ವಿದ್ವಾಂಸರು ಮತ್ತು ಸಂಗೀತಗಾರರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಪತನದ ನಂತರ, ತಿಮ್ಮಣ್ಣಾಚಾರ್ಯರು ತಮ್ಮ ಪತ್ನಿ ಗೋಪಿಕಾಂಬ ಅವರೊಂದಿಗೆ ಕoಚಿಗೆ ಸ್ಥಳಾಂತರಗೊಂಡರು. ವೆಂಕಟನಾಥರಿಗೆ ಗುರುರಾಜ ಮತ್ತು ವೆಂಕಟಾಂಬ ಎಂಬ ಇಬ್ಬರು ಒಡಹುಟ್ಟಿದವರು ಇದ್ದರು. ಅವರ ತಂದೆಯ ಅಕಾಲಿಕ ಮರಣದ ನಂತರ, ವೆಂಕಟನಾಥ ಅವರ ಶಾಲಾ ಶಿಕ್ಷಣವು ಮಧುರೈನಲ್ಲಿದ್ದ ಅವರ ಸೋದರ ಮಾವ ಲಕ್ಷ್ಮಿ ನರಸಿಂಹಾಚಾರ್ಯರ ಆಧ್ವರ್ಯದಲ್ಲಿ ನಡೆಯಿತು. ಇಲ್ಲಿ ಅವರು ಸಂಗೀತದಲ್ಲಿಯೂ ತರಬೇತಿ ಪಡೆದರು. ನಂತರ ಅವರು ವಿವಾಹವಾದರು.
ವಿವಾಹದ ನಂತರ ಕುಂಭಕೋಣಕ್ಕೆ ಬಂದು ಶ್ರೀಸುಧೀಂದ್ರ ತೀರ್ಥರಲ್ಲಿ ದ್ವೈತ ಸಿದ್ಧಾಂತದಲ್ಲಿ ಉನ್ನತ ವ್ಯಾಸಂಗ ಮಾಡತೊಡಗಿದರು. ಇಲ್ಲಿ ಮಕ್ಕಳಿಗೆ ಸಂಸ್ಕೃತ ಮತ್ತು ವೇದಗಳನ್ನು ಕಲಿಸಲು ಮುಂದಾಗುತ್ತಾರೆ. ಯಾರಿಂದಲೂ ಏನೂ ಫಲವನ್ನು ಬಯಸದೆ ಎಲ್ಲರಿಗೂ ವಿದ್ಯಾದಾನ ಮಾಡುತ್ತಾರೆ.

ಶ್ರೀ ಸುಧೀಂದ್ರ ತೀರ್ಥರು ವೇದಾಂತ ಸಾಮ್ರಾಜ್ಯಕ್ಕೆ ತಕ್ಕಂತಹ ಉತ್ತರಾಧಿಕಾರಿಯನ್ನು ಹುಡುಕುತ್ತಿರುವಾಗ, ಅವರ ಕನಸಿನಲ್ಲಿ ಶ್ರೀಮೂಲರಾಮದೇವರೇ ಬಂದು ವೆಂಕಟನಾಥರನ್ನು ಶಿಷ್ಯರಾಗಿ ಸ್ವೀಕರಿಸುವಂತೆ ಸೂಚಿಸಿದರು. ಈ ವಿಷಯವನ್ನು ಸುಧೀಂದ್ರ ತೀರ್ಥರು ವೆಂಕಟನಾಥರಿಗೆ ತಿಳಿಸಿದಾಗ, ವೆಂಕಟನಾಥರು ಪತ್ನಿ ಮತ್ತು ಮಗನನ್ನು ನೆನಸಿ ಆಗುವುದಿಲ್ಲ ಎಂಬ ಉತ್ತರವನ್ನು ಕೊಡುತ್ತಾರೆ. ಆದರೆ ಇವರ ಕನಸಲ್ಲಿ ಸಾಕ್ಷಾತ್ ಸರಸ್ವತಿ ದೇವಿಯೇ ಬಂದು ಸನ್ಯಾಶ್ರವನ್ನು ಸ್ವೀಕರಿಸುವಂತೆ ಆಜ್ಞೆ ನೀಡುತ್ತಾಳೆ. ಆ ನಂತರ ಮನಸ್ಸು ಬದಲಿಸಿಕೊಂಡು ಫಾಲ್ಗುಣ ಶುದ್ಧ ಬಿದಿಗೆಯಂದು ತಂಜಾವೂರಿನಲ್ಲಿ ವಿಧ್ವಾಂಸರ ಸಮ್ಮುಖದಲ್ಲಿ ಸನ್ಯಾಸತ್ವವನ್ನು ಸ್ವೀಕರಿಸುತ್ತಾರೆ. ಅಂದೇ ಶ್ರೀ ರಾಘವೇಂದ್ರ ತೀರ್ಥ ರೆಂಬ ಹೆಸರನ್ನು ನಾಮಕರಣ ಮಾಡಲಾಯಿತು. ವೇದಾಂತ ಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕವನ್ನು ನೆರವೇರಿಸಲಾಯಿತು. ಆ ಬಳಿಕ ಭಕ್ತರು ಇವರನ್ನು ರಾಯರನ್ನಾಗಿ ಸ್ವೀಕರಿಸಿದರು ಎಂದು ಇತಿಹಾಸದ ಪುಟಗಳು ವಿವರಿಸುತ್ತವೆ ೧೬೨೪ ರಲ್ಲಿ, ರಾಘವೇಂದ್ರ ಸ್ವಾಮಿಗಳು ಕುಂಭಕೋಣಂ ಮಠದ ಪೀಠಾಧಿಪತಿ ಸ್ಥಾನವನ್ನು ವಹಿಸಿಕೊಂಡರು, ಇದನ್ನು ಹಿಂದೆ ವಿಜಯೀಂದ್ರ ಮಠ ಅಥವಾ ದಕ್ಷಿಣಾದಿ ಮಠ ಎಂದು ಕರೆಯಲಾಗುತ್ತಿತ್ತು ಮತ್ತು ಪ್ರಸ್ತುತ ಇದನ್ನು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠ ಎಂದು ಗುರುತಿಸಲಾಗಿದೆ. ವ್ಯಾಸರಾಜ ಮಠ ಮತ್ತು ರಾಘವೇಂದ್ರ ಮಠಗಳ ಜೊತೆಗೆ ಉತ್ತರಾದಿ ಮಠವನ್ನು ದ್ವೈತ ವೇದಾಂತದ ಮೂರು ಪ್ರಮುಖ ಸಂಸ್ಥೆಗಳೆಂದು ಪರಿಗಣಿಸಲಾಗಿದೆ ಮತ್ತು ಒಟ್ಟಾರೆಯಾಗಿ ಮಠತ್ರಯ ಎಂದು ಕರೆಯಲಾಗುತ್ತದೆ.

ಇವರ ಮೂಲ ಬೃಂದಾವನವು (ಸಶರೀರ) ಈಗಿನ ಆಂಧ್ರ ಪ್ರದೇಶದ ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿದೆ. ಕರ್ನಾಟಕದ ರಾಯಚೂರಿನಿಂದ ಸುಮಾರು ೧ ಘಂಟೆ ಪ್ರಯಾಣ. ಇಲ್ಲಿಗೆ ನಿತ್ಯವು ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಿಗೆಯವರೆಗೆ ಭವ್ಯ ಆರಾಧನೆ ನಡೆಯುತ್ತದೆ.

ಆರಾಧನೆಯ ಅಂಗವಾಗಿ ಏಳು ದಿನಗಳ ಕಾಲ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಮೊದಲ ದಿನವನ್ನು ಪೂರ್ವಾರಾಧನೆ , ಎರಡನೇ ದಿನವನ್ನು ಮಧ್ಯಾರಾಧನೆ ಮತ್ತು ಮೂರನೇ ದಿನವನ್ನು ಉತ್ತರಾರಾಧನೆ ಎಂದು ಕರೆಯಲಾಗುವುದು.ಇದನ್ನು ಓದಿ –“ತುಂಗಾ ತೀರದಲಿ ನಿಂತ ಯತಿವರ್ಯ “

ಭಕ್ತರು ಪೂಜೆ, ಗಾನ ಸೇವೆ, ಪರಿಮಳ ಪ್ರಸಾದ ವಿತರಣೆ ಮುಂತಾದ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಭಕ್ತರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಒತ್ತು ನೀಡಲಾಗುತ್ತದೆ. ಉಚಿತ ವೈದ್ಯಕೀಯ ಸೇವೆ, ಆ್ಯಂಬುಲೆನ್ಸ್ ಸೇವೆ ಮತ್ತು ಹೆಚ್ಚುವರಿ ಬಸ್ ವ್ಯವಸ್ಥೆಗಳನ್ನು ಮಾಡಲಾಗುತ್ತದೆ.

ಜೈ ಶ್ರೀ ಗುರು ರಾಘವೇಂದ್ರ

~ಸಂಪಿಗೆ ವಾಸು, ಬಳ್ಳಾರಿ

  • ರಾಜ್ಯದ ಕೆರೆಗಳಲ್ಲಿ ಪಿಒಪಿ ಗಣೇಶ ಮೂರ್ತಿಗಳ ವಿಸರ್ಜನೆಗೆ ನಿಷೇಧ
    by Team Varthaman
  • ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ
    by Team Varthaman
  • “ತುಂಗಾ ತೀರದಲಿ ನಿಂತ ಯತಿವರ್ಯ “
    by Team Varthaman
  • ಕಾಡಾನೆ ಮುಂದೆ ಸೆಲ್ಫಿ ಸಾಹಸ: ವ್ಯಕ್ತಿಗೆ ₹25,000 ದಂಡ
    by Team Varthaman
  • ಮೈಸೂರು ಡ್ರಗ್ಸ್ ಫ್ಯಾಕ್ಟರಿ ಪ್ರಕರಣ: NDPS ಕಾಯ್ದೆಯಡಿ 6 ಪ್ರಕರಣ ದಾಖಲೆ
    by Team Varthaman

ಕೋಲಾರದಲ್ಲಿ ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್ ಘಟಕ

ಸಾಸಿವೆ ಎಣ್ಣೆಯ ಒಳ್ಳೆತನ

ಹೆಣ್ಣು ಮಕ್ಕಳ ವ್ಯಥೆ

ಚಾತುರ್ಮಾಸ

(ಬ್ಯಾಂಕರ್ಸ್ ಡೈರಿ)

TAGGED:Kannada Articleಆರಾಧನೆಮಂತ್ರಾಲಯರಾಘವೇಂದ್ರ ಸ್ವಾಮಿ
Share This Article
Facebook Email Print
Leave a comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
KarnatakaLatest NewsMadikeri

ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ವ್ಯಕ್ತಿ ಸಾವು

Team Varthaman Team Varthaman April 25, 2025
ಮೈಸೂರಿನಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು
ಕೆಲಸ ಸಿಗದೆ ಬೇಸತ್ತ ಯುವಕ ನೇಣಿಗೆ ಶರಣು
ಧರ್ಮ ಒಡೆಯಲು ಹೊರಟಿರುವ ಸಿದ್ದು: ಪ್ರತಾಪ ಸಿಂಹ
ಉಚಿತ ಟಿಕೆಟ್ ಘೋಷಣೆ ಕಾಲ್ತುಳಿತಕ್ಕೆ ಕಾರಣ: IPS ಅಧಿಕಾರಿ ದಯಾನಂದ್ ಹೇಳಿಕೆ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • National News
  • Politics
  • IPL 2025
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?