ಬೆಂಗಳೂರು: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಮೊದಲಬಾರಿಗೆ ಚಾಂಪಿಯನ್ ಪಟ್ಟ ಕಿರೀಟ ಹಾಕಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸಂಭ್ರಮಾಚರಣೆಯ ವೇಳೆ ನಡೆದ ದುರ್ಘಟನೆಯಲ್ಲಿ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿದ್ದರು. ಈ ಕಾಲ್ತುಳಿತದ ಬೆನ್ನಲ್ಲೇ RCB ಫ್ರಾಂಚೈಸಿ ಮಾನವೀಯತೆ ಮೆರೆದಿದ್ದು, ಮೃತಪಟ್ಟ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದೆ.
ಜೂನ್ 4, 2025 ರಂದು ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ಸಂಭ್ರಮಾಚರಣೆಯ ವೇಳೆ ಉಂಟಾದ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ 11 ಮಂದಿ ಅಭಿಮಾನಿಗಳ ಕುಟುಂಬಗಳಿಗೆ ತಲಾ ₹25 ಲಕ್ಷ ರೂ. ಆರ್ಥಿಕ ನೆರವು ನೀಡಲಾಗಿದೆ. ಈ ಕುರಿತು ಆರ್ಸಿಬಿ ಫ್ರಾಂಚೈಸಿ ಅಧಿಕೃತ ಪ್ರಕಟಣೆ ಹೊರಡಿಸಿದೆ.
“ನಾವು ಕಳೆದುಕೊಂಡವರು ಅಭಿಮಾನಿಗಳಷ್ಟೇ ಅಲ್ಲ, ಅವರು ನಮ್ಮ ಕುಟುಂಬದ ಸದಸ್ಯರು. ಅವರ ಜಾಗವನ್ನು ಯಾವ ಸಹಾಯವೂ ತುಂಬಲಾರದು. ಆದರೂ ಗೌರವ ಸೂಚಕವಾಗಿ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ. ನೆರವು ನೀಡಲಾಗಿದೆ. ಇದು ಕೇವಲ ಆರ್ಥಿಕ ನೆರವಲ್ಲ, ಕರುಣೆ, ಒಗಟ್ಟು ಹಾಗೂ ಶಾಶ್ವತ ಕಾಳಜಿಯ ಸಂಕೇತವಾಗಿದೆ” ಎಂದು ಆರ್ಸಿಬಿ ಪ್ರಕಟಣೆ ತಿಳಿಸಿದೆ.ಇದನ್ನು ಓದಿ –ಉತ್ತರಾಖಂಡದಲ್ಲಿ ಮೇಘಸ್ಫೋಟ – 6 ಮಂದಿ ಸಾವು, 11 ಮಂದಿ ನಾಪತ್ತೆ
ಇದಲ್ಲದೆ, ‘RCB Cares’ ಎಂಬ ಹೆಸರಿನಲ್ಲಿ ಅಭಿಮಾನಿಗಳ ಸುರಕ್ಷತೆ ಹಾಗೂ ಬೆಂಬಲಕ್ಕಾಗಿ ದೀರ್ಘಕಾಲದ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಂಡ ಭರವಸೆ ನೀಡಿದೆ.