By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
    ಸಾವು ಬದುಕಿನ ನಡುವೆ
    January 28, 2026
    ವಾಸ್ತವ ವರ್ತಮಾನ
    January 24, 2026
    ಅರೋಗ್ಯ ಭಾಗ್ಯ
    January 24, 2026
  • Sports
  • National
  • International
  • Crime
Reading: ಜನಸಾಗರದ ನಡುವೆ ಸುತ್ತೂರು ರಥೋತ್ಸವ 
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Mysore > ಜನಸಾಗರದ ನಡುವೆ ಸುತ್ತೂರು ರಥೋತ್ಸವ 
KarnatakaMysoreTrending

ಜನಸಾಗರದ ನಡುವೆ ಸುತ್ತೂರು ರಥೋತ್ಸವ 

Team Varthaman
Last updated: January 17, 2026 6:15 PM
Team Varthaman
Published: January 17, 2026
Share
SHARE
  • ಅದ್ದೂರಿ ಮದುವೆ ಕೈಬಿಟ್ಟು, ಸರಳ ಮದುವೆ ಮಾಡಲು ಶಾಸಕ ಜಿ.ಟಿ.ದೇವೇಗೌಡ ಕರೆ

ಮೈಸೂರು, ಜ.17- ಜನಸಾಗರದ ಜಯಘೋಷಗಳ ನಡುವೆ ವೈಭವದ ರಥೋತ್ಸವ ಸಾಗುವ ಮೂಲಕ‌ ನಂಜನಗೂಡು ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಯ ಜಾತ್ರೆ ಮಹೋತ್ಸವ ಸಂಭ್ರಮ ಹೆಚ್ಚಿಸಿತು.

ಶನಿವಾರ ಬೆಳಿಗ್ಗೆ 11ಕ್ಕೆ ರಥೋತ್ಸವಕ್ಕೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ಲಕ್ಷಾಂತರ ಜನ ರಥೋತ್ಸವಕ್ಕೆ ಹಣ್ಣು ದವನ ಎಸೆದು ಪುನೀತರಾದರು.

ರಥೋತ್ಸವದ ಜಾತ್ರಾ ಮಹೋತ್ಸವದಲ್ಲಿ ಜಾನಪದ ಕಲಾತಂಡ, ನಾದಸ್ವರ, ವೀರಗಾಸೆ, ಡೊಳ್ಳು ಕುಣಿತ, ಜಾಂಜ್ ಮೇಳ,ಪೂಜಾ ಕುಣಿತ, ಗಾರುಡಿ ಗೊಂಬೆ , ತಮಟೆ ನಗಾರಿ, ಮ್ಯೂಸಿಕ್ ಡ್ರಮ್ಸ್, ಕೋಲಾಟ, ಮರಗಾಲು, ಕಂಸಾಳೆ, ದಾನಪಟ್ಟ, ವೀರಾಮಕ್ಕಳ, ತಮಟೆ, ಮಹಿಳಾ & ಪುರುಷರು ಚೆಂಡೆ,  ದಾಳಪಟ, ಕರಡಿ ಮಜಲು, ಸುಗ್ಗಿ ಕುಣಿತ, ಗೊರವರ ಕುಣಿತ, ನಾಸಿಕ್ ಡ್ರಮ್ಸ್, ಹುಲಿವೇಶ, ಜಾನ್ ಪಥಕ್, ಸೇರಿ ಒಟ್ಟು 33 ತಂಡಗಳು ಸಾಂಸ್ಕೃತಿಕ ವೈಭವ ನಡೆಸಿಕೊಟ್ಟವು.

Join WhatsApp Group

ಬಳಿಕ ನಡೆದ ಧಾರ್ಮಿಕ ವೇದಿಕೆ ಕಾರ್ಯಕ್ರಮವನ್ನು ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಆಹಾರ ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ.ದೇವೇಗೌಡ ಸೇರಿ ಅನೇಕರು ಉದ್ಘಾಟಿಸಿದರು.

ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ ಪ್ರತಿವರ್ಷದಂತೆ ಪರಂಪರೆಯಿಂದ ಜಾತ್ರಾ ಮಹೋತ್ಸವ ನಡೆಸಿಕೊಂಡು ಬುದ್ಧ , ಅಂಬೇಡ್ಕರ್, ಬಸವಣ್ಣರ ಚಿಂತನೆಗಳನ್ನು ಕಾರ್ಯರೂಪಕ್ಕೆ ತಂದು, ಎಲ್ಲರ ಸಮಾನ ಸಮಾನತೆಯನ್ನು ನಡೆಸಿಕೊಂಡು ಶ್ರೀ ಸುತ್ತೂರು ಮಠ ಸ್ವಾಮೀಜಿ ಬರುತ್ತಿರುವುದು ಸಂತಸದ ವಿಷಯ ಎಂದರು. ಈ ಮಠಕ್ಕೆ ಸೇವಕನಾಗಿ ಕೆಲಸ ಮಾಡುತ್ತೇನೆ. ಈ ಮಠ  ಶ್ರೇಷ್ಠವಾದ ಮಹತ್ವ ಪಡೆದಿದೆ. ಸಮಾಜದ ಸುಧಾರಣೆ ತರಲು ದಾರಿದೀಪವಾಗಿದೆ ಎಂದು ಗುಣಗಾನ ಮಾಡಿದರು.

ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಸಾವಿರಾರು ವರ್ಷಗಳ  ಪರಂಪರೆಯಿಂದ ನಡೆದುಕೊಂಡು ಶಿವರಾತ್ರಿಶ್ವರ ಸ್ವಾಮೀಜಿ  ದೂರದೃಷ್ಟಿ ಪಾಲನೆ ಮತ್ತು ಬಸವಣ್ಣರ 12ನೇ ಶತಮಾನದ ವಿಚಾರಗಳನ್ನು ಹಂಚಿಕೊಂಡು ಬಂದಿರುವ ಸುತ್ತೂರು ಜಾತ್ರೆ ಮಹೋತ್ಸವ ಪ್ರಪಂಚವನ್ನು ಸೆಳೆದಿದೆ. ಹಳ್ಳಿಯಲ್ಲಿ ಜಾನಪದ ಹಿಂದಿನ ಪರಂಪರೆಯಿಂದ ಬಂದಹಂತಹ ಕಲೆಯ ನೆನಪುಗಳನ್ನು ಮಾಡುತ್ತಿರುವುದು ಶ್ರೀ ಸುತ್ತೂರು ಮಠವಾಗಿದೆ. ಶಿಕ್ಷಣ ಜೊತೆಗೆ ಆರೋಗ್ಯ ಒತ್ತು ಕೊಟ್ಟು ನಿರ್ಮಾಣ ಮಾಡಿಕೊಂಡು ಬರುತ್ತಿರುವ ಶ್ರೀ ಮಠ, ರೈತರಿಗೆ ಕೃಷಿಗೆ ಹೆಚ್ಚು ಹೊತ್ತು ಕೊಡಬೇಕೆಂದು ತಜ್ಞರನ್ನು ಕರೆಸಿ ರೈತರಿಗೆ ತರಬೇತಿ ಕೊಡುತ್ತಾರೆ. ರೈತರಿಗೆ ಕೃಷಿಯ ಹೆಚ್ಚು ಅರಿವು ಮೂಡಿಸುವ ಶ್ರೀ ಸುತ್ತೂರು ಮಠ ದಿಂದ ಮಾತ್ರ ಸಾಧ್ಯ, ಸುತ್ತೂರು ಮಠದಲ್ಲಿ ಮದುವೆ ಆದವರು ಪುಣ್ಯವಂತರು, ಈ ಪುಣ್ಯ ಕ್ಷೇತ್ರದಲ್ಲಿ ಸರಳವಾಗಿ ಮದುವೆಯಾದರೆ ಬದುಕನ್ನು ಕಟ್ಟಿಕೊಳ್ಳಬಹುದು. ತಲೆಮಾರಿನಿಂದ ಜಮೀನನ್ನು ಉಳಿಸಿಕೊಳ್ಳಬಹುದು. ಆದರೆ ಇತ್ತೀಚಿಗೆ ಮದುವೆ ಮಾಡುತ್ತೇನೆ ಅಂತ ತಮ್ಮ ಜಮೀನನ್ನು ಉಳಿಸಿಕೊಳ್ಳದೆ ಮಾರಾಟ ಮಾಡಿ ಅದ್ದೂರಿಯಾಗಿ ಮದುವೆ ಮಾಡುವ ಪರಿಸ್ಥಿತಿಗಳನ್ನು ನೋಡುತ್ತಿದ್ದೇನೆ. ಆದರೆ ನನ್ನ ಇಬ್ಬರ ಮಕ್ಕಳನ್ನು ಧರ್ಮಸ್ಥಳದಲ್ಲಿ ಸರಳವಾಗಿ ಮದುವೆ ಮಾಡಿದ್ದೇನೆ. ಜಮೀನು ಮಾರ ಬದಲು ತಮ್ಮ ಹೆಣ್ಣು ಮಕ್ಕಳಿಗೆ ಕೊಟ್ಟರೆ ಜಮೀನು  ಉಳಿತಾಯವಾಗುತ್ತದೆ ಎಂದು ಜಾತ್ರೆಗೆ ಬಂದಂತಹ ಭಕ್ತರಿಗೆ ಕಿವಿಮಾತು ಹೇಳಿದರು.

ಮೈಸೂರು ಪ್ರಾದೇಶಿಕ ಆಯುಕ್ತರು ನಿತೇಶ್ ಪಾಟೀಲ್ ಮಾತನಾಡಿ, ಅನೇಕ ವೈಶಿಷ್ಟತೆ ಮೂಲ ಕಾರಣ, ಸುತ್ತೂರು ಸುತ್ತಿದರೆ ಕರ್ನಾಟಕದ ಅನೇಕ ವಿಚಾರಗಳು ಗೊತ್ತಾಗುವುದು, ಜಗತ್ತು ಪರಿಚಯ ಪಡೆದರೆ ಶ್ರೀ ಮಠಗಳಿಂದ ಮಾತ್ರ ಸಾಧ್ಯ, ಪರಂಪರೆ ಉಳಿಸಿಕೊಂಡು ಬರುತ್ತಿರುವ ಸಂಸ್ಥೆ ಸುತ್ತೂರು ಮಠ, ಸುತ್ತೂರುಮಠ ಶ್ರೀ ರಕ್ಷೆಯಾಗಿದೆ ಎಂದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿ‌ನ ಅಧ್ಯಕ್ಷ ಸಿ ಸೋಮಶೇಖರ್ ಮಾತನಾಡಿ  ವೈಶಿಷ್ಟತೆ ಕ್ಷೇತ್ರ, ಧಾರ್ಮಿಕ ಕ್ಷೇತ್ರ . ಪರಂಪರೆ ನಡೆದುಕೊಂಡು ಬಂದಿರುವ ಸಮ್ಮೇಳನ ಭಜನಾಮೇಳ ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ ಎಂದರು.ಇದನ್ನು ಓದಿ –ಲಂಚ ಸ್ವೀಕರಿಸುತ್ತಿದ್ದ ಅಬಕಾರಿ ಡಿಸಿ ಲೋಕಾಯುಕ್ತ ಬಲೆಗೆ

ಕಾರ್ಯಕ್ರಮದಲ್ಲಿ ಶಿವನಂದ್, ಕುಮಾರ್ ರಾಜಶೇಖರ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.

  • ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    by Team Varthaman
  • ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    by Team Varthaman
  • ಐಟಿ ದಾಳಿ ಭೀತಿ: ಕಾನ್ಫಿಡೆಂಟ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಆತ್ಮಹತ್ಯೆ
    by Team Varthaman
  • ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
    by Team Varthaman
  • ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
    by Team Varthaman
ಪತ್ನಿ ಕೊಲೆಗೆ ಸುಪಾರಿ: ಪತಿ ಬಂಧನ
IIT, IIM ಸೇರಿ 89 ಕಾಲೇಜುಗಳಿಗೆ ಯುಜಿಸಿ ನೋಟಿಸ್
ಭಾರತದ ಏರ್‌ಸ್ಟ್ರೈಕ್‌: 3 ನಿಮಿಷದ ದಾಳಿಯಲ್ಲಿ 80ಕ್ಕೂ ಹೆಚ್ಚು ಉಗ್ರರ ನಾಶ
ಮುಡಾ ಕೇಸ್​​ ಸಿಬಿಐಗೆ ಕೋರಿ ಸ್ನೇಹಿಮಯಿ ಕೃಷ್ಣ ಮೇಲ್ಮನವಿ
ಪಹಲ್ಗಾಮ್ ದಾಳಿ: NIA ಬಿಡುಗಡೆ ಮಾಡಿದ ನಾಲ್ವರು ಶಂಕಿತ ಉಗ್ರರ ಚಿತ್ರಗಳು
TAGGED:latestnewsMysore NewsSuttur jatre
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Main NewsTrending

ಭಾರತ 4ನೇ ಅತಿದೊಡ್ಡ ಆರ್ಥಿಕ ರಾಷ್ಟ್ರ : ನೀತಿ ಆಯೋಗ ಸಿಇಒ ಸ್ಪಷ್ಟನೆ

Team Varthaman
Team Varthaman
May 25, 2025
ಮೈಸೂರಲ್ಲಿ ಲಾರಿ ಸಂಚಾರ ಬಂದ್
ನಾಪತ್ತೆಯಾಗಿದ್ದ ಕೃಷಿ ವಿಜ್ಞಾನಿ ಡಾ. ಸುಬ್ಬಣ್ಣ ಅಯ್ಯಪ್ಪನ್ ಶವವಾಗಿ ಪತ್ತೆ
ಮುಂದಿನ ಮೂರು ದಿನ ರಾಜ್ಯದ ಹಲವೆಡೆ ಭಾರೀ ಮಳೆಯ ಮುನ್ಸೂಚನೆ
ಹಾಸನಾಂಬೆ ದರ್ಶನದಿಂದ ಮರಳುತ್ತಿದ್ದ ವೇಳೆ ಭೀಕರ ಅಪಘಾತ – ಇಬ್ಬರ ದುರ್ಮರಣ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?