ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನ (TTD) ಇದೀಗ ನಂದಿನಿ ತುಪ್ಪಕ್ಕೆ ವಿಶಿಷ್ಟ ಆದ್ಯತೆ ನೀಡಿದ್ದು, ಕೇವಲ ಕರ್ನಾಟಕ ಹಾಲು ಮಹಾಮಂಡಳ (KMF) ನಿಂದಲೇ 10 ಲಕ್ಷ ಕೆಜಿ ತುಪ್ಪ ಪೂರೈಕೆಗೆ ಅಧಿಕೃತ ಬೇಡಿಕೆ ಸಲ್ಲಿಸಿದೆ. “ನಂದಿನಿಯೇ ಬೇಕು, ಬೇರೆ ಬೇಡ” ಎಂಬ ಸ್ಪಷ್ಟ ನಿಲುವು ಪ್ರದರ್ಶಿಸಿರುವ ಟಿಟಿಡಿ, ಯಾವುದೇ ಖಾಸಗಿ ಸಂಸ್ಥೆ ಅಥವಾ ಬೇರೆ ಬ್ರ್ಯಾಂಡ್ನ ತುಪ್ಪವನ್ನು ಬಳಸಲು ನಿರಾಕರಿಸಿದೆ.
ಮಂಡ್ಯದ ಹಾಲು ಒಕ್ಕೂಟದಿಂದ ಪ್ರಾರಂಭ:
ಈ ಬೇಡಿಕೆಗೆ ಸ್ಪಂದಿಸಿದ ಕೆಎಂಎಫ್, ಸೋಮವಾರ ಮೊದಲ ಹಂತದಲ್ಲಿ 2.50 ಲಕ್ಷ ಕೆಜಿ ತುಪ್ಪವನ್ನು ತಿರುಪತಿಗೆ ಕಳುಹಿಸಿದೆ. ಈ ತುಪ್ಪವನ್ನು ಮಂಡ್ಯದ ಹಾಲು ಒಕ್ಕೂಟದಿಂದ ಪೂರೈಕೆ ಮಾಡಲಾಗಿದ್ದು, ಉಳಿದ ತುಪ್ಪವನ್ನು ಇತರ ಹಾಲು ಒಕ್ಕೂಟಗಳಿಂದ ಕಳುಹಿಸಲಾಗುವುದು.
ಹಿಂದಿನ ಬದಲಾವಣೆಯ ವಿವಾದ:
ಈಗಾಗಲೇ ಟಿಟಿಡಿಯಲ್ಲಿ ಲಡ್ಡು ತಯಾರಿಕೆಗೆ ಕೆಎಂಎಫ್ನ ತುಪ್ಪ ಬಳಕೆಯಾಗುತ್ತಿತ್ತು. ಆದರೆ, KMF ತುಪ್ಪದ ಬೆಲೆ ಅಧಿಕವಾಗಿದೆ ಎಂಬ ಕಾರಣ ನೀಡಿ ಹಿಂದಿನ ಜಗನ್ ಮೋಹನ್ ರೆಡ್ಡಿ ಸರ್ಕಾರವು ಖಾಸಗಿ ಡೈರಿಯಿಂದ ತುಪ್ಪ ಖರೀದಿ ಆರಂಭಿಸಿತ್ತು.ಇದನ್ನು ಓದಿ –ಚಿನ್ನ-ಬೆಳ್ಳಿಯ ಬೆಲೆಯಲ್ಲಿ ಭರ್ಜರಿ ಇಳಿಕೆ
ಆದರೆ, ಖಾಸಗಿ ಡೈರಿಗಳಿಂದ ಪೂರೈಕೆ ಮಾಡಲಾದ ತುಪ್ಪದಲ್ಲಿ ಗುಣಮಟ್ಟ ಕೊರತೆ, ಅವ್ಯವಹಾರ ಮತ್ತು ಕಲಬೆರಕೆ ಇದ್ದದ್ದು ಬಯಲಿಗೆ ಬಂದು, ಈ ವಿಚಾರದ ಬಗ್ಗೆ ನೂತನ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದರು. ಈ ಹಿನ್ನೆಲೆ ಟಿಟಿಡಿ ಇದೀಗ ಖಾಸಗಿ ಕಂಪನಿಗಳ ಮೇಲೆ ನಂಬಿಕೆ ಕಳೆದು, ಮರುಕಳಿಸಿ ನಂದಿನಿ ತುಪ್ಪವನ್ನು ಮಾತ್ರ ಬಳಕೆಗೆ ನಿರ್ಧರಿಸಿದೆ.