ಶ್ರೀರಂಗಪಟ್ಟಣ : ಬೆಂಗಳೂರಿನಲ್ಲಿ ಬಿಬಿಎ ಓದುತ್ತಿರುವ 7 ವಿದ್ಯಾರ್ಥಿಗಳು ಇಂದು ಪ್ರವಾಸಕ್ಕೆಂದು ತಾಲೂಕಿನ ಬೆಳಗೊಳ ಹತ್ತಿರದ ಎಡಮುರಿ ಫಾಲ್ಸ್ ಈಜಲು ನದಿಗೆ ಇಳಿದ ವೇಳೆ ಇಬ್ಬರು ವಿದ್ಯಾರ್ಥಿಗಳು ಸುಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಸುಳಿಗೆ ಸಿಲುಕಿದ ಇಬ್ಬರನ್ನು ಸ್ಥಳೀಯರು, ಸ್ನೇಹಿತರು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟರು.
ವೆಂಕಟೇಶ್ ಹಾಗೂ ವಿಲಿಯಂ ಶ್ಯಾಮ್ ಮೃತ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಅಗ್ನಿಶಾಮಕ ಸಿಬ್ಬಂದಿ ಬಂದು ಮೃತದೇಹಗಳನ್ನು ಹೊರಗೆ ತೆಗೆದರು.
ಇದನ್ನು ಓದಿ –SBI ಗೆ ₹2,929 ಕೋಟಿ ನಷ್ಟ: ಅನಿಲ್ ಅಂಬಾನಿ, RCOM ವಿರುದ್ಧ ಪ್ರಕರಣ
ಘಟನೆಗೆ ಸಂಬಂಧಿಸಿದಂತೆ ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.