By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Politics
    Politics
    Politics is the art of looking for trouble, finding it everywhere, diagnosing it incorrectly and applying the wrong remedies.
    Show More
    Top News
    Latest News
  • Articles
    ArticlesShow More
    ನಾನು ಕಂಡಂತೆ ಜೀವನ ಶೈಲಿಯಲ್ಲಿ ಬದಲಾವಣೆ
    August 3, 2025
    ಪಾರಂಪರಿಕ ಹಣ್ಣು ಬೇಲದ ಉಪಯೋಗಗಳು
    August 2, 2025
    ಕಣ್ಣಿನ ಮೇಕಪ್ ಬದಿಗೊತ್ತಿ ಕಣ್ಣನ್ನು ಕಾಪಾಡಿ
    August 1, 2025
    ದೇಶಾದ್ಯಂತ ವ್ಯಸನ ಮುಕ್ತ ಜಾಗೃತಿ ಮೂಡಿಸಿದ ಶ್ರೀಗಳು | ಆಗಸ್ಟ್ 01 ವ್ಯಸನ ಮುಕ್ತ ದಿನ
    August 1, 2025
    ನಾಗರ ಚೌತಿ ಮತ್ತು ಪಂಚಮಿ
    July 28, 2025
  • Sports
  • National
  • International
  • Crime
  • Contact Us
Reading: ಪಾರಂಪರಿಕ ಹಣ್ಣು ಬೇಲದ ಉಪಯೋಗಗಳು
Share
Font ResizerAa
VarthamanVarthaman
  • Home
  • Karnataka
  • Politics
  • Articles
  • Sports
  • National
  • International
  • Crime
  • Contact Us
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Politics
  • Articles
  • Sports
  • National
  • International
  • Crime
  • Contact Us
Follow US
Varthaman > Blog > Articles > ಪಾರಂಪರಿಕ ಹಣ್ಣು ಬೇಲದ ಉಪಯೋಗಗಳು
Articles

ಪಾರಂಪರಿಕ ಹಣ್ಣು ಬೇಲದ ಉಪಯೋಗಗಳು

Team Varthaman
Last updated: August 2, 2025 5:14 am
Team Varthaman Published August 2, 2025
Share
SHARE

ಬೆಲ್ ಅಥವಾ ಬೇಲ ಅಸಾಮಾನ್ಯ ಹಣ್ಣು ಮತ್ತು ಪೌಷ್ಟಿಕಾಂಶಗಳ ಆಗರ. ಇದನ್ನು ಸಾಮಾನ್ಯವಾಗಿ ಸೇವನೆ ಮಾಡದೇ ಇದ್ದರೂ, ಇದರಲ್ಲಿರುವ ಔಷಧೀಯ ಗುಣದಿಂದಾಗಿ ಇದನ್ನು ಅನೇಕ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಸಾಂಪ್ರದಾಯಿಕ ಔಷಧದಲ್ಲಿ ಅನೇಕ ಉಪಯೋಗಗಳನ್ನು ಹೊಂದಿರುವ ಈ ಪ್ರಮುಖ ಔಷಧೀಯ ಸಸ್ಯದ ಹಣ್ಣು ಮಾತ್ರವಲ್ಲ ಬೇರು, ಎಲೆ, ಕಾಂಡ, ಹಣ್ಣು ಮತ್ತು ಬೀಜದ ಬೀಜಗಳು ವಿವಿಧ ರೋಗಗಳ ಚಿಕಿತ್ಸೆಯಲ್ಲಿ ಉಪಯೋಗ ಮಾಡಲಾಗುತ್ತದೆ.

ಮಧುಮೇಹದಿಂದ ಹಿಡಿದು, ಮಲಬದ್ಧತೆ ನಿವಾರಣೆ ಮಾಡುವವರೆಗೆ ಅನೇಕ ಪ್ರಯೋಜನಗಳನ್ನು ಹೊಂದಿದೆ.

Join WhatsApp Group

ರೂಟೇಸಿ ಕುಟುಂಬಕ್ಕೆ ಸೇರಿದ ಬೇಲದ ವೈಜ್ಞಾನಿಕ ಹೆಸರು ಫೆರೋನಿಯ. ಇದಕ್ಕೆ ಕಪಿತ್ಥ , ದಂತಶಠ ಅಂತಲೂ ಕರೆಯುತ್ತಾರೆ. ಮಹಾಗಣಪತಿಗೆ ಪ್ರಿಯವಾದ ಹಣ್ಣು. ರಾಮನಿಗೆ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಲು ಕಪಿಗಳು ಈ ಹಣ್ಣನ್ನು ಕೊಟ್ಟವು ಎಂಬ ಪ್ರತೀತಿ ಕೂಡ ಇದೆ. ಇದಕ್ಕೆ ಕರಭ ವಲ್ಲಭ ಎಂದೂ ಕರೆಯುತ್ತಾರೆ. ಅಂದರೆ ಆನೆಗಳಿಗೆ ಇಷ್ಟ ಎಂದರ್ಥ. ಹಾಗಾಗಿಯೇ ಇಂಗ್ಲಿಷ್ ಭಾಷೆಯಲ್ಲಿ ಇದಕ್ಕೆ ಎಲಿಫೆಂಟ್ ಆಪಲ್ ಎಂದು ಕರೆಯುತ್ತಾರೆ. ವುಡ್ ಆಪಲ್ ಎಂಬುದು ಸಾಮಾನ್ಯವಾಗಿ ಎಲ್ಲರೂ ಕರೆಯುವ ಹೆಸರು. ರಾಮನವಮಿಯ ದಿನ ಇದರ ಪಾನಕವನ್ನು ಸೇವಿಸಲು ಕಪಿಗಳಿಗೆ ಇಷ್ಟ ಎಂಬುದೊಂದೇ ಕಾರಣ ಇರಲಿಕ್ಕಿಲ್ಲ. ಈ ಹಣ್ಣಿಗಿರುವ ಗುಣಗಳು ಬೇಸಿಗೆಗೆ ಎಂದೇ ಮಾಡಿದಂತಿದೆ. ಸಿಹಿ, ಹುಳಿ ರುಚಿಗಳನ್ನು ಹೊಂದಿದ್ದು ಜಿಡ್ಡಿನ ಅಂಶ ಮತ್ತು ತಂಪು ಗುಣವನ್ನು ಹೊಂದಿದೆ. ಹಾಗಾಗಿ ಸಹಜವಾಗಿ ನಮಗೆ ಬೇಸಿಗೆಯಲ್ಲಿ ಉಷ್ಣತೆಯ ಕಾರಣದಿಂದ ಉಂಟಾಗುವ ಹಲವು ತೊಂದರೆಗಳನ್ನು ಇದು ತಡೆಯುತ್ತದೆ ಮತ್ತು ಆಗಲೇ ತೊಂದರೆಗಳನ್ನು ಅನುಭವಿಸುತ್ತಿರುವವರಿಗೆ ರೋಗ ನಿವಾರಣೆಯಲ್ಲಿ ಕೂಡ ಅನುಕೂಲ ಮಾಡಿಕೊಡುತ್ತದೆ. ಸಂಹಿತೆಗಳಲ್ಲಿ ಇದರ ವಿವರಣೆ ಮಾಡುವಾಗ ತ್ರಿದೋಷಜಿತ್ ಎಂದು ಕರೆದಿದ್ದಾರೆ. ಅಂದರೆ ವಾತ, ಪಿತ್ತ ಮತ್ತು ಕಫ ಮೂರೂ ದೋಷಗಳನ್ನು ನಿಯಂತ್ರಿಸುತ್ತದೆ ಎಂದರ್ಥ.

ಕಾಡಿನಲ್ಲಿ ಬೆಳೆಯುವ ಬೇಲದ(ಕಪಿತ್ಥ) ಹಣ್ಣುಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾದ ವಿಟಮಿನ್‌ಗಳು ಸಿಗುತ್ತವೆ.ಈ ಹಣ್ಣಿನಲ್ಲಿ ಪ್ರೋಟೀನ್, ವಿಟಮಿನ್, ವಿಟಮಿನ್ ಸಿ, ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಬಿ-ಕಾಂಪ್ಲೆಕ್ಸ್, ಖನಿಜಗಳು, ಪೊಟ್ಯಾಸಿಯಂ, ಕ್ಯಾಲ್ಸಿಯಂ, ಮೆಗ್ನೀಸಿಯಂ, ಸತು, ತಾಮ್ರ ಮತ್ತು ಕಬ್ಬಿಣದ ಅಂಶಗಳಿವೆ.
ಈ ಹಣ್ಣಿನ ತಿರುಳು ಹುಳಿಮಿಶ್ರಿತ ಸಿಹಿಯಾಗಿದ್ದು, ಪಾನಕ ಮಾಡಿ ಕುಡಿಯಲು ಯೋಗ್ಯವಾಗಿದೆ. ಬಿಸಿಲಿನ ತಾಪಕ್ಕೆ ಇದು ತಂಪನ್ನೀಯುತ್ತದೆ. ಮರದ ಅಂಟನ್ನು ಬಣ್ಣಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಬೇಲದ ಹಣ್ಣಿನ ತಿರುಳಿಗೆ ಬೇಧಿ, ಆಮಶಂಕೆ ಮತ್ತಿತರ ಕಾಯಿಲೆಗಳಿಗೆ, ಒಸಡನ್ನು ಗಟ್ಟಿಗೊಳಿಸಲು, ಗಂಟಲು ಹುಣ್ಣಿನ ಉಪಶಮನಕ್ಕೆ, ಸಿಪ್ಪೆಯ ಕಷಾಯ ಜ್ವರ ನಿವಾರಣೆಗೂ ಇದು ರಾಮಬಾಣ.

ಬೇಲದ ಹಣ್ಣಿನ ಉಪಯೋಗಗಳು :

  1. ಈ ಹಣ್ಣನ್ನು ಬೆಲ್ಲದ ಜೊತೆ ಸೇರಿಸಿ ತಿನ್ನುವುದರಿಂದ ಜೀರ್ಣ ಕ್ರಿಯೆ ಉತ್ತಮಗೊಳಿಸುತ್ತದೆ, ಹಾಗೂ ಮಲಬದ್ಧತೆಗಳಂತ ಸಮಸ್ಯೆಗಳನ್ನು ನಿವಾರಿಸುತ್ತದೆ.ಹೊಟ್ಟೆಯಲ್ಲಾಗುವ ಅಲ್ಸರ್ಗಳಿಗೆ ಇದು ರಾಮ ಬಾಣವಾಗಿ ಕೆಲಸ ಮಾಡುತ್ತದೆ. 
  2. ಇದರಲ್ಲಿನ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  3. ಈ ಹಣ್ಣು ಮಕ್ಕಳಲ್ಲಿ ಅವರ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪಾತ್ರವಹಿಸುತ್ತದೆ. .
  4. ಬೇಸಿಗೆಯಲ್ಲಿ ಕಾಡುವ ಸುಸ್ತು, ನಿಶಕ್ತಿ, ತಲೆಸುತ್ತಿಗೆ ಈ ಹಣ್ಣನ್ನ ತಿಂದರೆ ಇಲ್ಲವೇ ಇದರ ಜ್ಯೂಸ್‌ ಮಾಡಿ ಕುಡಿದರೆ ದೇಹದಲ್ಲಿ ಚೈತನ್ಯ ಮೂಡುವುದು ಮಾತ್ರವಲ್ಲ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ.
  5. ಅಧಿಕ ಬಿಪಿ ಸಮಸ್ಯೆಯಿಂದ ತೊಂದರೆಗೆ ಒಳಗಾದವರು ಅಂದರೆ, ಅಧಿಕ ರಕ್ತದೊತ್ತಡ ಹೊಂದಿರುವವರು ಪ್ರತಿದಿನ ಬೇಲದ ಜ್ಯೂಸ್ ಅನ್ನು ಸೇವಿಸಬಹುದು. ಇದರಲ್ಲಿ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಕಂಡುಬರುತ್ತದೆ ಮತ್ತು ಇದು ಹೈ ಬಿಪಿಯನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಇದಲ್ಲದೆ ಇದು ನರಗಳನ್ನು ಶಾಂತಗೊಳಿಸಲು ಕೆಲಸ ಮಾಡುತ್ತದೆ.
  6. ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಇರುವವರಿಗೂ ಬೇಲದ ಜ್ಯೂಸ್ ಉತ್ತಮ ಪರಿಹಾರವಾಗಿದೆ. ಬೇಲದ ಹಣ್ಣಿನಲ್ಲಿ ಸಾಕಷ್ಟು ಕಬ್ಬಿಣಾಂಶವಿದ್ದು, ಇದು ರಕ್ತ ಮತ್ತು ರಕ್ತದ ಶುದ್ದೀಕರಣವನ್ನು ಮಾಡುತ್ತದೆ.
  7. ವಿಟಮಿನ್ ಎ, ಬಿ ಮತ್ತು ಸಿ ಸೇರಿದಂತೆ ದೇಹವನ್ನು ಆರೋಗ್ಯವಾಗಿಡಲು ಕೆಲಸ ಮಾಡುವವಂತ ವಿಟಮಿನ್‌ಗಳು ಬೇಲದ ಹಣ್ಣಿನಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದು ಹೃದಯವನ್ನು ಆರೋಗ್ಯವಾಗಿಡುತ್ತದೆ ಮತ್ತು ದೃಷ್ಟಿ ಸುಧಾರಿಸುತ್ತದೆ.

ಬಲ್ಲವರೇ ಬಲ್ಲರು ಬೇಲದ ರುಚಿ

ಹಣ್ಣಿನ ಜಾಮ್ : ಬೇಕಾಗುವ ಸಾಮಗ್ರಿ: ಬೇಲದ ಹಣ್ಣಿನ ಪಲ್ಪ್ ಒಂದು ಕಪ್, ಸಕ್ಕರೆ 2 ಕಪ್, ನೀರು ಅರ್ಧ ಕಪ್, ಏಲಕ್ಕಿ 4,

ಮಾಡುವ ವಿಧಾನ: ಮೊದಲಿಗೆ ಸಕ್ಕರೆ ಮತ್ತು ನೀರು ಹಾಕಿ ಕುದಿಯಲು ಬಿಡಿ. ಕುದಿ ಬಂದ ನಂತರ ಹಣ್ಣಿನ ಪಲ್ಪ್ ಹಾಕಿ. ಪಾಕ ಬರುವವರೆಗೂ ಕುದಿಸಿ. ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿದರೆ ಬೇಲದ ಹಣ್ಣಿನ ಜಾಮ್ ಸವಿಯಲು ಸಿದ್ಧ.

ರುಚಿಯಾದ ಚಟ್ನಿ

ಬೇಕಾಗುವ ಸಾಮಗ್ರಿ: ಬೇಲದ ಹಣ್ಣು ಅರ್ಧ, ಕೊತ್ತಂಬರಿ ಸೊಪ್ಪು ಒಂದು ಕಟ್ಟು, ತೆಂಗಿನ ಕಾಯಿ ಒಂದು ಕಪ್, ಉಪ್ಪು, ಒಣ ಮೆಣಸು

ಮಾಡುವ ವಿಧಾನ: ಒಗ್ಗರಣೆಗೆ ಎಣ್ಣೆ, ಸಾಸಿವೆ, ಜೀರಿಗೆ ಕರಿಬೇವು, ಮೊದಲು ಒಣಮೆಣಸು ಮತ್ತು ಕೊತ್ತುಂಬರಿ ಸೊಪ್ಪನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದುಕೊಳ್ಳಿ. ಅದಕ್ಕೆ ಉಳಿದ ಎಲ್ಲಾ ವಸ್ತುಗಳನ್ನು ಹಾಕಿ ನುಣ್ಣನೆ ರುಬ್ಬಿ, ಒಗ್ಗರಣೆ ಕೊಡಿ. ಈಗ ಸವಿಯಲು ಚಟ್ನಿ ಸಿದ್ದ. ಇದು ಹುಳಿ, ಸಿಹಿ ಮತ್ತು ಖಾರ ಮಿಶ್ರಿತವಾಗಿರುತ್ತದೆ.

ಪುಳಿಯೋಗರೆ

ಬೇಕಾಗುವ ಸಾಮಗ್ರಿಗಳು:  ಬೇಲದ ಹಣ್ಣು, ಉಪ್ಪು, ಒಣಮೆಣಸು ಉದುರಾದ ಅನ್ನ, ಒಣಮೆಣಸು ಆರು, ಉದ್ದಿನ ಬೇಳೆ 2 ಚಮಚ, ಕಡಲೇಬೇಳೆ 2 ಚಮಚ, ಕೊತ್ತಂಬರಿ ಬೀಜ 2 ಚಮಚ, ಜೀರಿಗೆ 2 ಚಮಚ, ಮೆಂತೆ , ಇಂಗು, ಅರಿಷಿಣ, ಕೊಬ್ಬರಿ ತುರಿ, ಕೊಬ್ಬರಿ ಎಣ್ಣೆ, ಒಗ್ಗರೆಣೆಗೆ ಎಣ್ಣೆ , ಶೇಂಗಾ, ಉದ್ದಿನ ಬೇಳೆ, ಕರಿಬೇವು.
ಮಾಡುವ ವಿಧಾನ: ಮೊದಲು ಎಲ್ಲಾ ಮಸಾಲ ಪದಾರ್ಥಗಳನ್ನು ಹುರಿದು ಪುಡಿಮಾಡಿಕೊಳ್ಳಿ. ಒಗ್ಗರೆಣೆಗೆ ಇಟ್ಟು ಉಳಿದ ವಸ್ತು ಹಾಕಿ. ಅದಕ್ಕೆ ಬೇಲದ ಹಣ್ಣನ್ನು ಕಿವುಚಿ ಹಾಕಿ. ಉಪ್ಪು ಹಾಕಿ, ಕುದಿಸಿ. ಆಮೇಲೆ ಮಸಾಲ ಪುಡಿ ಹಾಕಿ, ಕುದಿಸಿ, ಇಳಿಸಿ. ನಂತರ ಉದುರಾದ ಅನ್ನ ಹಾಕಿ ಕಲೆಸಿ. ಈಗ ಬೇಲದ ಹಣ್ಣಿನ ಪುಳಿಯೊಗರೆ ರೆಡಿ. ಹಣ್ಣಿನ ಹುಳಿ ಮತ್ತು ಸಿಹಿಯ ಪ್ರಮಾಣ ನೋಡಿಕೊಂಡು, ಬೇಕಾದರೆ ಸ್ವಲ್ಪ ಸೇರಿಸಿಕೊಳ್ಳಿ.

ತಂಪಿಗೆ ಪಾನಕ

ಬೇಕಾಗುವ ಸಾಮಗ್ರಿ: ಬೇಲದ ಹಣ್ಣು 1, ಬೆಲ್ಲ , ಏಲಕ್ಕಿ ಪುಡಿ ಸ್ವಲ್ಪ, ನೀರು, ಚಿಟಿಕೆ ಉಪ್ಪು
ಮಾಡುವ ವಿಧಾನ: ಮೊದಲು ಹಣ್ಣಿನ ಪಲ್ಪ್ ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ನೀರು ಹಾಕಿ ಕಿವುಚಿ. ನಂತರ ಶೋಧಿಸಿ. ಉಪ್ಪು ಮತ್ತು ಸಿಹಿಗಾಗಿ ಬೆಲ್ಲ ಹಾಕಿ. ಚೆನ್ನಾಗಿ ಕದಡಿ. ಏಲಕ್ಕಿ ಪುಡಿ ಹಾಕಿ. ಅಗತ್ಯವಿರುವಷ್ಟು ತಣ್ಣನೆ ನೀರು ಹಾಕಿ. ಪಾನಕ ಕುಡಿಯಲು ಸಿದ್ಧ.

ಶ್ರೀಮತಿ ಸೌಮ್ಯ ಸನತ್ ✍️

  • ನಟಿ ರಮ್ಯಾ ಗೆ ಅಶ್ಲೀಲ ಮೆಸೇಜ್ : 48 ಐಪಿ ವಿಳಾಸ ಪತ್ತೆ ಹಚ್ಚಿದ ಸಿಸಿಬಿ
    by Team Varthaman
  • ಧರ್ಮಸ್ಥಳ ಪ್ರಕರಣ: ಇಂದು 11ನೇ ಪಾಯಿಂಟ್‌ನಲ್ಲಿ ಉತ್ಖನನ ಆರಂಭಿಸಿದ ಎಸ್‌ಐಟಿ
    by Team Varthaman
  • ಸಾರಿಗೆ ನೌಕರರ ಮುಷ್ಕರ: KSRTC ಬಸ್‌ಗೆ ಕಲ್ಲು ತೂರಾಟ
    by Team Varthaman
  • ನಾಳೆ ಬೆಳಗ್ಗೆ 6ರಿಂದ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತ
    by Team Varthaman
  • ದಸರಾ-2025 ಗಜಪಯಣಕ್ಕೆ ಚಾಲನೆ
    by Team Varthaman

ನೀಲಿ ಸುಂದರಿ ನೇರಳೆ

ಶೋಷಣೆಯ ಮತ್ತೊಂದು ಮುಖ 

ಪತಂಜಲಿ: ವ್ಯಾಕರಣ ಮತ್ತು ಯೋಗದ ಯುಗಪುರುಷ

ಕರುಣೆಯ ವಾರಿಧಿ ನಮ್ಮ ಗುರುನಾಥ

ಅಕ್ಷಯ ತೃತೀಯ 2025: ಅದೃಷ್ಟ ಮತ್ತು ಸಮೃದ್ಧಿಗಾಗಿ ಈ 6 ವಸ್ತುಗಳನ್ನು ಖರೀದಿಸಿ!

TAGGED:Kannada Articlewood appleಬೇಲದ ಹಣ್ಣು
Share This Article
Facebook Email Print
Leave a comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruCrimeKarnatakaTrending

ವಂಚನೆ ಪ್ರಕರಣ: ಐಶ್ವರ್ಯಾ ಗೌಡಗೆ ಇಡಿಯಿಂದ ಬಿಗ್ ಶಾಕ್

Team Varthaman Team Varthaman June 23, 2025
ದೊಡ್ಡ ವಿದ್ಯಾವಂತರೆಲ್ಲಾ ವಿವೇಕಿಗಳೇ……….?
ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಸ್ಫೋಟಕ ವಸ್ತು ಪತ್ತೆ
ಲೈಂಗಿಕ ಕಿರುಕುಳದ ಆರೋಪ: ವಿದ್ಯಾರ್ಥಿನಿ ಆತ್ಮಹತ್ಯೆ
ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • National News
  • Politics
  • IPL 2025
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?