- ಹಲವು ವರ್ಷಗಳ ಬಳಿಕ ಮೇ ತಿಂಗಳಲ್ಲೇ 100 ಅಡಿ ಭರ್ತಿ
ಮಂಡ್ಯ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಭಾರೀ ಮಳೆಗೆ ಪ್ರತಿಫಲವಾಗಿ, ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ (ಕೃಷ್ಣರಾಜ ಸಾಗರ) ಜಲಾಶಯದಲ್ಲಿ ಕೇವಲ ನಾಲ್ಕು ದಿನಗಳಲ್ಲಿ 11 ಅಡಿ ನೀರಿನ ಮಟ್ಟ ಹೆಚ್ಚಾಗಿದೆ. ಇದರ ಫಲವಾಗಿ, ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿ ಮೇ ತಿಂಗಳಲ್ಲೇ ಜಲಾಶಯವು 100 ಅಡಿ ಮಟ್ಟ ತಲುಪಿದೆ.
ಹಳೆ ಮೈಸೂರು ಭಾಗದ ನೀರಿನ ಮುಖ್ಯ ಮೂಲವಾದ ಕೆಆರ್ಎಸ್ ಅಣೆಕಟ್ಟೆಗೆ ಉತ್ತಮ ಒಳಹರಿವು ಸಿಕ್ಕಿದ್ದು, ಇನ್ನು ಕೆಲವು ದಿನಗಳ ಕಾಲ ಇದೇ ರೀತಿ ಮಳೆಯಾದರೆ ಜೂನ್ ಎರಡನೇ ವಾರದೊಳಗೆ ಜಲಾಶಯವು ಪೂರ್ಣವಾಗಿ ಭರ್ತಿಯಾಗುವ ಸಾಧ್ಯತೆಯಿದೆ. ಮುಂಗಾರು ಆರಂಭದಲ್ಲಿಯೇ ಧಾರಾಕಾರ ಮಳೆಯಾಗುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
ಇದೇ ವೇಳೆ ನಾಲ್ಕು ದಿನಗಳ ಹಿಂದೆ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 89 ಅಡಿಗೆ ಇಳಿದಿದ್ದರಿಂದ ಕುಡಿಯುವ ನೀರಿನ ಕೊರತೆಯ ಭೀತಿ ಜನರಲ್ಲಿ ಮೂಡಿತ್ತು. ಆದರೆ ಈಗ ಮಳೆ ಆರ್ಭಟದಿಂದ ಪರಿಸ್ಥಿತಿ ಪರಿವರ್ತಿತವಾಗಿದೆ.
ಕ್ಲೀಪ್ ಗರಿಷ್ಠ 124.80 ಅಡಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 100.10 ಅಡಿಗೆ ತಲುಪಿದೆ. ಇದು 49.452 ಟಿಎಂಸಿ (TMC) ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 22.222 ಟಿಎಂಸಿ ನೀರು ಸಂಗ್ರಹವಾಗಿದೆ. ಈಗಿನ ಒಳಹರಿವು 19,448 ಕ್ಯುಸೆಕ್ ಆಗಿದ್ದು, 670 ಕ್ಯುಸೆಕ್ ನೀರು ಹೊರಹರಿಸುತ್ತಿದೆ.ಇದನ್ನು ಓದಿ –ಕನ್ನಡದ ಪ್ರಖ್ಯಾತ ಕವಿ ಎಚ್ ಎಸ್ ವೆಂಕಟೇಶಮೂರ್ತಿ ನಿಧನ
ಈ ಬೆಳವಣಿಗೆ ಗ್ರಾಮೀಣ ಪ್ರದೇಶದ ಜನರಲ್ಲಿ ನೆಮ್ಮದಿಯ ಸಾಂಧ್ರತೆಯನ್ನು ತಂದಿದೆ.