By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Politics
    Politics
    Politics is the art of looking for trouble, finding it everywhere, diagnosing it incorrectly and applying the wrong remedies.
    Show More
    Top News
    Latest News
  • Articles
    ArticlesShow More
    “ಆರೋಗ್ಯ, ಆಧ್ಯಾತ್ಮದ ಮೂಲ ಯೋಗ”
    June 21, 2025
    ಯೋಗಾ ಯೋಗ..
    June 21, 2025
    ವಿಶ್ವ ಸಂಗೀತ ದಿನದ ಶುಭಾಶಯಗಳು
    June 21, 2025
    ಪತಂಜಲಿ: ವ್ಯಾಕರಣ ಮತ್ತು ಯೋಗದ ಯುಗಪುರುಷ
    June 21, 2025
    ನೀಲಿ ಸುಂದರಿ ನೇರಳೆ
    June 17, 2025
  • Sports
  • National
  • International
  • Crime
  • Contact Us
Reading: ಸುರಿಯುವ ಮಳೆಯ ನಿಲ್ಲಿಸಲಾರೆ
Share
Font ResizerAa
VarthamanVarthaman
  • Home
  • Karnataka
  • Politics
  • Articles
  • Sports
  • National
  • International
  • Crime
  • Contact Us
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Politics
  • Articles
  • Sports
  • National
  • International
  • Crime
  • Contact Us
Follow US
Varthaman > Blog > Articles > ಸುರಿಯುವ ಮಳೆಯ ನಿಲ್ಲಿಸಲಾರೆ
Rain
Articles

ಸುರಿಯುವ ಮಳೆಯ ನಿಲ್ಲಿಸಲಾರೆ

Team Varthaman
Last updated: February 18, 2025 8:04 am
Team Varthaman Published February 18, 2025
Share
SHARE

ಧೋ ಎಂದು ಸುರಿಯುವ ಮಳೆಯನ್ನು ನಿಲ್ಲಿಸಲು ನನಗೆ ಸಾಧ್ಯವಿಲ್ಲ ನಿಜ ಆದರೆ ನಾನು ಮಳೆಯಿಂದ ರಕ್ಷಿಸಲು ಕೊಡೆಯನ್ನು ಹಿಡಿಯಬಲ್ಲೆ
ಅಂತೆಯೇ ನನ್ನ ಮಕ್ಕಳು ಅದಷ್ಟೇ ದೊಡ್ಡವರಾಗಲಿ ಎತ್ತರವಾಗಲಿ ಬೆಳೆದು ಹೆಮ್ಮರವಾಗಲಿ ಎಂದು ಆಶಿಸುವ ನಾನು ಬದುಕಿನಲ್ಲಿ ಸೂರ್ಯನ ಬಿಸಿಲು ಮತ್ತು ಮಳೆ ಎರಡೂ ಬೇಕು ಎಂಬುದನ್ನು ಅರಿತಿರುವೆ.

ಅತ್ಯಂತ ಸಂತೋಷ ಮತ್ತು ಕಠಿಣಾತಿಕಠಿಣ ತಿರುವುಗಳನ್ನು ಈ ಬದುಕು ಹೊಂದಿದೆ…. ಅವರ ಬದುಕಿನಲ್ಲಿ ಸುರಿಯುವ ಕಷ್ಟ, ಸವಾಲುಗಳೆಂಬ ಸುರಿ ಮಳೆಯನ್ನಂತೂ ನಿಲ್ಲಿಸಲು ಸಾಧ್ಯವಿಲ್ಲ ನನಗೆ, ಆದರೆ
ಆಸರೆ ಎಂಬ ಕೊಡೆಯನ್ನಂತೂ ಹಿಡಿಯುವೆ.

ಅವರಿಗೆ ನನ್ನಲ್ಲಿರುವ ಸಮಸ್ತ ಚೇತೋಹಾರಿ ಪ್ರೀತಿಯನ್ನು ಬೇಶರತ್ತು ನೀಡುವೆ. ಬದುಕಿನಲ್ಲಿ ಅವರಿಗೆ ಎದುರಾಗುವ ನೋವುಗಳು, ತೊಂದರೆಗಳು, ಕಂಡು ಕಾಣದ ಏರಿಳಿತಗಳ ಸಮಯದಲ್ಲಿ ಅವರಿಗೆ ಆಸರೆಯಾಗುವೆ. ಮಳೆಯನ್ನು ನಾನು ತಡೆಯಲಾರೆ ಆದರೆ ಕೊಡೆಯನ್ನಂತೂ ಹಿಡಿಯುವೆ.

ನನ್ನ ಅವಶ್ಯಕತೆ ಅವರಿಗೆ ಇದೆಯೋ ಇಲ್ಲವೋ ಎಂಬುದನ್ನು ಅಷ್ಟಾಗಿ ನಾನರಿಯೇ ಆದರೆ ನನ್ನ ಜವಾಬ್ದಾರಿಗಳ ಅರಿವು ನನಗಿದೆ.. ಜೀವನದ ಹತ್ತು ಹಲವು ಸುಳಿಗಳಲ್ಲಿ ತಿರುಗಿ ಸುತ್ತುವ ಅವರನ್ನು ಆ ಸುಳಿಗಳಲ್ಲಿ ಬದುಕಲು ಮತ್ತೆ ಅದರಿಂದ ಹೊರ ಬೀಳಲು ಅವಶ್ಯಕ ಜಾಣ್ಮೆಯನ್ನು ನಾನು ಕಲಿಸುವೆ. ಸೋಲು ಗೆಲುವುಗಳೆಂಬ ಏರಿಳಿತಗಳ ಅಲೆಗಳನ್ನು ಎದುರಿಸಿ ಕಷ್ಟದ ಕಡಲನ್ನು ಈಜಿ ಬದುಕಿನ ಸಾಗರವ ದಾಟಲು ನಾ ಅವರಿಗೆ ಕಲಿಸುವೆ.

Join WhatsApp Group

ಬರದ, ಕ್ಷಾಮದ ಅರಿವು ಅವರಿಗೆ ಮೂಡಿಸುವೆ. ನೆರೆ ಪ್ರವಾಹಗಳ ತಿಳಿವು ನೀಡುವೆ. ಬದುಕಿನಲ್ಲಿ ಕೆಲ ಸಮಯ ಬರ ಬಂದರೂ, ಪ್ರವಾಹವೇ ಅವರನ್ನು ಮುಳುಗಿಸಿದರೂ ಈಜಿ ದಡ ಸೇರಲು ನಾ ಕಲಿಸುವೆ. ಮಳೆ ಬದುಕಿಗೆ ಅತ್ಯವಶ್ಯಕ ಎಂಬುದರ ಅರಿವನ್ನು ಅವರಿಗೆ ಮೂಡಿಸುವೆ.

ಮಕ್ಕಳು ಹಾಕುವ ತಾಳಗಳಿಗೆ ಅವರಿಷ್ಟದಂತೆ ನಾನು ಕುಣಿಯುವೆ. ನನ್ನ ಕುಣಿತವ ಕಂಡು ಅವರು ಚಪ್ಪಾಳೆ
ತಟ್ಟಲಿ ಎಂದು ಬಯಸದೆ ಹೋದರೂ ಕುಣಿಯುತ್ತಿರುವೆ ಎಂಬುದರ ಕಿಂಚಿತ ಅರಿವು ಅವರಿಗಿರಲಿ ಎಂದು ಕೂಡ ಆಶಿಸುವೆ. ಬದುಕಿನಲ್ಲಿ ಏನೇ ಕಷ್ಟ ಬಂದರೂ ದೃಢವಾಗಿ ನಿಂತು ಎದುರಿಸಬೇಕು ಸವಾಲುಗಳನ್ನು ಸ್ವೀಕರಿಸಿ ಗೆಲ್ಲಬೇಕು ಎಂಬ ಪಾಠವನ್ನು ಕಲಿಸುವೆ.

ಬದುಕು ಅವರಿಗೊಡ್ದುವ ಸವಾಲುಗಳ ಶೂಲಕ್ಕೆ ಗುರಾಣಿಯಾಗಿ ನಾನು ರಕ್ಷಿಸುವೆ… ಅವರ ಸ್ವಾತಂತ್ರ್ಯವನ್ನು ಇಚ್ಚಿಸುವ ಜೊತೆಗೆ ಆತ್ಮ ನಿರ್ಭರರಾಗಿ ಬದುಕಲಿ ಎಂದು ಆಶಿಸುವೆ. ನಂದು ನನ್ನ ಆಸರೆಯ ಬಯಸಿ ಬಂದಾಗ ಮಡಿಲ ಮಗುವಾಗಿಸಿ ಪೊರೆಯುವೆ.

ರಕ್ಷಿಸುವ ಮತ್ತು ಪೋಷಿಸುವ ಭರದಲ್ಲಿ ತಮ್ಮನ್ನು ತಾವು ಕಳೆದುಕೊಳ್ಳದಂತೆ ಸದಾ ರಕ್ಷಣೆಯ ತಡೆಗೋಡೆಯಾಗದೆ ಅವರು ಕೂಡ ತಮ್ಮನ್ನು ತಾವು ಸಂಭಾಳಿಸಿಕೊಳ್ಳಲಿ ಎಂದು ಬಯಸುವೆ, ಜೊತೆಗೆ ಅವರ ಬದುಕಿನ ಕುರಿತಾದ ಮಹತ್ತರ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುವಂತೆ ಸಮರ್ಥರಾಗಲಿ ಎಂದು ಆಶಿಸುವೆ. ಅವರು ನನ್ನಿಂದ ದೂರವಾಗುತ್ತಾರೆ ಎಂಬ ಭಯ ಕಾಡಿದರೂ ಅವರ ಸ್ವಾವಲಂಬನೆ ನನ್ನ ಹೆಮ್ಮೆ ಎಂಬುದನ್ನು ಅರಿತಿರುವೆ ಜೊತೆಗೆ ಇದು ನನ್ನ ಜವಾಬ್ದಾರಿ ಕೂಡ

ಅದೇನೇ ಆದರೂ ಕೂಡ ನನಗೆ ಸಾಧ್ಯವಿರುವಷ್ಟು ದಿನ ನಾನು ನನ್ನ ಮಕ್ಕಳಿಗೆ ಕೊಡೆ ಹಿಡಿಯುತ್ತೇನೆ. ಬದುಕು ಧೋ ಎಂದು ಸುರಿಸುವ ಅನಿರೀಕ್ಷಿತ ಮಳೆಯನ್ನು ನನಗೆ ನಿಲ್ಲಿಸಲಾಗುವುದಿಲ್ಲ… ಆದರೆ ನಾನು ಯಾವಾಗಲೂ ನಿಮ್ಮ ಜೊತೆಗಿದ್ದೇನೆ ಎಂಬ ಬೆಚ್ಚಗಿನ ಭಾವ ನನ್ನ ಮಕ್ಕಳಲ್ಲಿ ಭರವಸೆಯನ್ನು ಮೂಡಿಸುತ್ತದೆ. ಆ ಭರವಸೆಯನ್ನು ನೀಡಲು ನಾನು ಸದಾ ಸಿದ್ದಳಾಗಿದ್ದೇನೆ. ನನ್ನನ್ನು ಪ್ರೀತಿಸುವ ನನ್ನ ಸುಖ ದುಃಖಗಳಲ್ಲಿ ನನಗೆ ಹೆಗಲಾಗುವ ನಮ್ಮವರೊಬ್ಬರು ಇದ್ದಾರೆ ಎಂಬ ಭಾವವೇ ನನ್ನ ಮಕ್ಕಳಲ್ಲಿ ಚೈತನ್ಯವನ್ನು ತುಂಬುತ್ತದೆ ಎಂಬುದರ ಅರಿವು ನನಗಿದ್ದು ನಾನು ಸದಾ ನನ್ನ ಮಕ್ಕಳ ರಕ್ಷಣೆಗಾಗಿ ಕೊಡೆಯನ್ನು ಹಿಡಿಯುವೆ.

ಆದರೆ…ಮನದ ಒಂದು ಮೂಲೆಯಲ್ಲಿ ಬದುಕು ಬೀಸುವ ವೃದ್ಧಾಪ್ಯವೆಂಬ ಬಿರುಗಾಳಿಯಲ್ಲಿ ನಾನು ತೋಯದೆ ನಲುಗದೆ, ಮಕ್ಕಳ ಪ್ರೀತಿಯ ಆಸರೆಯಲ್ಲಿ ಬೆಚ್ಚಗಿರಲು ನನ್ನ ಮಕ್ಕಳು ನನಗೂ ಕೊಡೆ ಹಿಡಿಯಲಿ ಎಂದು ಆಶಿಸುತ್ತೇನೆ. ತಾಯಿಯಾಗಿ ಇದು ನನ್ನ ಸಹಜ ಬಯಕೆ.

ನೀವು ಕೂಡ ಹೀಗೆ ಯೋಚಿಸುತ್ತೀರಾ ಸ್ನೇಹಿತರೆ?

ಲೇಖಕಿ : ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್

  • KRS ಜಲಾಶಯ ಬಹುಮಟ್ಟಿಗೆ ಭರ್ತಿ: ನೀರು ಬಿಡುಗಡೆ ಸಾಧ್ಯತೆ
  • ವಂಚನೆ ಪ್ರಕರಣ: ಐಶ್ವರ್ಯಾ ಗೌಡಗೆ ಇಡಿಯಿಂದ ಬಿಗ್ ಶಾಕ್
  • ಇರಾನ್ vs ಇಸ್ರೇಲ್: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಆತಂಕ
  • ಜೂನ್ 23ರಿಂದ 28ರ ವರೆಗೆ ಭಾರೀ ಮಳೆಯ ಎಚ್ಚರಿಕೆ
  • ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಮುಖ ಗುರುತು ಆಧಾರಿತ ‘AI’ ಹಾಜರಾತಿ ಪ್ರಾರಂಭ
  • ಪ್ರಜಾವಾಣಿಯ ಕುಸುಮಾ ಶಾನುಭಾಗ್ ಇನ್ನಿಲ್ಲ

ಕೋಲಾರದಲ್ಲಿ ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್ ಘಟಕ

ಹಣ್ಣುಗಳ ಸಾಮ್ರಾಟ ಹಲಸು

ಆಯಾಸವನ್ನು ನಿವಾರಿಸುವ ಪಾನೀಯಗಳು

ಹೆಣ್ಣು ಮಕ್ಕಳ ವ್ಯಥೆ

ಶಂಕರ ಪಂಚಮಿ : ನಮಾಮಿ ಲೋಕ ಶಂಕರಂ

Share This Article
Facebook Email Print
Leave a comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnatakaTrending

ಪೊಲೀಸ್ ಸಿಬ್ಬಂದಿಗಳಿಗೆ ಊಟದ ಭತ್ಯೆ ₹200ರಿಂದ ₹300ಕ್ಕೆ ಹೆಚ್ಚಳ

Team Varthaman Team Varthaman May 24, 2025
ಬೈಕ್‌ ಟ್ಯಾಕ್ಸಿ ಸೇವೆಯಿಂದ ಹಿಂದೆ ಸರಿದ ರಾಪಿಡೋ
ಐಪಿಎಲ್ ಬೆಟ್ಟಿಂಗ್ ದಂಧೆ ಎಂಬ ಚಕ್ರವ್ಯೂಹ | IPL Betting
ಒಂದು ವಾರದಲ್ಲಿ ಕಾವೇರಿ ಆರತಿಯ ನೀಲನಕ್ಷೆ ಸಿದ್ಧವಾಗಲಿದೆ – ಡಿಸಿಎಂ ಡಿ.ಕೆ. ಶಿವಕುಮಾರ್
ಭಾರತ-ಪಾಕ್‌ ತಕ್ಷಣವೇ ಕದನ ವಿರಾಮ ಘೋಷಣೆಗೆ ಸಮ್ಮತಿಸಿವೆ: ಟ್ರಂಪ್‌ ಟ್ವೀಟ್
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • National News
  • Politics
  • IPL 2025
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?