- ನಿಂತು ನಿಂತು ಸುರಿಯುತ್ತಿರುವ ಮಳೆ, ಸಂಚಾರ, ವ್ಯಾಪಾರಕ್ಕೂ ಅಡ್ಡಿ
ಮೈಸೂರು: ಕಳೆದ ಮೂರು ದಿನಗಳಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿಂತು ನಿಂತು ಸುರಿಯುತ್ತಿರುವ ಮಳೆಯಿಂದಾಗಿ ಮಳೆಯನಾಡಗಿ ಮೈಸೂರು ಪರಿವರ್ತನೆಗೊಂಡಿದ್ದರೆ, ಸಂಚಾರ ಮಾತ್ರವಲ್ಲದೆ ವ್ಯಾಪಾರಕ್ಕೂ ಅಡ್ಡಿಯುಂಟು ಮಾಡಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಜೂ.೧ರವರೆಗೂ ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯಾಗುವುದಾಗಿ ತಿಳಿಸಿದೆ. ಬಂಗಳಾ ಕೊಲ್ಲಿಯ ಪಶ್ಚಿಮ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಮುಂದಿನ ಮೂರು ಅಥವಾ ನಾಲ್ಕು ದಿನಗಳಲ್ಲಿ ಶಿತಿಲಗೊಳ್ಳುತ್ತಿದ್ದಂತೆಯೇ ಮುಂಗಾರು ದುರ್ಬಲಗೊಳ್ಳುವ ಸಾಧ್ಯತೆಯಿದೆ. ಜೂನ್ ಮೊದಲ ವಾರ ಬಿಸಿಲು ಬರಲಿದ್ದು, ಅಲ್ಲಿಯವರೆಗೂ ಮಳೆಯ ವಾತಾವರಣ ಮುಂದುವರೆಯಲಿದೆ ಎಂದು ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ ಕೃಷಿ ಹವಾಮಾನ ಕ್ಷೇತ್ರ ವಿಭಾಗ ತಿಳಿಸಿದೆ.
ಮೈಸೂರಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೇವಲ ಸಂಚಾರಕ್ಕೆ ಮಾತ್ರ ತೊಂದರೆಯಾಗದೇ ಎಪಿಎಂಸಿ, ಗನ್ಹೌಸ್, ದೇವರಾಜ ಹಾಗೂ ಚಿಕ್ಕಮಾರುಕಟ್ಟೆಗಳಲ್ಲಿ ಮಾರಾಟಕ್ಕೂ ಅಡ್ಡಿಯುಂಟಾಗಿದೆ. ಇದರಿಂದಾಗಿ ತರಕಾರಿ ಮಾರಾಟದಲ್ಲಿ ವ್ಯತ್ಯಾಸವಾಗಿದೆ. ಇನ್ನೂ ಮಳೆಯಿಂದಾಗಿ ಆಟೋಗಳಿಗೆ ಬೇಡಿಕೆ ಹೆಚ್ಚಾಗಿದೆ.
ಇನ್ನೂ ಶಾಲೆ, ಕೆಲಸಕ್ಕೆ ತೆರಳುವ ಮಂದಿ ಪರದಾಟದಲ್ಲೇ ಕೆಲಸ ಮಾಡಬೇಕಾದ ಅನಿರ್ವಾಯದಲ್ಲಿ ಸಂಚರಿಸುತ್ತಿದ್ದಾರೆ.ಇದನ್ನು ಓದಿ –ನನ್ನ ತಂದ ಅನುದಾನಕ್ಕೆ ಸಿಎಂ ಗುದ್ಧಲಿಪೂಜೆ: ಸಾ.ರಾ.ಮಹೇಶ್ ಕಿಡಿ
ಇನ್ನೂ ಆರೋಗ್ಯ ಇಲಾಖೆಯಿಂದಲೂ ಸಹ ನಿರಂತರ ಮಳೆ ಹಾಗೂ ಕೋವಿಡ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಸಾರ್ವಜನಿಕರು ಕೈಗೊಳ್ಳುವಂತೆ ತಿಳಿಸಿದ್ದಾರೆ.