ಮೈಸೂರು: ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ, ಜೆಎಸ್ಎಸ್ ಔಷಧ ವಿಜ್ಞಾನ ಸಂಸ್ಥೆ ಇವುಗಳ ಸಹಯೋಗದಲ್ಲಿ ನಗರದ ಜೆಎಸ್ಎಸ್ ಫಾರ್ಮಸಿ ಕಾಲೇಜಿನ ಆವರಣಲ್ಲಿ ಜೂ.೧೮ರಂದು ‘ಉತ್ತಮ ಉತ್ಪಾದನಾ ಅಭ್ಯಾಸಗಳ ಮೂಲಕ ಔಷಧಿ ಗುಣಮಟ್ಟದ ಭರವಸೆ ಹೆಚ್ಚಿಸುವುದು ಮತ್ತು ಪರಿಷ್ಕೃತ ಔಷಧಿಯ ತಂತ್ರಜ್ಞಾನ ನವೀಕರಣ ಸಹಾಯ ಯೋಜನೆ’ ಎಂಬ ವಿಷಯದ ಕುರಿತು ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎಂ.ಪ್ರಮೋದ್ಕುಮಾರ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೧೦.೩೦ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಮುಖ್ಯಅತಿಥಿಯಾಗಿ ಐಪಿಎ ರಾಜ್ಯ ಶಾಖೆಯ ಸದಸ್ಯ ಕಾರ್ಯದರ್ಶಿ ಡಾ.ರಮೇಶ್, ಸಿಡಿಎಸ್ಸಿಒ ಉಪ ಔಷಧ ನಿಯಂತ್ರಕ ರಾಜಶೇಖರ್, ಕರ್ನಾಟಕ ಸರ್ಕಾರದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಹೆಚ್ಚುವರಿ ಔಷಧ ನಿಯಂತ್ರಕ ಡಾ.ಎಸ್.ಉಮೇಶ್, ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಪತಿ ಡಾ.ಬಸವನ ಗೌಡಪ್ಪ ಪಾಲ್ಗೊಳ್ಳಲಿದ್ದಾರೆ. ಐಪಿಎ ರಾಜ್ಯ ಶಾಖೆಯ ಅಧ್ಯಕ್ಷ ಡಾ.ಖಾಲಿದ್ ಅಹ್ಮದ್ ಖಾನ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಜೂ.೨೧ರಂದು ಬೆಳಿಗ್ಗೆ ೧೦.೩೦ಕ್ಕೆ ಜೆಎಸ್ಎಸ್ ಫಾರ್ಮಸಿ ಕಾಲೇಜಿನ ಆವರಣಲ್ಲಿ ಫೋರಂ ಫಾರ್ ಫಾರ್ಮಾ ಕ್ವಾಲಿಟಿ ಲೀಡರ್ರ್ಸ್ ಸಭೆಯನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಜೆಎಸ್ಎಸ್ ಎಎಚ್ಇಆರ್ನ ಪ್ರೋ ಚಾನ್ಸೆಲರ್ ಡಾ.ಬಿ.ಸುರೇಶ್ ಉದ್ಘಾಟಿಸಲಿದ್ದಾರೆ. ಔಷಧ ಕಂಪನಿಗಳ ಪ್ರಮುಖರು ಮತ್ತು ತಜ್ಞರು ‘ಔಷಧ ಉದ್ಯಮದಲ್ಲಿನ ಸವಾಲುಗಳು ಮತ್ತು ಅವಕಾಶಗಳು, ತಾಂತ್ರಿಕತೆುಂ ಪ್ರಗತಿ, ಜಾಗತಿಕ ಮಾರುಕಟ್ಟೆಯಲ್ಲಿ ನಿರೀಕ್ಷೆಗಳು, ಗುಣಮಟ್ಟದ ವ್ಯವಸ್ಥೆಗಳು, ವಿದ್ಯಾಸಂಸ್ಥೆ-ಉದ್ಯಮಗಳ ಸಹಕಾರವನ್ನು ಬಲಪಡಿಸುವುದು ಮತ್ತಿತರ ವಿಷಯಗಳ ಕುರಿತು ಸಭೆಯಲ್ಲಿ ಸಂವಾದ ನಡೆಸಲಾಗುವುದು ಎಂದು ತಿಳಿಸಿದರು.ಇದನ್ನು ಓದಿ –ಮೋದಿ ಕಪ್ ದೇಹದಾಡ್ಯ ಸ್ಪರ್ಧೆಯ ಭಿತ್ತಿಪತ್ರ ಬಿಡುಗಡೆ
ಸುದ್ದಿಗೋಷ್ಠಿಯಲ್ಲಿ ಜೆಎಸ್ಎಸ್ ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಎಸ್.ಎನ್.ಮಂಜುಳಾ, ಸಹ ಪ್ರಾಧ್ಯಾಪಕ ಡಾ.ಆರ್.ಎಸ್.ಸವಿತಾ, ಡಾ.ಅಮಿತ್ ಬಿ.ಪಾಟೀಲ್, ನವೀನ್ ಹಾಜರಿದ್ದರು.