ಶಾಲಾ-ಕಾಲೇಜುಗಳಿಗೆ ರಜೆ ಸಾಧ್ಯತೆ
ಬೆಂಗಳೂರು, ಜೂನ್ 9: ಕನ್ನಡ ಭಾಷೆ ಮತ್ತು ಹಿರಿಯ ನಟ ಡಾ. ರಾಜ್ಕುಮಾರ್ ಅವರನ್ನು ಅವಮಾನಿಸಿದ್ದಕ್ಕಾಗಿ ತಮಿಳು ನಟ ಕಮಲ್ ಹಾಸನ್ ಮತ್ತು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಕನ್ನಡಿಗರಲ್ಲಿ ಭಾರೀ ಆಕ್ರೋಶ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಜೂನ್ 11 ಬುಧವಾರ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದ್ದು, ರಾಜ್ಯದ ಶಾಲಾ ಮತ್ತು ಕಾಲೇಜುಗಳಿಗೆ ರಜೆ ನೀಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ.
ಕನ್ನಡಿಗರ ಆಕ್ರೋಶದ ಬೆನೆಲೆ:
ಕನ್ನಡದ ಬಗ್ಗೆ ಇತ್ತೀಚೆಗೆ ತಮಿಳು ನಟ ಕಮಲ್ ಹಾಸನ್ ನೀಡಿರುವ ಹೇಳಿಕೆ ಮತ್ತು ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಅಭಿಮಾನಿತನಕ್ಕೂ ತೀರಾ ತಕ್ಕದ್ದು ಅಲ್ಲದ ಪದಗಳನ್ನು ಬಳಸಿದ ಪರಿಣಾಮ, ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
ಡಾ. ರಾಜ್ಕುಮಾರ್ ಬಗ್ಗೆ ಅವಮಾನ:
ಕನ್ನಡ ಸಿನಿಮಾ ರಂಗದ ದೈವತ್ವದ ಸ್ಥಾನದಲ್ಲಿರುವ ಡಾ. ರಾಜ್ಕುಮಾರ್ ಅವರನ್ನು ಕುರಿತ ಅವಮಾನಕಾರಿ ಹೇಳಿಕೆಗಳು ಬಹುಮಟ್ಟಿಗೆ ಕನ್ನಡಿಗರ ಭಾವನೆಗಳನ್ನು ಕೆರಳಿಸಿವೆ. “ಕನ್ನಡಿಗರು ತಾಳ್ಮೆಗೆ ಹೆಸರುವಾಸಿ ಆದರೆ ಸತತ ಅವಮಾನಗಳು ನಡೆಯುತ್ತಿದ್ದರೆ ನಾವು ಸುಮ್ಮನಿರಲಾರದು” ಎಂಬಂತೆ ಜನತೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಬಂದ್ಗೆ ತಯಾರಿ:
ಈ ಎಲ್ಲಾ ಘಟನೆಗಳ ವಿರುದ್ಧ ಕನ್ನಡ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ಹಾಗೂ ಕನ್ನಡ ಪ್ರೇಮಿಗಳು ಒಂದಾಗಿ ಜೂನ್ 11 ರಂದು ಕರ್ನಾಟಕ ಬಂದ್ಗೆ ಕರೆ ನೀಡಿದ್ದಾರೆ. ನಾಡಿನ ಮೂಲೆ ಮೂಲೆಯಲ್ಲೂ ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇದೆ.ಇದನ್ನು ಓದಿ –ತಂತ್ರಜ್ಞಾನ ನಿಪುಣೆ ಜಿ. ಮಾಧವಿ ಲತಾ
ಶಾಲಾ-ಕಾಲೇಜುಗಳಿಗೆ ರಜೆ ಸಾಧ್ಯತೆ:
ಬಂದ್ನ ಪರಿಣಾಮವಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಶಿಕ್ಷಣ ಸಂಸ್ಥೆಗಳು, ವ್ಯಾಪಾರ ವಹಿವಾಟುಗಳಲ್ಲಿ ಅಸ್ತವ್ಯಸ್ತತೆಯ ಸಾಧ್ಯತೆ ಇರುವುದರಿಂದ, ಜೂನ್ 11 ರಂದು ಶಾಲಾ ಹಾಗೂ ಕಾಲೇಜುಗಳಿಗೆ ರಜೆ ಘೋಷಣೆಯಾಗುವ ಸಾಧ್ಯತೆ ಇದೆ. ಇದರ ಬಗ್ಗೆ ಸರ್ಕಾರದ ಅಧಿಕೃತ ಆದೇಶ ಹೊರಬೀಳಬೇಕಿದೆ.