ಮೈಸೂರು: ಹಿಂದೂಗಳು ಸುರಕ್ಷಿತವಾಗಿ ಸಂಮೃದ್ದವಾಗಿ ಸಮ್ಮಾನಿತರಾಗಿ ಇರುವುದು ಅಂತರಾಷ್ಟ್ರೀಯ ಹಿಂದೂ ಸಂಘಟನೆ ಮಾಡಲು ಹನುಮಾನ್ ಚಾಲೀಸಾ ಕೇಂದ್ರ ನಿರ್ಮಾಣದ ಉದ್ದೇಶ ಹೊಂದಿದೆ ಎಂದು ಹಿಂದೂ ಸಂಘಟನೆಯ ಮುಖ್ಯಸ್ಥರಾದ ಡಾ.ಪ್ರವೀಣ ಭಾಯೀ ತೊಗಡಿಯಾ ಅಭಿಪ್ರಾಯ ಪಟ್ಟರು.
ನಗರದ ದೇವರಾಜ ಮೊಹಲ್ಲಾದ ಆಲಮ್ಮನ ಛತ್ರದಲ್ಲಿ ಅಂತರಾಷ್ಟ್ರೀಯ ಹಿಂದೂ ಪರಿಷತ್, ರಾಷ್ಟ್ರೀಯ ಬಜರಂಗ ದಳದಿಂದ ಸ್ವಾಸ್ಥ ಹಿಂದೂ, ಸುರಕ್ಷಿತ ಹಿಂದೂ, ಸಮೃದ್ಧ ಹಿಂದೂ ಎಂಬ ಸಂಕಲ್ಪದೊಂದಿಗೆ ಆಯೋಜಿಸಿದ್ದ ಹಿಂದೂ ಚಿಂತನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಭಾರತದ ಹಳ್ಳಿ ಹಳ್ಳಿಗಳಲ್ಲಿ ಹಿಂದೂಗಳು ಪ್ರತಿ ಶನಿವಾರ, ಮಂಗಳವಾರ ಸಾಮೂಹಿಕ ಹನುಮಾನ ಚಾಲಿಸಾ ಪಠಣೆಯನ್ನು ಮಾಡಬೇಕು. ಹನುಮಾನ್ ಚಾಲೀಸಾ ಕೇಂದ್ರ ಬಡ ಹಿಂದೂಗಳು ಮುಕ್ತಿಗಾಗಿ, ಹಿಂದೂ ಹೆಲ್ಪ್ ಸೆಂಟರ್, ಆರೋಗ್ಯ ಸಮೃದ್ಧ, ಮಕ್ಕಳ ಸಂಸ್ಕಾರ, ಮಹಿಳಾ ಶಕ್ತಿ ಕೇಂದ್ರಗಳಾಗಬೇಕು ಎಂದರು.
ಮುಸ್ಲಿಮ್ ಸಮುದಾಯದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಹಾಗೆಯೇ ಚರ್ಚ್ ಗಳಲ್ಲಿ ಸಹ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಮೂಲಕ ಎಲ್ಲರಿಗೂ ಪರಿಚಯ ಆಗುತ್ತಾರೆ. ಈ ಮೂಲಕ ಸುರಕ್ಷಿತವಾಗಿ ಇರಲು ಸಾಧ್ಯವಾಗುತ್ತದೆ. ಹನುಮಾನ್ ಚಾಲೀಸಾ ಕೇಂದ್ರ ಗಳಲ್ಲಿ ಪ್ರತಿ ತಿಂಗಳಲ್ಲಿ ಬಡವರ ಉದ್ದಾರ ಆಗಬೇಕು. ಬಡವರ ಹೆಲ್ತ್ ಗೆ ಸಹಾಯ ಆಗಬೇಕು. ಬಡ ಹಿಂದೂಗಳ ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ ಸಹಾಯಕ್ಕೆ ಕೇಂದ್ರಗಳು ಕೆಲಸವನ್ನು ಮಾಡಬೇಕು. ಇದು ಸರ್ಕಾರ ಅಥವಾ ಖಾಸಗಿ ಎಲ್ಲಾದರೂ ಸರಿ ಒಟ್ಟಾರೆ ಹನುಮಾನ ಚಾಲೀಸಾ ಕೇಂದ್ರ ಹಿಂದೂಗಳ ಉದ್ದಾರ ಕೇಂದ್ರ ಗಳಾಗಬೇಕು ಎಂದರು.
ಪ್ರತಿ ಕೇಂದ್ರದಲ್ಲಿ 200 ಜನ ಇರಬೇಕು. ವರ್ಷಗಳಲ್ಲಿ 10ಲಕ್ಷ ಜನರನ್ನು ತಲುಪಬೇಕು. ಈ ಮೂಲಕ ಹಿಂದೂಗಳ ಸಂಘಟನೆ ಕೇಂದ್ರಗಳಾಗಿ ಹನುಮಾನ ಚಾಲೀಸಾ ಕೇಂದ್ರಗಳು ಸ್ಥಾಪನೆ ಆಗಬೇಕು. ರಾಷ್ಟ್ರದಲ್ಲಿ ಹನುಮಾನ್ ಚಾಲೀಸ ಕೇಂದ್ರ ಗಳ ಸ್ಥಾಪನೆ ಅಗತ್ಯವಾದ ಸಮಯದಲ್ಲಿ ಇದ್ದೇವೆ. ಈ ಕೇಂದ್ರಗಳು ಸಹಾಯ ಕೇಂದ್ರಗಳಾಗಬೇಕು. ಹಿಂದೂ ಹೆಲ್ಪ್ ಲೈನ್ ಸೆಂಟರ್ ಗಳಾಗಿ ಪರಿವರ್ತನೆ ಆಗಬೇಕು. ಇಲ್ಲಿ ಹಿಂದೂಗಳಿಗೆ ಉತ್ತರ ಪ್ರದೇಶದ ಕುಂಭಮೇಳದಲ್ಲಿ ಮುವತ್ತು ಸಾವಿರ ಹನುಮಾನ್ ಚಾಲೀಸಾ ಕೇಂದ್ರ ಸ್ಥಾಪನೆ ಮಾಡಿದ್ದೆವು, ಲಕ್ಷಾಂತರ ಜನರು ಸಹಾಯವನ್ನು ಪಡೆದಿದ್ದರು ಎಂದು ತಿಳಿಸಿದರು.
ಭಾರತದಲ್ಲಿ ಹಿಂದೂಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಆಗಬೇಕು. ಹಿಂದೂಗಳು ಬರುವ ದಿನಗಳಲ್ಲಿ ಅಲ್ಪಸಂಖ್ಯಾತರಾಗುವುದನ್ನು ತಪ್ಪಿಸಬೇಕು. ಭಾರತದಲ್ಲಿ ಶೇ.46ರಷ್ಟು ಇರುವ ಹಿಂದೂಗಳು ಶೇ.86ರಷ್ಟು ಆಗಬೇಕು. ಮುಸ್ಲಿಂ ಸಮುದಾಯದ ಸಂಖ್ಯೆಯಲ್ಲಿ ಹೆಚ್ಚಳ ಆಗುತ್ತಿದೆ. ಬಾಂಗ್ಲಾದೇಶದಲ್ಲಿ ಬಹುಸಂಖ್ಯಾತರಾಗಿದ್ದ ಹಿಂದೂಗಳು ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗುತ್ತಿದ್ದಾರೆ.
ಭಾರತದಲ್ಲಿ ಮುಸ್ಲಿಂ ಸಮುದಾಯದ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಆಗುತ್ತಿದೆ. ಬಾಂಗ್ಲಾದೇಶದ ಈ ಪರಿಸ್ಥಿತಿಗೆ ಹಿಂದೂಗಳ ಸಂಖ್ಯೆಯಲ್ಲಿ ಇಳಿತ ಆಗಿರುವುದೇ ಕಾರಣ ಎಂದು ಹೇಳಿದರು.
ಉತ್ತರ ಪ್ರದೇಶದ ಕುಂಭಮೇಳದಲ್ಲಿ ಅಂತರಾಷ್ಟ್ರೀಯ ಹಿಂದೂ ಪರಿಷತ್ತು, ರಾಷ್ಟ್ರೀಯ ಭಜರಂಗದಳ, ರಾಷ್ಟ್ರೀಯ ಮಹಿಳಾ ದಳ, ಉಚಿತ ಆಹಾರ, ಉಚಿತ ವಸತಿ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ಮಾಡಿದ್ದೇವೆ. ರಾಮ ಮಂದಿರ ನಿರ್ಮಾಣ ಸಮಯದಲ್ಲಿ ಮೈಸೂರು ಭಾಗದಲ್ಲಿಯೂ ರಾಮಮಂದಿರ ಟೆಂಪಲ್ ಮ್ಯೂಮೆಂಟ್ ಮಾಡಿದ್ದೇವು. ರಾಮ ಮಂದಿರ ನಿರ್ಮಾಣ ಆಗಿರುವ ಸಮಯದಲ್ಲಿ ನಾವು ಇದ್ದೇವೆ.ಇದನ್ನು ಓದಿ – ಸಣ್ಣ ವಯಸ್ಸಿಗೆ ಹೃದಯಾಘಾತದ ಸಂಖ್ಯೆಯಲ್ಲಿ ಹೆಚ್ಚಳ: ಡಾ.ಸದಾನಂದ ಕಳವಳ
ಇದರ ರಕ್ಷಣೆ ಹಿಂದೂಗಳ ಹೊಣೆಗಾರಿಕೆಯಾಗಿದೆ. ಭಾರತದಲ್ಲಿ ನಾವು ಹಿಂದೂಗಳು ಸುರಕ್ಷಿತ ಸಮೃದ್ದ, ಸಮ್ಮಾನ ಹಿಂದೂಗಳು ಮಾಡುವ ನಿಟ್ಟಿನಲ್ಲಿ ಸಂಘಟನೆ ಪ್ರಮುಖ ಉದ್ದೇಶ ಹೊಂದಿದೆ ಎಂದು ತಿಳಿಸಿದರು. ಈ ವೇಳೆ ಬಿಜೆಪಿ ಮುಖಂಡ ಹಾಗೂ ನಟ ಜಯಪ್ರಕಾಶ್(ಜೆಪಿ), ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಸೇರಿ ಹಲವರು ಉಪಸ್ಥಿತರಿದ್ದರು.