By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Politics
    Politics
    Politics is the art of looking for trouble, finding it everywhere, diagnosing it incorrectly and applying the wrong remedies.
    Show More
    Top News
    Latest News
  • Articles
    ArticlesShow More
    ಕರುಣೆಯ ವಾರಿಧಿ ನಮ್ಮ ಗುರುನಾಥ
    July 15, 2025
    ಆರೋಗ್ಯಕಿಂ ಮಿಗಿಲೇನಿಹುದು
    July 14, 2025
    “ಆನೆಯ ಸೋಲು”(ಮಕ್ಕಳ ಕಥೆ)
    July 13, 2025
    ಪ್ರೋಟೀನ್‌ಗಳ ಪವರ್ ಹೌಸ್ : ಮೊಳಕೆ ಕಾಳುಗಳು
    July 11, 2025
    “ಸೀಮಾತೀತ ಸ್ವಾದದ ಸೀಬೆಯ ಸೊಬಗು ಬಲ್ಲಿರಾ?”
    July 5, 2025
  • Sports
  • National
  • International
  • Crime
  • Contact Us
Reading: ಎಲ್ಲಾ ಧರ್ಮಗಳಿಗೂ ಸಮನ್ವಯತೆಯೇ ನಮ್ಮ ಮಂತ್ರ
Share
Font ResizerAa
VarthamanVarthaman
  • Home
  • Karnataka
  • Politics
  • Articles
  • Sports
  • National
  • International
  • Crime
  • Contact Us
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Politics
  • Articles
  • Sports
  • National
  • International
  • Crime
  • Contact Us
Follow US
Varthaman > Blog > Articles > ಎಲ್ಲಾ ಧರ್ಮಗಳಿಗೂ ಸಮನ್ವಯತೆಯೇ ನಮ್ಮ ಮಂತ್ರ
ArticlesTrending

ಎಲ್ಲಾ ಧರ್ಮಗಳಿಗೂ ಸಮನ್ವಯತೆಯೇ ನಮ್ಮ ಮಂತ್ರ

Team Varthaman
Last updated: May 25, 2025 5:45 am
Team Varthaman Published May 25, 2025
Share
SHARE

ನಮ್ಮ ನಾಡು ಮಹಾನ್ ವ್ಯಕ್ತಿಗಳು, ಕವಿಗಳು, ಸಾಹಿತಿಗಳು ಜನಿಸಿದಂತಹ ಪುಣ್ಯ ನಾಡು ಅಂತಹ ಮಹಾಪುರುಷರುಗಳಿಂದ ಸಾವಿರಾರು ನೀತಿ ಬೋಧನೆಗಳು ನಡೆದಂತಹ ದಿವ್ಯ ನಾಡು. ನಮ್ಮ ನಾಡಲ್ಲಿ ವಿಧವಿಧವಾದ ಜಾತಿ, ಧರ್ಮ ವ್ಯವಸ್ಥೆಗಳಿಗೆ ಲಕ್ಷ ,ಲಕ್ಷ ಜನರು ಒಟ್ಟು ಸೇರುವ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಹಾಗೆ ಅನೇಕ ಪುರಾತನ ಇತಿಹಾಸಗಳು ಕೂಡ ನಮ್ಮ ಇಡೀ ಜಗತ್ತಿಗೆ ಹರಡಿ ಪ್ರಾಮುಖ್ಯತೆಯನ್ನು ಗಳಿಸಿದೆ. ಕದಂಬರಿಂದ, ಚಾಲುಕ್ಯರವರೆಗೆ ರಾಷ್ಟ್ರಕೂಟರಿಂದ, ಮೈಸೂರಿನ ಅರಸರ ತನಕ ಸಾಹಿತ್ಯ, ವಾಸ್ತುಶಿಲ್ಪ, ಭವ್ಯತೆಯ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಂತಹ ಶ್ರೇಷ್ಠತೆ ನಮ್ಮ ನಾಡಿದ್ದು. ಪಂಪ, ರನ್ನರಿಂದ ಕುವೆಂಪು, ಕಾರಂತರ ತನಕ ಸಾಹಿತ್ಯದ ತೇರು ನಮ್ಮ ಮುಂದಿನ ತಲೆಮಾರಿಗೂ ತಲುಪಿರುವುದು ಈ ನಾಡಿನ ಸಂಸ್ಕೃತಿಯ ನಿರಂತರತೆಗೆ ಸಾಕ್ಷಿಯಾಗಿದೆ.

ಹಾಗೆ ನಮ್ಮ ನಾಡಿನಲ್ಲಿ ಹಿರಿಯರು ಏಕೀಕರಣದ ಹಾದಿಯಲ್ಲಿ ಶ್ರಮ ಪಟ್ಟಿರುವುದು ಸ್ಮರಣೀಯ ಸಂಗತಿಯಾಗಿದೆ.ನಮ್ಮನಾಡಿನ ರಕ್ಷಣೆ ನಮ್ಮ ಕರ್ತವ್ಯ ಪ್ರಾಕೃತಿಕ ಸಿರಿವಂತಿಕೆ, ಸಹೃದಯತೆ ಹೊಸತನ ಧಾರ್ಮಿಕತೆ ಸೇರಿದಂತೆ ವಿಶಿಷ್ಟತೆಯ ಆಗರವಾಗಿರುವ ಈ ಪ್ರದೇಶ ಕರುನಾಡಿನ ಹೆಮ್ಮೆಯಾಗಿದೆ.ಎಲ್ಲಾ ಧರ್ಮಗಳಿಗೂ ಸಮನ್ವಯ ಸಾರುವುದು ನಮ್ಮ ಮಂತ್ರ ಧಾರ್ಮಿಕ ಸಹಿಷ್ಣತೆಯನ್ನು ಕಾಪಾಡಿಕೊಂಡು ಬರುತ್ತಿರುವ ದೇಶ ಎಂಬ ಮಹಾ ಹೆಗ್ಗಳಿಕೆಯು ನಮ್ಮ ನಾಡಿಗಿದೆ.

ಆದರೆ ಇವುಗಳ ಹಿಂದೆ ನಡೆಯುವ ಕೋಮುಗಲಭೆ, ಹಿಂಸಾಚಾರಗಳಿಗೆ ವಿದ್ವಾಂಸ ಕೃತ್ಯಗಳಿಗೆ ಇಲ್ಲಿ ಯಾರೂ ಜವಾಬ್ದಾರಿ ಅಲ್ಲವೇ? ಎಂಬುದು ಸಂಶಯಾಸ್ಪದವಾಗಿದೆ. ಈ ಕೃತ್ಯಗಳು ನಮ್ಮ ಬೆನ್ನ ಹಿಂದೆ ನಮ್ಮ ನೆರಳಂತೆ ಭಾದಿಸುತ್ತಿದೆ ಈ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಯಾವಾಗ ಅಂತ್ಯ ಎಂಬುದು ತಿಳಿಯದಾಗಿದೆ.ಸಾರ್ವಜನಿಕವಾಗಿ ನಡೆಯುವ ಪ್ರಚೋದಿಸುವ ಕಾರ್ಯಕ್ರಮಗಳಿಗೆ ಕಡಿವಾಣವೇ ಇಲ್ಲವೆಂಬ ಬೇಸರ ಛಾಯೆ ಮೂಡುತ್ತಿದೆ. ನಮ್ಮಲ್ಲಿರುವ ವಿಶ್ವಾಸ, ಆಚಾರ, ವಿಚಾರಗಳು ಒಂದೆಡೆಯಾದರೆ ಅವುಗಳನ್ನೆಲ್ಲ ರಾಜಕೀಯ ಮಾಡಿ ಜನರ ಮನಸ್ಸನ್ನು ಕೆರಳಿಸುವ ಕೆಲಸ ಇನ್ನೊಂದೆಡೆ ಆಗುತ್ತಿದೆ.

ಆದರೆ ಜಾತಿ, ಧರ್ಮ, ರೀತಿ, ನೀತಿ ಯಾವುದೇ ಇರಲಿ ಅವುಗಳನ್ನು ಅವಲಂಬಿಸುವ ಬಗ್ಗೆ ನಮ್ಮಲ್ಲಿ ಯಾವ ರೀತಿಯ ಆಕ್ಷೇಪವಿಲ್ಲ. ಆದರೆ ಇದನ್ನೆಲ್ಲ ಮೀರಿಸುವ ಭಾಷಣ ಕಾರ್ಯಕ್ರಮಗಳು ಕಾನೂನಿಗೆ ವಿರುದ್ಧವಾದ ರೀತಿಯಲ್ಲಿ ನಡೆಯುವುದರಿಂದ ತುಂಬಾ ಪರಿಣಾಮ ಸಾಮರಸ್ಯದ ಮೇಲೆ ಬೀರುತ್ತಿದೆ. ಸಾರ್ವಜನಿಕವಾಗಿ ಎಲ್ಲಾ ಧರ್ಮದವರು ಸಮಾನರು ಎಲ್ಲರಿಗೂ ಒಂದೇ ಕಾನೂನು ಆದರೆ ಧಾರ್ಮಿಕ ನಂಬಿಕೆ ಆಚರಣೆಗಳು ವಿಭಿನ್ನವಾಗಿದೆ. ನಮ್ಮ ನಾಡಿನ ಕಥೆ ಕೆಲವೊಮ್ಮೆ ಶೋಚನೀಯ ಅನಿಸುತ್ತಿದೆ.

ಯಾಕೆಂದರೆ ಕಣ್ಣಿಗೆ ಕಾಣದ ತೆರೆ ಮರೆಯಲ್ಲಿ ಕಾರ್ಯನಿರ್ವಹಿಸುವ ಸಾವಿರಾರು ಸಂಘ-ಸಂಸ್ಥೆಗಳು ಹುಟ್ಟಿವೆ.ಮತ್ತು ಇನ್ನೂ ಹುಟ್ಟತ್ತಾನೆ ಇವೆ.ಇವುಗಳಲ್ಲಿ ಸತ್ಯವಾದದ್ದು ಯಾವುದು ಮಿಥ್ಯವಾದದ್ದು ಯಾವುದು, ಎಂಬುದೇ ನಮಗೆ ಸಂಶಯಸ್ಪದವಾಗಿದೆ. ಕೆಲವು ಸಂಘ-ಸಂಸ್ಥೆಗಳು ಅತ್ಯುತ್ತಮ ವ್ಯವಸ್ಥೆಗಳು ಒಳಗೊಂಡಿದ್ದರೆ ಕೆಲವು ಸಂಘ ಸಂಸ್ಥೆಗಳು ಅವ್ಯವಹಾರ ನಡೆದು ನಮ್ಮ ಸಮಾಜ ಕಲ್ಯಾಣ ಕಾರ್ಯಗಳನ್ನು ಹಾಳು ಮಾಡಲೆಂದೇ ಜಾಗೃತಿಗೊಂಡಿದೆ. ನಮ್ಮ ನಾಡಿನಲ್ಲಿರುವ ಅಸ್ಪೃಶ್ಯತೆ, ಜಾತಿವಾರು ವ್ಯವಸ್ಥೆ, ನ್ಯಾಯ ಸಮಾನತೆ, ಕೋಮು ಸೌಹಾರ್ದತೆ ಮತ್ತು ಶಾಂತಿಗಾಗಿ ಶ್ರಮಿಸಿದರೆ ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟ ಆಗುವುದರಲ್ಲಿ ಸಂಶಯವೇ ಇಲ್ಲ.

ಹಾಗೆ ಸರಕಾರಿ ಶಾಲೆಗಳ ಬಗ್ಗೆ ಆಕರ್ಷಣೆ, ಸ್ಥಳೀಯ ಆರೋಗ್ಯ ಸೇವಾ ಸೌಲಭ್ಯದ ಒದಗಿಸುವಿಕೆ, ಮಹಿಳಾ ಉದ್ಯೋಗಕ್ಕೆ ಅನುಕೂಲದ ಯೋಜನೆ ಅನುಷ್ಠಾನಗೊಳಿಸಿ, ಜನರ ನಡುವೆ ಸಾಮರಸ್ಯವನ್ನು ಉಳಿಸಿ ಬೆಳೆಸಿಕೊಂಡು,ಯಾರು ಇಲ್ಲಿ ಮೇಲು, ಕೀಳೋ ತಾನು ಮಾಡುವ ಕೆಲಸದಲ್ಲಿ ನಂಬುವ ವಿಚಾರದಲ್ಲಿ ಅಹಂಭಾವವಿಲ್ಲದೆ ತೃಪ್ತ ಮನೋಭಾವ ಹೊಂದಿರಬೇಕು. ನಮ್ಮ ನೋವಿಗೆ ನಾವೇ ಎನ್ನುವಂತೆ ನಾಳಿನ ದಿನದ ಗ್ಯಾರಂಟಿನೇ ಇಲ್ಲದ ಹಿಂದಿನ ಜಗತ್ತಿನಲ್ಲಿ ಬೇರೆಯವರ ವಿಷಯದ ಬಗ್ಗೆ ಕೊಂಕು ನುಡಿಗಳನ್ನು ನುಡಿಯದೆ ಬದುಕುವುದರಿಂದ ಎಲ್ಲರ ಜೊತೆ ಸಮನ್ವಯ ಜೀವನದ ಪರಿಪಾಠ ಬೆಳೆಸಿದ್ದಲ್ಲಿ ನಮ್ಮ ಸುತ್ತಮುತ್ತಲಿನ ವಾತಾವರಣವು ಸುಖಮಯವಾಗಿರುವುದು. ಹಾಗೆ ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಿ ಬೆಳೆಯುವುದರಲ್ಲಿ ಯಾವ ಸಂಶಯವೂ ಇಲ್ಲ.ಎಂಬುದೇ ನನ್ನ ಅಂಬೋಣ ಇಷ್ಟು ಹೇಳುತ ನನ್ನ ಪುಟ್ಟ ಬರಹಕ್ಕೆ ಪೂರ್ಣ ಚುಕ್ಕಿಯನ್ನಿಡುವೆ.

ಸವಿತಾ ಸತೀಶ್ ಶೆಟ್ಟಿ {ಸವಿಸತಿ}

  • ಕಾಲ್ತುಳಿತ ದುರಂತ: RCB ಮತ್ತು KSCA ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸರ್ಕಾರ ತೀರ್ಮಾನ
    by Team Varthaman
    July 17, 2025
  • ದೇಶದ ಅತ್ಯಂತ ಸ್ವಚ್ಛ ನಗರ ಪಟ್ಟಿಯಲ್ಲಿ ಇಂದೋರ್ ಅಗ್ರಸ್ಥಾನ, ಮೈಸೂರು 3ನೇ ಸ್ಥಾನ
    by Team Varthaman
    July 17, 2025
  • ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯ ಅರ್ಭಟ: ಮಣ್ಣಗುಂಡಿ ಬಳಿ ಭೂಕುಸಿತ
    by Team Varthaman
    July 17, 2025
  • ಮಂಡ್ಯ: ಟ್ರ್ಯಾಕ್ಟರ್ ಹರಿದು ಪಾದಚಾರಿ ಸಾವು
    by Team Varthaman
    July 17, 2025
  • ಡಿಗ್ರಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸಿಸಿಟಿವಿ ಕಡ್ಡಾಯ
    by Team Varthaman
    July 17, 2025

ರಾಜ್ಯದಾದ್ಯಂತ ಲೋಕಾಯುಕ್ತ ದಾಳಿ

ಪಾಕಿಸ್ತಾನ ಸೇನೆಯ ಆಪ್ತನು ಪಹಲ್ಗಾಮ್ ಹತ್ಯಾಕಾಂಡದ ಮಾಸ್ಟರ್‌ಮೈಂಡ್: ಸೈಫುಲ್ಲಾ ಖಾಲಿದ್ ಎಂಬುದು ದೃಢ!

ಮೈಸೂರು, ಕೊಡಗಿನಲ್ಲಿ ಹೃದಯಾಘಾತಕ್ಕೆ ಇಬ್ಬರ ಬಲಿ

ವಾಲ್ಮೀಕಿ ಹಗರಣ: ಸಂಸದ, ಶಾಸಕರ ಮನೆ ಮೇಲೆ ಇಡಿ ದಾಳಿ

ಏಕಕಾಲಕ್ಕೆ 11 ಸಬ್‌ ರಿಜಿಸ್ಟರ್ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

TAGGED:all religionsArticlebreakingnewsharmonyKannada Articlelatestnews
Share This Article
Facebook Email Print
Leave a comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
ChamrajnagarKarnatakaTrending

ಮಹದೇಶ್ವರ ಬೆಟ್ಟದಲ್ಲಿ ತಾಯಿ ಹುಲಿ ಹಾಗೂ ನಾಲ್ಕು ಮರಿಗಳ ಅನುಮಾನಾಸ್ಪದ ಸಾವು

Team Varthaman Team Varthaman June 26, 2025
ಮೈಸೂರು: ಚಾಕು ಇರಿದ ಯುವಕ – ಚಿಕಿತ್ಸೆ ಫಲಿಸದೇ ಯುವತಿ ಸಾವು
ರಾಜ್ಯದಲ್ಲಿ ಮುಂದಿನ 4 ದಿನ ಭಾರೀ ಮಳೆಯ ಮುನ್ಸೂಚನೆ
319 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಆಟೋ ಮಿನಿಮಮ್ ದರ 40 ರೂಪಾಯಿಗೆ ಏರಿಕೆ ?
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • National News
  • Politics
  • IPL 2025
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?