- ರಾಜ್ಯ ಸರ್ಕಾರದಿಂದ ನವ ಕಾಯ್ದೆ ಜಾರಿಗೆ
ಬೆಂಗಳೂರು: ರಾಜ್ಯ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮತ್ತು ಗುಟ್ಕಾ ಉಗುಳುವುದು ಸೇರಿದಂತೆ ಸಿಗರೇಟು ಸೇವನೆಗೆ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ. ಇದೀಗ ಈ ನಿಯಮ ಉಲ್ಲಂಘಿಸಿದವರಿಗೆ ₹1,000 ದಂಡ ವಿಧಿಸಲಾಗುತ್ತದೆ.
ಇದಕ್ಕಾಗಿ ಸರ್ಕಾರ “ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಹಾಗೂ ವ್ಯಾಪಾರ, ವಾಣಿಜ್ಯ, ಉತ್ಪಾದನೆ, ಸರಬರಾಜು, ವಿತರಣಾ ಮತ್ತು ವಿನಿಮಯ) ಕರ್ನಾಟಕ ತಿದ್ದುಪಡಿ ಮಸೂದೆ 2024” ಅನ್ನು ಮಂಡಿಸಿದ್ದು, ಇದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೇ 23ರಂದು ಅಂಕಿತ ಹಾಕಿದ್ದಾರೆ. ನಂತರ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿ ಈ ನೂತನ ಕಾನೂನು ಜಾರಿಗೆ ತರಲಾಗಿದೆ.
ಹೊಸ ನಿಯಮಗಳ ಮುಖ್ಯ ಅಂಶಗಳು:
- ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಅಥವಾ ಗುಟ್ಕಾ ಉಗುಳಿದರೆ ₹1,000 ದಂಡ.
- 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದರ ಮೇಲೆ ನಿಷೇಧ.
- ಈ ನಿಯಮ ಉಲ್ಲಂಘಿಸಿದರೆ ₹1,000 ದಂಡ ವಿಧಿಸಲಾಗುತ್ತದೆ.
- ಹೋಟೆಲ್, ಪಬ್, ಬಾರ್ ಅಥವಾ ರೆಸ್ಟೋರೆಂಟ್ಗಳಲ್ಲಿ ಹುಕ್ಕಾ ಸೇವೆ ಸಂಪೂರ್ಣ ನಿಷೇಧಿತವಾಗಿದೆ.
- ನಿಷೇಧ ಉಲ್ಲಂಘನೆಯು ಸಂಭವಿಸಿದರೆ ₹50,000 ರಿಂದ ₹1 ಲಕ್ಷದವರೆಗೆ ದಂಡ ಹಾಗೂ 1 ರಿಂದ 3 ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಬಹುದು.
ಇದನ್ನು ಓದಿ –NPS ನಿವೃತ್ತರಿಗೆ ಹೆಚ್ಚುವರಿ UPS ಪಿಂಚಣಿ ಸೌಲಭ್ಯ
ಈ ಕಾನೂನು ಜನಸಾಮಾನ್ಯರ ಆರೋಗ್ಯ ರಕ್ಷಣೆಗಾಗಿ ಮತ್ತು ತಂಬಾಕು ಬಳಕೆಯ ವಿರುದ್ಧ ಸುವ್ಯವಸ್ಥಿತ ಕ್ರಮ ಕೈಗೊಳ್ಳಲು ಸರ್ಕಾರದಿಂದ ಮಾಡಲ್ಪಟ್ಟ ಒಂದು ಗಂಭೀರ ಹೆಜ್ಜೆಯಾಗಿದೆ.