ಮೈಸೂರು: ಆರ್ ಸಿಬಿ ಸಂಭ್ರಮಾಚರಣೆ ವೇಳೆ ಸಾವಿನ ದುರಂತದ ಬಗ್ಗೆ ಎರಡು ತಾಸಿನವರೆಗೂ ಪೊಲೀಸರು ಸೇರಿ ಅನೇಕರು ನನಗೆ ಮಾಹಿತಿಯನ್ನೇ ಕೊಟ್ಟಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಅಂದು ೩.೪೫ಕ್ಕೆ ಆಸ್ಪತ್ರೆಯಲ್ಲಿ ದಾಖಲಾಗಿ ಸಾವನ್ನಪ್ಪಿದ್ದ ಘಟನೆಯನ್ನು ಮುಚ್ಚಿಟ್ಟು ನನಗೆ ೫.೪೫ಕ್ಕೆ ಮಾಹಿತಿ ನೀಡಿದರು. ಸಂಪೂರ್ಣ ಪ್ರಕರಣದಲ್ಲಿ ಸರ್ಕಾರದ ತಪ್ಪು ಎನಿದೆ ಹೇಳಿ? ಮೇಲ್ನೋಟಕ್ಕೆ ತಪ್ಪು ಮಾಡಿದವರ ಮೇಲೆ ಕ್ರಮ ಜರುಗಿಸಿ, ನ್ಯಾಯಾಂಗ ತನಿಖೆಗೂ ಸರ್ಕಾರ ದಿಟ್ಟ ನಿಲುವು ತೆಗೆದುಕೊಂಡಿದೆ ಎಂದು ಬಿಜೆಪಿಯವರು ರಾಜಕೀಯವಾಗಿ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ನಾನು ಪೊಲೀಸರಿಗೆ ದಮ್ಕಿ ಹಾಕಿದ್ದೇನೆಂದು ಸುಳ್ಳು ಹೇಳಿದ್ದಾರೆ.
ಈಗ ಅವರಿಗೆ ಪೊಲೀಸರ ಮೇಲೆ ಪ್ರೀತಿ ಬಂದಿದೆ. ವಿರೋಧ ಪಕ್ಷದ ಒತ್ತಾಯದಂತೆ ನ್ಯಾಯಾಂಗ ತನಿಖೆ ಒಪ್ಪಿಸಿದ್ದೇವೆ ಸರ್ಕಾರ ಎಲ್ಲಿ ತಪ್ಪು ಮಾಡಿದೆ ತಿಳಿಸಿ. ಇನ್ನೂ ಕ್ರೀಡಾಂಗಣದಲ್ಲಿ ಕಾರ್ಯಕ್ರಮವನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಆಚರಿಸುವ ಬಗ್ಗೆ ನನಗೆ ಮಾಹಿತಿಯೇ ಇಲ್ಲ. ಕೇವಲ ಕಾರ್ಯಕ್ರಮದ ಅನುಮತಿ ನೀಡುತ್ತಿರುವುದಾಗಿ ಅಧಿಕಾರಿಗಳು ಗಮನಕ್ಕೆ ತಂದಿದ್ದರೂ ಆದರೆ ಯಾವುದೇ ವಿಚಾರ ನನಗೆ ಗೊತ್ತಿಲ್ಲ ಎಂದರು.
ವಿಧಾನಸೌಧದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಹೀಗಾಗಿ ಸತ್ಯವತಿಯವರ ಮೇಲೆ ಯಾವ ಕಾರಣಕ್ಕೆ ಕ್ರಮ ಕೈಗೊಳ್ಳೋಣ. ಘಟನೆ ನಡೆದಿರುವುದು ಕ್ರೀಡಾಂಗಣದಲ್ಲಿ ಅಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಕ್ರಿಕೆಟ್ ಅಸೋಸಿಯೇಷನ್ ನವರು ಹಾಗೂ ಭದ್ರತೆ ಕಲ್ಪಿಸಿದ್ದು ಪೊಲೀಸರ ಕರ್ತವ್ಯ ಹೀಗಾಗಿ ಅವರ ಮೇಲೆ ಕ್ರಮ ಜರುಗಿಸುವ ಕೆಲಸ ಮಾಡಿದ್ದೇವೆ. ಅಲ್ಲಿ ಪೊಲೀಸ್ ತಪ್ಪು ಮಾಡಿದ್ದಾರೆ. ನನಗೆ ಘಟನೆಯ ಬಗ್ಗೆ ಮಾಹಿತಿ ತಿಳಿಸಿದ್ದಾರಾ? ತಿಳಿಸಬೇಕೆ ಬೇಡವೇ? ಸರ್ಕಾರದ ಮುಖಸ್ಥನಿಗೆ ತಿಳಿಸಬೇಕಿತ್ತು. ಹೇಳಿಲ್ಲ ಎಂದರು.
ಇನ್ನೂ ಬೆಂಗಳೂರಿನ ತಮ್ಮ ನಿವಾಸದಲ್ಲಿ ಗೌಪ್ಯ ಅಧಿಕಾರಿಗಳ ಸಭೆ ಕುರಿತ ಪ್ರಶ್ನೆಗೆ ನಿರಂತರವಾಗಿ ಸಭೆ ನಡೆಯುತ್ತಾ ಇರುತ್ತದೆ. ಇದರಲ್ಲಿ ವಿಶೇಷವಿಲ್ಲ. ದುರಂತದಘಟನೆಯಿಂದ ಸರ್ಕಾರಕ್ಕೆ ಮುಜುಗರ ಆಗಿಲ್ಲ. ಇನ್ನೂ ನಮ್ಮನ್ನು ರಾಜೀನಾಮೆ ಕೇಳುವ ಬಿಜೆಪಿ ಹಾಗೂ ಕುಮಾರಸ್ವಾಮಿ ಅವರು ಕುಂಭಮೇಳದ ಸೇತುವೆ ಉದ್ಘಾಟನೆಯಂದು ಬಿದ್ದು ಹೊಯಿತು ಆಗ ಪ್ರಧಾನಿಯವರ ರಾಜೀನಾಮೆ ಕೇಳಿದಾರಾ ಎಂದು ಪ್ರಶ್ನಿಸಿ ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
ನರೇಗಾದಲ್ಲಿ ಅನುದಾನ ವಿಳಂಬ ಬಹಳ ವರ್ಷದಿಂದ ಬಿಜೆಪಿ ಅಧಿಕಾರದ ಅವಧಿಯಲ್ಲಿ ನಡೆಯುತ್ತಿದೆ. ಕಾಲಕ್ಕೆ ಸರಿಯಾಗಿ ತಲುಪಿಸಲ್ಲ. ಅನೇಕ ಪತ್ರ ಬರೆದಿದ್ದೇವೆ. ಆದರೂ ಅನುದಾನ ನೀಡುತ್ತಿಲ್ಲವೆಂದರು. ಸಚಿವ ಕೆ.ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ಖಾನ್, ಮಾಜಿ ಶಾಸಕ ಸೋಮಣ್ಣ ಇನ್ನಿತರರು ಉಪಸ್ಥಿತರಿದ್ದರು.
ಶೀಘ್ರ ದಸರಾ ಸಭೆ
ಶೀಘ್ರದಲ್ಲಿ ದಸರಾ ಪೂರ್ವಭಾವಿ ಸಭೆಯನ್ನು ಕರೆಯುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಇನ್ನೂ ಮೈಸೂರಿನಲ್ಲಿ ಕೆಡಿಪಿ ಸಭೆ ಸರಿಯಾಗಿ ನಡೆಯದ ಕುರಿತ ಪ್ರಶ್ನೆಗೆ ಈ ಬಗ್ಗೆ ಸಚಿವರೊಟ್ಟಿಗೆ ಚರ್ಚಿಸುವುದಾಗಿಯೂ ಹೇಳಿದರು.