- 12 ರಂದು ನ್ಯಾಯಕ್ಕಾಗಿ ಹೋರಾಟ
ಬೆಂಗಳೂರು :ಶ್ರೀ ಗುರು ರಾಘವೇಂದ್ರ ಕೋ – ಆಪರೇಟಿವ್ ಬ್ಯಾಂಕ್ ಠೇವಣಿದಾರರ ಹಣವನ್ನು ದುರುಪಯೋಗ ಪಡಿಸಿಕೊಂಡ ಮತ್ತು ಬ್ಯಾಂಕ್ ಗೆ ದೊಡ್ಡ ಪ್ರಮಾಣದಲ್ಲಿ ವಂಚನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇದೇ 12 ರಂದು ಗುರುವಾರ ಬೆಳಿಗ್ಗೆ 10.30 ರಿಂದ ಬೃಹತ್ ಪ್ರತಿಭಟನೆ, ಹೋರಾಟ ಮತ್ತು ಸಂವಹನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬಸವನಗುಡಿ ನೆಟ್ಟಕಲ್ಲಪ್ಪ ವೃತ್ತದ ಗಣೇಶ ದೇವಸ್ಥಾನದ ಪಕ್ಕದಲ್ಲಿರುವ ಆಟದ ಮೈದಾನದಲ್ಲಿ ಯುನೈಟೆಡ್ ಫೋರಂ ಆಫ್ ಡಿಪಾಸಿಟರ್ಸ್ ಇವರು ದೊಡ್ಡ ಮಟ್ಟದ ಸಭೆ ಆಯೋಜಿಸಿದ್ದು ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ನ ಪ್ರಮುಖರು ನಡೆಸಿರುವ ಅವ್ಯವಹಾರದ ಕುರಿತು ಚರ್ಚಿಸಲಾಗುತ್ತದೆ ಎಂದು ಡಿಪಾಜಿಟರ್ಸ್ ಜಂಟಿ ಕಾರ್ಯದರ್ಶಿಗಳಾದ ಹರೀಶ್ .ವಿ ಮತ್ತು ಜಿ.ಕೆ.ಗುರುರಾಜ್ ತಿಳಿಸಿದ್ದಾರೆ.
ಬ್ಯಾಂಕ್ಗೆ ಆರ್ ಬಿಐ ನಿರ್ಬಂಧ ಹೇರಿ ಇದೇ 10ಕ್ಕೆ ಐದೂವರೆ ವರ್ಷಗಳು ಕಳೆದಿವೆ, ಈ ಬ್ಯಾಂಕಿನಲ್ಲಿನ ಹಗರಣದ ಬಗ್ಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. ಪೊಲೀಸರು ಯಾವುದೇ ಆರೋಪಪಟ್ಟಿ ಸಲ್ಲಿಸಿಲ್ಲ. ಹೆಚ್ಚಿನ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಅವರೆಲ್ಲರೂ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಬ್ಯಾಂಕಿನ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಸಾಲ ವಸೂಲಾತಿಗೆ ಸರಿಯಾದ ಕ್ರಮ ಕೈಗೊಂಡಿಲ್ಲ. ಠೇವಣಿದಾರರ ಹಣವನ್ನು ದುರುಪಯೋಗಪಡಿಸಿಕೊಂಡ ಮತ್ತು ಬ್ಯಾಂಕಿನಲ್ಲಿ ವಂಚನೆ ಮಾಡಿದವರ ವಿರುದ್ಧ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಈ ಕಾರಣಕ್ಕಾಗಿ ಎಲ್ಲ ಠೇವಣಿದಾರರು ಸಭೆ ಸೇರಿ ಕಾನೂನಾತ್ಮಕವಾದ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ. ಬ್ಯಾಂಕ್ನ ಪ್ರಮುಖ ಹುದ್ದೆಯಲ್ಲಿರುವವರ ತನಿಖೆ ನಡೆಸಿ, ಅಪರಾಧಿಗಳನ್ನು ಶಿಕ್ಷಿಸಿ, ವಂಚಕರಿಂದ ಹಣವನ್ನು ವಸೂಲಿ ಮಾಡಬೇಕು. ಠೇವಣಿದಾರರಿಗೆ ವಸೂಲಿ ಮಾಡಿದ ಹಣವನ್ನು ಹಿಂದಿರುಗಿಸಲು ವಿಶೇಷ ತನಿಖಾ ತಂಡವನ್ನು ರಚಿಸಬೇಕು. ಈ ಕಾರಣಕ್ಕಾಗಿ ಮುಂದಿನ ಸಂವಿಧಾನಾತ್ಮಕವಾದ ಕ್ರಮವನ್ನು ನಿರ್ಧರಿಸಲು ಸಭೆ ಕರೆಯಲಾಗಿದೆ. ಇದರ ಜೊತೆಗೆ ಡಿಐಸಿಜಿಸಿ ವಿಮಾ ಮೊತ್ತವನ್ನು ರೂ. 5 ಲಕ್ಷ ದಿಂದ ಹೆಚ್ಚಿನ ಮೊತ್ತಕ್ಕೆ ಹೆಚ್ಚಿಸಬೇಕೆಂದು ನಾವು ಒತ್ತಾಯಿಸಲಿದ್ದೇವೆ. ಇದನ್ನು ಓದಿ –ಮುಡಾ ಹಗರಣ: ₹100 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು
ಪ್ರಸ್ತುತ ಕೋ- ಆಪರೇಟಿವ್ ಬ್ಯಾಂಕ್ ಗಳು ಸೇರಿದಂತೆ ಬ್ಯಾಂಕ್ಗಳು ಮಾತ್ರ ಠೇವಣಿ ವಿಮೆಯ ವ್ಯಾಪ್ತಿಯಲ್ಲಿವೆ. ಕೋಪ್ ಸೊಸೈಟಿ ಮತ್ತು ಸೌಹಾರ್ದ ಕೋಡ್ ಸೊಸೈಟಿಗಳಂತಹ ಕೋಪ್ ಸಂಸ್ಥೆಗಳನ್ನು ಡಿಐಸಿಜಿಸಿ ಕಾಯ್ದೆಯ ಮೂಲಕ ಠೇವಣಿ ವಿಮೆಯ ವ್ಯಾಪ್ತಿಗೆ ಸೇರಿಸಬೇಕು. ಈ ಕೋಪ್ ಸಂಸ್ಥೆಗಳ ಠೇವಣಿದಾರರು ಸಹ ಕೋಪ್ ಸಂಸ್ಥೆಯಿಂದ ನಡೆಸಲಾದ ಹಗರಣಕ್ಕೆ ಬಲಿಯಾಗುತ್ತಾರೆ. ಈ ಕಾರಣವನ್ನು ಮುಂದಿಟ್ಟುಕೊಂಡು ಒತ್ತಾಯಿಸುವುದಾಗಿ ಹೇಳಿದ್ದಾರೆ.