ಬೆಂಗಳೂರು:ವಾಲ್ಮೀಕಿ ಸಮಾಜದವರಿಗೆ ಮೀಸಲಾತಿ ಕುರಿತಂತೆ ವಂಚನೆಯಲ್ಲದೆ ಹಣಕಾಸು ಅಕ್ರಮಗಳಿಂದ ಕೂಡಿದ ಬಹುಕೋಟಿ ಹಗರಣ ಪ್ರಕರಣದಲ್ಲಿ ಹೊಸ ಬೆಳವಣಿಗೆ ನಡೆದಿದೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಬೆಳ್ಳಂಬೆಳಗ್ಗೆ ಜಾರಿ ನಿರ್ದೇಶನಾಲಯ (ED)ದ ಅಧಿಕಾರಿಗಳು ಬಳ್ಳಾರಿ ಸಂಸದ ತುಕಾರಾಂ ಹಾಗೂ ಮೂವರು ಶಾಸಕರ ಮನೆ ಮತ್ತು ಸಂಬಂಧಿತ ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಇವರು ಹೊಡೆತಕೆ ಒಳಗಾದ ಶಾಸಕರಲ್ಲಿ, ವಾಲ್ಮೀಕಿ ಸಮಾಜದ ಪ್ರಮುಖ ನಾಯಕರು ಸೇರಿದಂತೆ ಬಳ್ಳಾರಿ, ವಿಜಯನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಬಂಧಿಸಿದವರು ಇದ್ದಾರೆ ಎನ್ನಲಾಗಿದೆ. ಇಡಿಯಿಂದ ಈ ದಾಳಿಗಳು ಬೆಂಗಳೂರಿನಲ್ಲಿ ಹಾಗೂ ಬಳ್ಳಾರಿಯ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದು, ಡಿಜಿಟಲ್ ದಾಖಲೆಗಳು, ಹಣದ ಹಂಚಿಕೆ ಸಂಬಂಧಿತ ಪಾವತಿ ದಾಖಲೆಗಳು ಹಾಗೂ ಜಮೀನು ಸಂಬಂಧಿತ ದಾಖಲೆಗಳನ್ನು ಪರಿಶೀಲನೆಗೆ ತೆಗೆದುಕೊಂಡಿದ್ದಾರೆ.
ಈ ಹಗರಣದಲ್ಲಿ ಅನೇಕ ರಾಜಕೀಯ ನಾಯಕರು ಹಾಗೂ ಅಧಿಕಾರಿಗಳು ತೀವ್ರವಾಗಿ ಸಂಬಂಧ ಹೊಂದಿರುವ ಶಂಕೆ ವ್ಯಕ್ತವಾಗಿದ್ದು, ಈಗಾಗಲೇ ಕೆಲವರನ್ನು ಇಡಿ ಪ್ರಶ್ನೆಗೊಳಪಡಿಸಿದೆ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ದಾಳಿಗಳು ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಇದನ್ನು ಓದಿ –ಗುರು ರಾಘವೇಂದ್ರ ಬ್ಯಾಂಕ್ :ಠೇವಣಿದಾರರ ಹಣ ದುರುಪಯೋಗ
ಇಡಿಯ ಈ ದಾಳಿ ಕರ್ನಾಟಕದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.