By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Politics
    Politics
    Politics is the art of looking for trouble, finding it everywhere, diagnosing it incorrectly and applying the wrong remedies.
    Show More
    Top News
    Latest News
  • Articles
    ArticlesShow More
    “ಆರೋಗ್ಯ, ಆಧ್ಯಾತ್ಮದ ಮೂಲ ಯೋಗ”
    June 21, 2025
    ಯೋಗಾ ಯೋಗ..
    June 21, 2025
    ವಿಶ್ವ ಸಂಗೀತ ದಿನದ ಶುಭಾಶಯಗಳು
    June 21, 2025
    ಪತಂಜಲಿ: ವ್ಯಾಕರಣ ಮತ್ತು ಯೋಗದ ಯುಗಪುರುಷ
    June 21, 2025
    ನೀಲಿ ಸುಂದರಿ ನೇರಳೆ
    June 17, 2025
  • Sports
  • National
  • International
  • Crime
  • Contact Us
Reading: ನೀಲಿ ಸುಂದರಿ ನೇರಳೆ
Share
Font ResizerAa
VarthamanVarthaman
  • Home
  • Karnataka
  • Politics
  • Articles
  • Sports
  • National
  • International
  • Crime
  • Contact Us
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Politics
  • Articles
  • Sports
  • National
  • International
  • Crime
  • Contact Us
Follow US
Varthaman > Blog > Articles > ನೀಲಿ ಸುಂದರಿ ನೇರಳೆ
Articles

ನೀಲಿ ಸುಂದರಿ ನೇರಳೆ

Team Varthaman
Last updated: June 17, 2025 1:19 pm
Team Varthaman Published June 17, 2025
Share
SHARE

ಬಹಳಷ್ಟು ಜನ ನೈಸರ್ಗಿಕವಾಗಿ ನಮಗೆ ದೊರೆಯುವ ಪದಾರ್ಥಗಳನ್ನು ತಿಂದು ಉತ್ತಮ ಆರೋಗ್ಯವನ್ನು ಹೊಂದುವ ಬದಲಿಗೆ ಮಾರುಕಟ್ಟೆಯಲ್ಲಿ ದೊರೆಯುವ ದುಬಾರಿ ಬೆಲೆಯ ಪದಾರ್ಥಗಳನ್ನು ಕೊಂಡು ತರುತ್ತಾರೆ. ಆದರೆ ದೈವದತ್ತವಾಗಿ ನಮಗೆ ದೊರೆತಿರುವ ಹಣ್ಣುಗಳನ್ನು ನಾವೇಕೆ ಕಡೆಗಣಿಸಬೇಕು…? ಒಂದೊದು ಹಣ್ಣು ಒಂದೊಂದು ರೀತಿಯ ಆರೋಗ್ಯ ಲಾಭ ನೀಡುತ್ತದೆ. ಅದೇ ರೀತಿ ನೇರಳೆ ಹಣ್ಣು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳು ದೊರೆಯುತ್ತದೆ.

Contents
ನವಿರಾದ ನೇರಳೆ ಹಣ್ಣಿನಲ್ಲಿರುವ ನೂರೆಂಟು ಔಷದೀಯ ಗುಣಗಳು.ಮುಖದ ಸೌಂದರ್ಯ ಹೆಚ್ಚಿಸುತ್ತದೆ ನೇರಳೆ ಹಣ್ಣುನೇರಳೆ ಹಣ್ಣಿನ ಜೊತೆ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ತಿನ್ನಬಾರದು.!

ನೀಲಿ ಬಣ್ಣಕ್ಕೆ ಹೆಸರುವಾಸಿಯಾದ ನೇರಳೆ ಹಣ್ಣು ಮೇ ಮತ್ತು ಜೂನ್‌ನಲ್ಲಿ ಸಿಗುವ ಸೀಸನಲ್‌ ಹಣ್ಣಾಗಿರುವುದರಿಂದ, ವರ್ಷದಲ್ಲಿ ಒಮ್ಮೆ ಮಾತ್ರ ಮಾರುಕಟ್ಟೆಯಲ್ಲಿ ಕಾಣಸಿಗುತ್ತದೆ. ಈ ಹಣ್ಣು ಅದರ ಗಾಢ ಬಣ್ಣ ಮತ್ತು ಹುಳಿ ಸಿಹಿ ರುಚಿಯಿಂದಾಗಿ ಜನರು ಇದನ್ನು ಇಷ್ಟಪಡುತ್ತಾರೆ. ಆಯುರ್ವೇದ ಗುಣಗಳನ್ನು ಹೊಂದಿರುವ ಈ ಹಣ್ಣಿನಲ್ಲಿ ಹೇರಳವಾಗಿ ವಿಟಮಿನ್‌ಗಳು, ಖನಿಜಾಂಶಗಳು ಮತ್ತು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. 100 ಗ್ರಾಂ. ನೇರಳೆ ಹಣ್ಣು ಕ್ಯಾಲರಿ (ಶೇ.6.2), ನಾರಿನಂಶ (ಶೇ.1.9), ಕಾಬೋಹೈಢ್ರೇಡ್ಸ್ (ಶೇ.14), ಖನಿಜಾಂಶ (ಶೇ.1.4), ಕಬ್ಬಿಣ (1.2 ಮಿ.ಗ್ರಾಂ.) ಕ್ಯಾಲ್ಸಿಯಂ (15 ಮಿ.ಗ್ರಾಂ.), ಮಿಟಮಿನ್ ‘ಸಿ’ (ಶೇ.18) ಮತ್ತು ಶೇ.83ರಷ್ಟು ನೀರಿನ ಅಂಶ ಹೊಂದಿರುತ್ತದೆ.

Join WhatsApp Group

ನವಿರಾದ ನೇರಳೆ ಹಣ್ಣಿನಲ್ಲಿರುವ ನೂರೆಂಟು ಔಷದೀಯ ಗುಣಗಳು.


  1. ನೇರಳೆ ಹಣ್ಣು, ಕ್ಯಾನ್ಸರ್​​​ನಂತಹ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಸಂಶೋಧನೆಯ ಪ್ರಕಾರ, ನೇರಳೆ ಹಣ್ಣು, ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಇವುಗಳಲ್ಲಿರುವ ಅಂಶಗಳು ದೇಹದಿಂದ ಫ್ರೀ ರಾಡಿಕಲ್​​​ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮೂತ್ರ ಹಾಗೂ ಬೆವರಿನ ಮೂಲಕ ದೇಹದಲ್ಲಿನ ಕಲ್ಮಷಗಳನ್ನು ಹೊರದೂಡುವಲ್ಲಿ ಸಹಾಯ ಮಾಡುತ್ತದೆ.
  2. ನೇರಳೆ ಹಣ್ಣು ನಮ್ಮ ಹೃದಯವನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಬೆಲ್ಲವನ್ನು ಸೇರಿಸಿ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ದೂರ ಇರುತ್ತದೆ. ಕಿಡ್ನಿ ಕಲ್ಲುಗಳಿಂದ ಬಳಲುತ್ತಿರುವವರಿಗೆ ಕೂಡಾ ನೇರಳೆ ಹಣ್ಣು ಬಹಳ ಸಹಕಾರಿ. ಉರಿ ಮೂತ್ರ ಸಮಸ್ಯೆ ಇರುವವರಿಗೆ ಕೂಡಾ ನೇರಳೆ ಹಣ್ಣಿನ ರಸ ರಾಮಬಾಣ ಎನ್ನಲಾಗಿದೆ.
  3. ತೂಕ ಹೆಚ್ಚಾಗುವುದನ್ನು ನಿಯಂತ್ರಿಸಲು ನೇರಳೆ ಹಣ್ಣು ಬಹಳ ಉಪಯುಕ್ತವಾಗಿದೆ. ಇದು ಕಡಿಮೆ ಕ್ಯಾಲೋರಿ ಹೊಂದಿರುವ ಹಣ್ಣು. ಆದ್ದರಿಂದ ತೂಕ ಕಳೆದುಕೊಳ್ಳಬೇಕು ಎಂದು ಬಯಸುವವರು ಹೆಚ್ಚಾಗಿ ನೇರಳೆ ಹಣ್ಣು ಉಪಯೋಗಿಸಿ.
  4. ನೇರಳೆ ಹಣ್ಣಿನ ಜೊತೆಗೆ, ಅದರ ಬೀಜಗಳು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಮಧುಮೇಹಿಗಳು ನೇರಳೆ ಬೀಜಗಳನ್ನು ತಿನ್ನುವ ಮೂಲಕ ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸಬಹುದು. ನೇರಳೆ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಒಂದು ಟೀ ಚಮಚ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಮಿಶ್ರಣ ಮಾಡಿ ಕುಡಿಯಿರಿ.
  5. ನೇರಳೆ ಹಣ್ಣಿನಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು ಇದು ರಕ್ತವನ್ನು ಶುದ್ಧೀಕರಿಸುವುದಲ್ಲದೆ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತವನ್ನು ಶುದ್ಧೀಕರಣದ ಜೊತೆಗೆ ಹಿಮೊಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ರಕ್ತದ ಒತ್ತಡವನ್ನೂ ಕಡಿಮೆ ಮಾಡುತ್ತದೆ. ನೇರಳೆ ಹಣ್ಣು ದೇಹದ ಉಷ್ಣತೆಯನ್ನು ಕಡಿಮೆ ಮಾಡುವಲ್ಲಿ ಕೂಡಾ ಸಹಾಯಕಾರಿಯಾಗಿದೆ. ನೇರಳೆ ಹಣ್ಣಿನೊಂದಿಗೆ ಸ್ವಲ್ಪ ಬೆಲ್ಲವನ್ನು ಸೇರಿಸಿ ತಿನ್ನುವುದರಿಂದ ಅತಿಸಾರ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು.
  6. ರುಚಿಯಾಗಿರುವ ನೇರಳೆ ಹಣ್ಣು ಚರ್ಮದ ಹಲವು ಸಮಸ್ಯೆಗಳಿಗೆ ರಾಮಬಾಣವಾಗಿದೆ. ಮುಖ್ಯವಾಗಿ ಮೊಡವೆಗಳನ್ನು ನಿವಾರಿಸುವುದಲ್ಲಿ ಇದು ಪರಿಣಾಮಕಾರಿ. ಒಣಗಿಸಿದ ನೇರಳೆ ಬೀಜವನ್ನು ರುಬ್ಬಿ ಪುಡಿ ಮಾಡಿ, ದೇಸಿ ಹಸುವಿನ ಹಾಲಿನಲ್ಲಿ ಕಲಸಿ ರಾತ್ರಿ ಮಲಗುವ ಮುನ್ನ ಮೊಡವೆಗಳಿಗೆ ಹಚ್ಚಿ ಬೆಳಗ್ಗೆ ತೊಳೆಯಬೇಕು. ಪ್ರತಿ ದಿನ ಹೀಗೆ ಮಾಡುವುದರಿಂದ ಮೊಡವೆಗಳು ಮಾಯವಾಗುತ್ತವೆ.
  7. ನೇರಳೆ ಬೀಜಗಳುನ್ನು ಚೆನ್ನಾಗಿ ಒಣಗಿಸಿ, ಸಿಪ್ಪೆ ತೆಗೆದು ಹಸಿರು ಬಣ್ಣದ ಭಾಗವನ್ನು ಮಾತ್ರ ಸಂಗ್ರಹಿಸಿ, ಬಿಸಿಲಲ್ಲಿ ಒಣಗಿಸಿ, ಸರಿಯಾಗಿ ಒಣಗಿದ ಬಳಿಕ ಅದನ್ನು ನಯವಾಗಿ ಪುಡಿಮಾಡಿ,ಒಂದು ಚಮಚ ಪುಡಿಯನ್ನು ಒಂದು ಲೋಟ ನೀರಿಗೆ ಬೆರೆಸಿ ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಸಮಗ್ರ ಆರೋಗ್ಯ ಸುಧಾರಣೆ ಕಂಡುಬರುತ್ತದೆ.
  8. ಋತುಚಕ್ರದ ವೇಳೆ ಮಹಿಳೆಯರಲ್ಲಿ ಉಂಟಾಗುವ ರಕ್ತಸ್ರಾವದಿಂದ ಆಗುವ ರಕ್ತದ ಹಾನಿಯನ್ನು ಸರಿದೂಗಿಸುವ ಶ್ರೇಷ್ಠ ಗುಣ ನೇರಳೆ ಹಣ್ಣಿನಲ್ಲಿದೆ. ರಕ್ತಹೀನತೆಯಿಂದ ಬಳಲುತ್ತಿರುವವರು ಸಾಧ್ಯವಾದರೆ ಪ್ರತಿ ದಿನವೂ ನೇರಳೆ ಹಣ್ಣು ಸೇವಿಸಬೇಕು. ಇದರಲ್ಲಿರುವ ಕಬ್ಬಿಣದ ಅಂಶವು ರಕ್ತವನ್ನು ಶುದ್ಧೀಕರಿಸುತ್ತದೆ. ಜೊತೆಗೆ ರಕ್ತ ಹೀನತೆಯಿಂದ ಮುಕ್ತಿ ನೀಡುತ್ತದೆ. ನೇರಳೆ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದ ಒತ್ತಡ ನಿವಾರಣೆಯಾಗುತ್ತದೆ.

ಮುಖದ ಸೌಂದರ್ಯ ಹೆಚ್ಚಿಸುತ್ತದೆ ನೇರಳೆ ಹಣ್ಣು


1)ನೇರಳೆ ಹಣ್ಣು ತಿನ್ನಲು ಬಲುರುಚಿ. ಅಷ್ಟೇ ಅಲ್ಲದೇ ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮಾತ್ರವಲ್ಲ ಇದರಿಂದ ಚರ್ಮದ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.

2)ಮೊಡವೆಗಳ ಸಮಸ್ಯೆಗೆ ರಾಮಬಾಣವಿದ್ದಂತೆ. ಒಣಗಿಸಿದ ನೇರಳೆ ಬೀಜವನ್ನು ರುಬ್ಬಿ ಪುಡಿ ಮಾಡಿಕೊಂಡು ಹಸುವಿನ ಹಾಲನ್ನು ಹಾಕಿ ಮಿಕ್ಸ್ ಮಾಡಿ ರಾತ್ರಿ ಮಲಗುವ ಮುನ್ನ ಮೊಡವೆಗಳಿಗೆ ಹಚ್ಚಿ ಬೆಳಗ್ಗೆ ತೊಳೆಯಬೇಕು. ಹೀಗೆ ಪ್ರತಿದಿನ ಮಾಡಿದರೆ ಮೊಡವೆಗಳು ಮಾಯವಾಗುತ್ತದೆ.

.3)ಮುಖದ ಮೇಲೆ ಕಪ್ಪು ಕಲೆ ನಿವಾರಣೆಗೆ ನೇರಳೆ ಬೀಜದ ಪುಡಿಗೆ ಕಡಲೇ ಹಿಟ್ಟು, ಕೆಲ ಬಾದಾಮಿ ಎಣ್ಣೆಯ ಹನಿಗಳು ಮತ್ತು ರೋಸ್ ವಾಟರ್ ನ್ನು ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ, ಒಣಗಲು ಬಿಡಿ. ಯಾಗಲು ಸಂಪೂರ್ಣ ಒಣಗಿದ ನಂತರ ತಣ್ಣೀರಿನಿಂದ ತೊಳೆಯಬೇಕು.

4)ತ್ವಚೆಯ ಹೊಳಪಿಗೆ ನೇರಳೆ ಹಣ್ಣಿನ ಬೀಜದ ಪುಡಿ ಮತ್ತು ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿಗೆ, ಎರಡು ಹನಿ ಬಾದಾಮಿ ಎಣ್ಣೆ ಮತ್ತು ರೋಸ್ ವಾಟರ್ ನ್ನು ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಫೇಸ್ ಪ್ಯಾಕ್ ಹಾಕಿಕೊಂಡು 15 ನಿಮಿಷಗಳ ನಂತರ ತೊಳೆಯಬೇಕು. ಈ ರೀತಿ ಮೂರ್ನಾಲ್ಕು ದಿನಗಳಿಗೆ ಒಮ್ಮೆ ಮಾಡಿದರೆ ಒಳ್ಳೆಯ ಫಲಿತಾಂಶ ನಿಮ್ಮದಾಗುತ್ತದೆ.

ನೇರಳೆ ಹಣ್ಣಿನ ಜೊತೆ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ತಿನ್ನಬಾರದು.!

ಮೊದಲೇ ಹೇಳಿದಂತೆ ನೇರಳೆ ಹಣ್ಣು ಆರೋಗ್ಯದ ಗಣಿ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು, ರಕ್ತದೊತ್ತಡವನ್ನು ನಿಯಂತ್ರಿಸಲು, ಹಲ್ಲುಗಳನ್ನು ಸ್ವಚ್ಛಗೊಳಿಸಲು, ಒಸಡುಗಳಲ್ಲಿ ರಕ್ತಸ್ರಾವವನ್ನು  ತಡೆಯಲು, ತೂಕ ನಷ್ಟಕ್ಕೆ  ನೇರಳೆ ಹಣ್ಣು ಸಹಕಾರಿ. ಆದರೆ ಈ ಹಣ್ಣಿನೊಂದಿಗೆ 3 ವಸ್ತುಗಳನ್ನು ತಿನ್ನಬಾರದು.  

1) ಅರಿಶಿಣ ಕೂಡಾ ನಮ್ಮ ಆರೋಗ್ಯಕ್ಕೆ ಬಹಳಷ್ಟು ಲಾಭ ನೀಡುತ್ತದೆ. ಇದರಲ್ಲಿ ಅನೇಕ ಔಷಧೀಯ ಗುಣಗಳು ಅಡಗಿವೆ. ಆದರೆ ಇದನ್ನು ಎಂದಿಗೂ ನೇರಳೆ  ಹಣ್ಣಿನೊಂದಿಗೆ ತಿನ್ನಬಾರದು. ಈ ಎರಡು ವಸ್ತುಗಳು ಪರಸ್ಪರ ಪ್ರತಿಕ್ರಿಯಿಸುತ್ತವೆ. ಇದರಿಂದ ಹೊಟ್ಟೆ ನೋವು, ಅಲರ್ಜಿಗಳು ಸಂಭವಿಸುವ ಅಪಾಯ ಎದುರಾಗುತ್ತದೆ. 

2) ನೇರಳೆ ಹಣ್ಣನ್ನು ಹಾಲು ಅಥವಾ ಹಾಲಿನ ಉತ್ಪನ್ನಗಳೊಂದಿಗೆ ತಿನ್ನಬಾರದು.  ಹಾಲು ಮತ್ತು ನೇರಳೆ ಹಣ್ಣನ್ನು ಒಟ್ಟಿಗೆ ತಿಂದರೆ ಅಜೀರ್ಣ, ಗ್ಯಾಸ್, ಹೊಟ್ಟೆ ನೋವಿನ  ಸಮಸ್ಯೆ ಕಾಣಿಸಿಕೊಳ್ಳಬಹುದು. ಈ ಕಾರಣದಿಂದಾಗಿ ನೇರಳೆ ಹಣ್ಣು ತಿನ್ನುವ ಮೊದಲು ಅಥವಾ ತಿಂದ ನಂತರ ತಕ್ಷಣ ಹಾಲು ಕುಡಿಯಬಾರದು.   

3) ನೇರಳೆ ಹಣ್ಣು ತಿನ್ನುವ ಮೊದಲು ಅಥವಾ ನಂತರ ಉಪ್ಪಿನಕಾಯಿ ಸೇವಿಸಿದರೆ, ವಾಂತಿ,  ಗ್ಯಾಸ್ ಮತ್ತು ಎದೆಯುರಿ  ಸಮಸ್ಯೆಗಳು ಎದುರಾಗಬಹುದು. 

ಸೌಮ್ಯಾ ಸನತ್

  • KRS ಜಲಾಶಯ ಬಹುಮಟ್ಟಿಗೆ ಭರ್ತಿ: ನೀರು ಬಿಡುಗಡೆ ಸಾಧ್ಯತೆ
    by Team Varthaman
    June 23, 2025
  • ವಂಚನೆ ಪ್ರಕರಣ: ಐಶ್ವರ್ಯಾ ಗೌಡಗೆ ಇಡಿಯಿಂದ ಬಿಗ್ ಶಾಕ್
    by Team Varthaman
    June 23, 2025
  • ಇರಾನ್ vs ಇಸ್ರೇಲ್: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಆತಂಕ
    by Team Varthaman
    June 23, 2025
  • ಜೂನ್ 23ರಿಂದ 28ರ ವರೆಗೆ ಭಾರೀ ಮಳೆಯ ಎಚ್ಚರಿಕೆ
    by Team Varthaman
    June 23, 2025
  • ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಮುಖ ಗುರುತು ಆಧಾರಿತ ‘AI’ ಹಾಜರಾತಿ ಪ್ರಾರಂಭ
    by Team Varthaman
    June 23, 2025

ಗಣೇಶ ಚತುರ್ಥಿ 2024 (Ganesha Chaturthi 2024)

ಶಂಕರ ಪಂಚಮಿ : ನಮಾಮಿ ಲೋಕ ಶಂಕರಂ

ವಿಶ್ವ ಸಂಗೀತ ದಿನದ ಶುಭಾಶಯಗಳು

“ಬುದ್ಧ ಪೌರ್ಣಮಿ ವಿಶೇಷ “

ತುಪ್ಪ ಎಂಬ ಮಹಾ ಔಷಧಿ

TAGGED:Indian BlackberryIndian plumKannada Articleನೇರಳೆ
Share This Article
Facebook Email Print
Leave a comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnatakaTrending

ಚಿನ್ನ ಮತ್ತು ಬೆಳ್ಳೆಯ ಸಾಲದ ಮೇಲೆ RBIಯಿಂದ ಹೊಸ ನಿಯಮಗಳು ಜಾರಿ

Team Varthaman Team Varthaman June 14, 2025
ಬೆಂಗಳೂರು ಕಾಲ್ತುಳಿತ: ಹೈಕೋರ್ಟ್ ಸ್ವಯಂಪ್ರೇರಿತ PIL ದಾಖಲಿಸಿ, ವರದಿ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶನ
ಕೆಲಸ ಮತ್ತು ಹಸಿವು
CBSE 10 ಮತ್ತು 12ನೇ ತರಗತಿಯ ಫಲಿತಾಂಶ ಮೇ ಅಂತ್ಯಕ್ಕೆ : ವಿದ್ಯಾರ್ಥಿಗಳಿಗೆ ಒಂದಷ್ಟು ಮಾಹಿತಿ
ಹನಿಟ್ರ್ಯಾಪ್ ಪ್ರಕರಣ: ಎಫ್‌ಐಆರ್ ಆಗದೇ ತನಿಖೆ ಸಾಧ್ಯವಿಲ್ಲ – ಗೃಹಸಚಿವ ಪರಮೇಶ್ವರ್
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • National News
  • Politics
  • IPL 2025
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?