By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Politics
    Politics
    Politics is the art of looking for trouble, finding it everywhere, diagnosing it incorrectly and applying the wrong remedies.
    Show More
    Top News
    Latest News
  • Articles
    ArticlesShow More
    ದೇಹದಲ್ಲಿ ವಿಟಮಿನ್ D ಕೊರತೆ ಲಕ್ಷಣಗಳು ಪರಿಹಾರಗಳು
    July 18, 2025
    ಕರುಣೆಯ ವಾರಿಧಿ ನಮ್ಮ ಗುರುನಾಥ
    July 15, 2025
    ಆರೋಗ್ಯಕಿಂ ಮಿಗಿಲೇನಿಹುದು
    July 14, 2025
    “ಆನೆಯ ಸೋಲು”(ಮಕ್ಕಳ ಕಥೆ)
    July 13, 2025
    ಪ್ರೋಟೀನ್‌ಗಳ ಪವರ್ ಹೌಸ್ : ಮೊಳಕೆ ಕಾಳುಗಳು
    July 11, 2025
  • Sports
  • National
  • International
  • Crime
  • Contact Us
Reading: ದೃಶ್ಯ ಮಾಧ್ಯಮದ ಅಬ್ಬರ:ಅಸ್ತಿತ್ವ ಉಳಿಸಿಕೊಂಡ ಪತ್ರಿಕೆಗಳು ಡಾ.ಜಯಪ್ರಕಾಶ್‌ಗೌಡ
Share
Font ResizerAa
VarthamanVarthaman
  • Home
  • Karnataka
  • Politics
  • Articles
  • Sports
  • National
  • International
  • Crime
  • Contact Us
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Politics
  • Articles
  • Sports
  • National
  • International
  • Crime
  • Contact Us
Follow US
Varthaman > Blog > Karnataka > Mandya > ದೃಶ್ಯ ಮಾಧ್ಯಮದ ಅಬ್ಬರ:ಅಸ್ತಿತ್ವ ಉಳಿಸಿಕೊಂಡ ಪತ್ರಿಕೆಗಳು ಡಾ.ಜಯಪ್ರಕಾಶ್‌ಗೌಡ
KarnatakaMandya

ದೃಶ್ಯ ಮಾಧ್ಯಮದ ಅಬ್ಬರ:ಅಸ್ತಿತ್ವ ಉಳಿಸಿಕೊಂಡ ಪತ್ರಿಕೆಗಳು ಡಾ.ಜಯಪ್ರಕಾಶ್‌ಗೌಡ

Team Varthaman
Last updated: July 7, 2025 2:30 pm
Team Varthaman Published July 7, 2025
Share
SHARE

ಮಂಡ್ಯ : ದೃಶ್ಯ ಮಾಧ್ಯಮದ ಅಬ್ಬರದ ನಡುವೆಯೂ ಅಕ್ಷರ (ಪತ್ರಿಕೆ )ಮಾಧ್ಯಮವನ್ನು ಯಾರು ಕಡೆಗಣಿಸಲು ಸಾಧ್ಯವಿಲ್ಲ. ಪ್ರಬಲವಾದ ಮಾಧ್ಯಮದ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್‌ಗೌಡ ಕಿವಿಮಾತು ಹೇಳಿದರು.

ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಪತ್ರಿಕಾ ಮಿತ್ರರು ಹಾಗೂ ಹಿತೈಷಿಗಳ ಬಳಗದ ವತಿಯಿಂದ ಹಿರಿಯ ಪತ್ರಕರ್ತರಾದ ಕೆ.ಕೆ.ಶೆಟ್ಟಿ ಕುತ್ತಿಕಾರ್ ಪ್ರಶಸ್ತಿ ಪುರಸ್ಕೃತ ಮತ್ತೀಕೆರೆ ಜಯರಾಮ್ ಹಾಗೂ ಹೆಚ್.ಕೆ.ವೀರಣ್ಣಗೌಡ ಪ್ರಶಸ್ತಿ ಪುರಸ್ಕೃತ ಬಸವರಾಜ ಹೆಗ್ಗಡೆ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪತ್ರಿಕೆ ಎಂಬುದು ಇಂದಿಗೂ ಪ್ರಬಲ ಮಾಧ್ಯಮವಾಗಿದೆ. ದೃಶ್ಯ ಮಾಧ್ಯಮದ ನಡುವೆಯೂ ಪತ್ರಿಕೆಯು ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿದೆ. ಪತ್ರಿಕೆಯಲ್ಲಿ ಸುದ್ದಿ ಬಂದೊಡನೆ ಸತ್ಯ ಎಂದು ನಂಬುವವರು ಇಂದಿಗೂ ನಮ್ಮ ನಡುವೆಯಿದ್ದಾರೆ. ಪತ್ರಿಕೆ ಹಲವರ ಜೀವನ ರೂಪಿಸಿದೆ. ಹಲವರ ಜೀವನವನ್ನು ಕಡೆಗಣಿಸಿದೆ ಎಂದು ಹೇಳಿದರು.

Join WhatsApp Group

ಪತ್ರಿಕೆಯಿಂದ ಅನುಕೂಲ ಹಾಗೂ ಅನಾನುಕೂಲವೂ ಆಗಿದ್ದು, ಅನಾನುಕೂಲವಾಗದಂತೆ ಸುದ್ದಿಗಳ ಮೂಲ ಸಂಗ್ರಹಿಸಿ ಸತ್ಯಾಸತ್ಯೆಯ ಮೇರೆಗೆ ಸುದ್ದಿ ಮಾಡುವಂತೆ ಸಲಹೆ ನೀಡಿದರು.

ಬಸವರಾಜ ಹೆಗ್ಗಡೆಯೊಂದಿಗೆ ಸುಮಾರು 40 ವರ್ಷಗಳ ಒಡನಾಟವಿದ್ದು, ಜಿಲ್ಲೆಯ ಹಲವು ಸಂಘಟನೆಗಳಲ್ಲಿ ತೊಡಗಿಸಿಕೊಂಡ ಹೆಗ್ಗಡೆ ನಮ್ಮಲ್ಲಿ ಆಸ್ಥಾನ ಪಂಡಿತರಿದ್ದಂತೆ. ನಮ್ಮ ಜೊತೆಯಲ್ಲಿ ಸದಾ ಹೆಜ್ಜೆ ಹಾಕಿದವರಾಗಿದ್ದಾರೆ. ನನ್ನ ಬೆಳೆವಣಿಗೆಯಲ್ಲಿ ಮತ್ತೀಕೆರೆ ಜಯರಾಮ್, ಬಸವರಾಜ ಹೆಗ್ಗಡೆ, ಕೆ.ಎನ್ .ರವಿ, ಕೃಷ್ಣಸ್ವರ್ಣಸಂದ್ರ ಅವರುಗಳೂ ಸೇರಿದಂತೆ ಹಲವರ ಕೊಡುಗೆಯಿದೆ ಎಂದು ನೆನೆದರು.

ದಿವ್ಯಾ ಸಾನಿಧ್ಯ ವಹಿಸಿದ್ದ ವಿಶ್ವ ಒಕ್ಕಲಿಗ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಅವಿರತ ಕಷ್ಟಗಳನ್ನು ಅನುಭವಿಸಿ ಸಮಾಜಕ್ಕೆ ಕೊಡುಗೆಯನ್ನು ನೀಡಿದಾಗ ಜನರು ಪತ್ರಕರ್ತರನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂದು ತಿಳಿಸಿದರು.

ಪತ್ರಕರ್ತರು ಜನಸಾಮಾನ್ಯರ ನಡುವಿನಲ್ಲಿದ್ದು ಸಮಸ್ಯೆ ಅರಿತವರಾಗಿರುತ್ತಾರೆ. ಕಷ್ಟದಲ್ಲಿರುವ ಪತ್ರಕರ್ತರಿಗೆ ಬೇಕಾದ ಸವಲತ್ತುಗಳನ್ನು ಒದಗಿಸುವಂತಹ ಹಿರಿಯ ಪತ್ರಕರ್ತರ ಕಾರ್ಯ ವೈಖರಿ ಪತ್ರಕರ್ತರಿಗೆ ಶಕ್ತಿಯನ್ನು ತುಂಬುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಾಧ್ಯಮ ಸ್ನೇಹಿತರು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಸಮಾ ಜದ ಒಳಿತಿಗೆ ಕೊಡುಗೆ ನೀಡಬೇಕು. ಮತ್ತಿ ಕೆರೆ ಜಯರಾಮ್ ಅವರು ಉತ್ತಮ ಸಂಘಟಕರಾಗಿ ಪತ್ರಕರ್ತರ ಕ್ಷೇಮದ ಕಾಳಜಿ ವಹಿಸುವ ಕೆಲಸ ಮುಂದುವರೆಸಲಿ. ಬಸವರಾಜ ಹೆಗ್ಗಡೆಯವರು ೬೦ ವರ್ಷಗಳ ಸಾರ್ಥಕ ಜೀವನ ನಡೆಸುತ್ತಿದ್ದು, ಶತಾಯುಷಿಗಳಾಗಿ ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂದು ಆಶಯ ನುಡಿಗಳನ್ನಾಡಿದರು.

ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಮಾತನಾಡಿ, ಮತ್ತೀಕೆರೆ ಜಯರಾಂ ಅವರು ಏನಾದರು ಬರೆದರು ಅದರಿಂದ ವ್ಯತ್ಯಾಸ ಗಳಾಗುತ್ತಿದ್ದವು. ರಾಜ್ಯ ಮಟ್ಟದ ಪತ್ರಿಕೆಗಳಿಗಿಂತ ಸ್ಥಳೀಯ ಪತ್ರಿಕೆಗಳಲ್ಲಿ ಹೆಚ್ಚು ಪ್ರಭಾವಕಾರಿ ಕೆಲಸ ಮಾಡುವಂತೆ ಮಾಡುತ್ತಿದ್ದವು. ಬಸವರಾಜ ಹೆಗ್ಗಡೆಯವರು ೬೦ ವರ್ಷಗಳವರೆಗೂ ಪತ್ರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಮತ್ತಷ್ಟು ವರ್ಷಗಳ ಕಾಲ ಪತ್ರಿಕಾ ಸೇವೆಯಲ್ಲಿ ತೊಡಗಲಿ ಎಂದು ಶುಭ ಹಾರೈಸಿದರು.

ಪ್ರಾಸ್ತವಿಕ ನುಡಿಗಳನ್ನಾಡಿದ ಕೆ.ಸಿ.ಮಂಜುನಾಥ್, ಹಣ ನೀಡಿ ಪ್ರಶಸ್ತಿ, ಡಾಕ್ಟರೇಟ್ ಪಡೆಯುವ ಹೀನಾಯ ಸ್ಥಿತಿಯ ಕಾಲಗಟ್ಟದಲ್ಲಿಯೂ ೬೦ ವರ್ಷ ಸಲ್ಲುತ್ತಿರುವ ಬಸವರಾಜ ಹೆಗ್ಗಡೆಯವರು ಮೈಸೂರಿನಿಂದ ತಮ್ಮ ಛಾಯಾಗ್ರಹಕ ವೃತ್ತಿ ಆರಂಭಿಸಿ, ಸಚಿವರೂ ಕಾಯುವಂತಹ ಕಾಲವನ್ನು ಕಂಡವರಾಗಿದ್ದಾರೆ ಎಂದು ನುಡಿದರು.
ಅನೇಕ ಏಳು ಬೀಳುಗಳನ್ನು ಕಂಡ ಹೆಗ್ಗಡೆಯವರು, ಪರೋಕ್ಷವಾಗಿ ಪತ್ರಕರ್ತರ ಏಳ್ಗೆಗೆ ದುಡಿದಿದ್ದು, ಪತ್ರಕರ್ತರ ಆರ್ಥಿಕ ಸಂಕಷ್ಟದಲ್ಲಿಯೂ ನೆರವಾಗಿದ್ದಾರೆ. ತಲೆ ಮೇಲೆ ಬಂದದ್ದನ್ನು ಎದೆಗೆ ಹಾಕಿಕೊಳ್ಳಬೇಕು ಎಂಬ ಮಾತು ಸದಾ ನೆನೆಯುತ್ತೇನೆ. ಅವರು ನೂರಾರು ಜನಕ್ಕೆ ತಿಂಗಳುಗಳು, ವರ್ಷಗಳ ಮಟ್ಟಿಗೆ ಅನ್ನ ನೀಡಿದ ಋಣದಿಂದ ೬೦ ವರ್ಷಕ್ಕೆ ಕಾಲಿಡಲು ಕಾರಣರಾಗಿದ್ದಾರೆ ಎಂದು ಮೆಚ್ಚುವೆ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತ ಮತ್ತೀಕೆರೆ ಜಯರಾಂ ಅವರು, ಪೌರವಾಣಿ ಪತ್ರಿಕೆಯಿಂದ ಕೆಲಸ ಆರಂಭಿಸಿದ್ದು, ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಧಾನ ವರದಿಗಾರರಾಗಿ ಕೆಲಸ ನಿರ್ವಹಿಸಿ ತಮ್ಮದೇ ಪತ್ರಿಕೆಯನ್ನು ಆರಂಭಿಸಿದ್ದು, ಹಲವು ಪತ್ರಕರ್ತರನ್ನು ತಮ್ಮ ಲೇಕನ ಕುಂಚದಿಂದ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಅವರಿಗೆ ರಾಜಕೀಯದ ಗಮನಲೇ ಹೆಚ್ಚು, ರಾಜಕೀಯ ಬುದ್ದಿವಂತಿಕೆಯ ಲೇಕನಗಳು ಇಂದಿನ ಪತ್ರಕರ್ತರಲ್ಲಿ ಇಲ್ಲ, ಇದಕ್ಕೆ ಅವರಿಗೆ ಅವರೇ ಸರಿಸಾಟಿ. ಜಯರಾಮ್ ಅವರ ಹಾದಿಯಲ್ಲಿ ಯುವ ಪತ್ರಕರ್ತರೂ ಸಾಗಲು ಮುಂದಾಗಬೇಕೆಂದು ಕರೆ ನೀಡಿದರು.

ಕೆ.ಕೆ.ಶೆಟ್ಟಿ ಕುತ್ತಿಕಾರ್ ಪ್ರಶಸ್ತಿ ಪುರಸ್ಕೃತ ಮತ್ತೀಕೆರೆ ಜಯರಾಮ್ ಹಾಗೂ ಹೆಚ್.ಕೆ.ವೀರಣ್ಣಗೌಡ ಪ್ರಶಸ್ತಿ ಪುರಸ್ಕೃತ ಬಸವರಾಜ ಹೆಗ್ಗಡೆ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.ಇದನ್ನು ಓದಿ –ರಾಜ್ಯದಲ್ಲಿ ಪುರುಷರಿಗೂ ಉಚಿತ ಬಸ್ ಪ್ರಯಾಣದ ಬಗ್ಗೆ ಯೋಚನೆ: ಶಾಸಕ ಬಸವರಾಜ್ ರಾಯರೆಡ್ಡಿ ಹೇಳಿಕೆ

ಈ ಸಂದರ್ಭದಲ್ಲಿ ಅಭಿನಂದಿತರ ಕುರಿತು ಹಿರಿಯ ಪತ್ರಕರ್ತರ ಕೆ.ಎನ್.ರವಿ ಮಾತನಾಡಿದರು. ಕಾರ್ಯಕ್ರಮದ ರೂವಾರಿಗಳಾದ ಕೆ.ಸಿ.ಮಂಜುನಾಥ್, ಶಶಿಧರ್, ಕೆ.ಶ್ರೀನಿವಾಸ್, ಶಿವನಂಜಯ್ಯ, ಎಂ.ಎಸ್.ಶಿವಪ್ರಕಾಶ್, ಎನ್.ನಾಗೇಶ್, ರವಿ ಸಾವಂದಿಪುರ, ಸಿ.ಎ.ಲೋಕೇಶ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ನವೀನ್‌ಕುಮಾರ್, ಮಾಜಿ ಅಧ್ಯಕ್ಷ ಬಿ.ಪಿ.ಪ್ರಕಾಶ್ ಸೇರಿದಂತೆ ಹಲವು ಪತ್ರಕರ್ತರು ಉಪಸ್ಥಿತರಿದ್ದರು.

  • ಭಾರತೀಯ ರೈಲ್ವೆಯಲ್ಲಿ 30,307 ಹುದ್ದೆಗಳ ನೇಮಕಾತಿ
    by Team Varthaman
    July 18, 2025
  • ದೇಹದಲ್ಲಿ ವಿಟಮಿನ್ D ಕೊರತೆ ಲಕ್ಷಣಗಳು ಪರಿಹಾರಗಳು
    by Team Varthaman
    July 18, 2025
  • ಬೆಂಗಳೂರು ಪೀಣ್ಯದಲ್ಲಿ BMTC ಬಸ್‌ಗೆ ಮಗು ಬಲಿ
    by Team Varthaman
    July 18, 2025
  • ರಾಜ್ಯದಲ್ಲಿ ಮಳೆಯ ಅರ್ಭಟ: ಕೊಡಗಿಗೆ ರೆಡ್ ಅಲರ್ಟ್, 7 ಜಿಲ್ಲೆಗಳಿಗೆ ಆರೆಂಜ್ ಎಚ್ಚರಿಕೆ
    by Team Varthaman
    July 18, 2025
  • 4ನೇ ಆಷಾಢ ಶುಕ್ರವಾರ: ಚಾಮುಂಡೇಶ್ವರಿ ತಾಯಿಗೆ ಸಿಂಹವಾಹಿನಿ ಅಲಂಕಾರ
    by Team Varthaman
    July 18, 2025

ಕುಲಶಾಸ್ತ್ರೀಯ ಅಧ್ಯಯನ ಜಾರಿಗೆ ಕ್ರಮ: ಸಚಿವ ಎಚ್.‌ಸಿ.ಮಹದೇವಪ್ಪ

ವಿಮಾನ ಪತನದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಸಾವು: ಸಾವಿನ ಸಂಖ್ಯೆ 130 ಕ್ಕೆ ಏರಿಕೆ

ಉಬರ್, ರಾಪಿಡೋ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸುವಂತೆ ಹೈಕೋರ್ಟ್ ಆದೇಶ

ಕಿರುತೆರೆ ನಟ ಶ್ರೀಧರ್ ನಾಯಕ್ ವಿಧಿವಶ

ಆರೋಗ್ಯಕಿಂ ಮಿಗಿಲೇನಿಹುದು

TAGGED:breakingnewslatestnewsMandya newsNewspapervisual media
Share This Article
Facebook Email Print
Leave a comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Main NewsTrending

ಅಹಮದಾಬಾದ್‌ ವಸತಿ ಪ್ರದೇಶದಲ್ಲಿ ಪ್ರಯಾಣಿಕರಿದ್ದ ವಿಮಾನ ಪತನ : 242 ಮಂದಿ ಸಾವು?

Team Varthaman Team Varthaman June 12, 2025
ಕನ್ನಡಿಗರ ವಿರುದ್ಧ ವಿವಾದಿತ ಹೇಳಿಕೆ: ಗಾಯಕ ಸೋನು ನಿಗಮ್ ವಿರುದ್ಧ ದೂರು ದಾಖಲು
ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ
ಭೀಕರ ಅಪಘಾತ: ಅಲಕಾನಂದ ನದಿಗೆ ಬಿದ್ದ ಬಸ್ – 2 ಸಾವು, 10 ಮಂದಿ ನಾಪತ್ತೆ
ಇಂದು ಹಲವು ಜಿಲ್ಲೆಗಳಲ್ಲಿ ಮಳೆ, ಮೇ 9ರಿಂದ ಭಾರಿ ಮಳೆಯ ನಿರೀಕ್ಷೆ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • National News
  • Politics
  • IPL 2025
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?