ಬೆಂಗಳೂರು: ಪೋಕ್ಸೊ ಪ್ರಕರಣದಲ್ಲಿ ಚಾರ್ಜ್ಶೀಟ್ ಸಲ್ಲಿಸಲು ಲಂಚ ಬೇಡಿಕೆ ಇಟ್ಟಿದ್ದ ದೇವನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಸಿಲುಕಿದ್ದಾರೆ.
70 ಸಾವಿರ ರೂಪಾಯಿ ಲಂಚ ಬೇಡಿಕೆಯಿಟ್ಟು, 50 ಸಾವಿರ ಸ್ವೀಕರಿಸುತ್ತಿದ್ದ ವೇಳೆ ಕಾನ್ಸ್ಟೇಬಲ್ ಅಮರೇಶ್ ಲೋಕಾಯುಕ್ತದ ಕೈಗೆ ಸಿಕ್ಕಿದ್ದಾರೆ.
ಈ ಸಂಬಂಧ ಮಹಿಳೆಯೊಬ್ಬರು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಆ ದೂರಿನನ್ವಯ ಎಸ್ಪಿ ವಂಶಿಕೃಷ್ಣ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ದಾಳಿಯ ಸಮಯದಲ್ಲಿ ದೇವನಹಳ್ಳಿ ಠಾಣೆಯ ಪಿಎಸ್ಐ ಜಗದೇವಿ ಹಾಗೂ ಕಾನ್ಸ್ಟೇಬಲ್ ಮಂಜುನಾಥ್ ಪರಾರಿಯಾಗಿದ್ದಾರೆ.ಇದನ್ನು ಓದಿ –ಕೇಂದ್ರದಿಂದ GST ಕಡಿತ: ಇಲ್ಲಿದೆ ಸಂಪೂರ್ಣ ಮಾಹಿತಿ
ಮಹಿಳಾ ಪಿಎಸ್ಐ ಜಗದೇವಿ, ಕಾನ್ಸ್ಟೇಬಲ್ ಮಂಜುನಾಥ್ ಮತ್ತು ಅಮರೇಶ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೋಕ್ಸೊ ಕೇಸ್ನ ಚಾರ್ಜ್ಶೀಟ್ ಹಾಕಲು ಪೊಲೀಸರು 70 ಸಾವಿರ ರೂಪಾಯಿ ಲಂಚ ಕೇಳಿರುವುದು ಬಹಿರಂಗವಾಗಿದೆ.