ಮೈಸೂರು: ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಬರುವ ಅಂಡಾಶಯ ಕ್ಯಾನ್ಸರ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು ೫೦ ಕ್ಕೂ ಹೆಚ್ಚು ಸೈಟೊರಿಡಕ್ಟಿವ್ ಶಸ್ತ್ರಚಿಕಿತ್ಸೆ ಮತ್ತು ಹೈಪರ್ಥರ್ಮಿಕ್ ಇಂಟ್ರಾಪೆರಿಟೋನಿಯಲ್ ಕಿಮೋಥೆರಪಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಪೂರೈಸಿರುವುದಾಗಿ ಆಸ್ಪತ್ರೆಯ ಶಸ್ತಚಿಕಿತ್ಸಾ ಆಂಕೋಲಜಿ ತಜ್ಞ ಡಾ.ಕೆ.ಆರ್. ಸುಹಾಸ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಡಾ ಸುಹಾಸ್ , ಈ ರೀತಿಯ ಶಸ್ತ್ರ ಚಿಕಿತ್ಸೆಗಾಗಿ ಈ ಮೊದಲು ಬೆಂಗಳೂರು, ಇಲ್ಲವೇ ಚೆನ್ನೈಗೆ ಹೋಗಬೇಕಾಗಿತ್ತು. ಅಲ್ಲಿ ಸುಮಾರು ೧೫ ಲಕ್ಷ ವೆಚ್ಚವಾಗಲಿದೆ.
ತಮ್ಮ ಆಸ್ಪತ್ರೆಯಲ್ಲಿ ಇದಕ್ಕೆ ಅಗತ್ಯವಾದ ಸಾಧನ ಹಾಗೂ ಪರಿಣಿತರು ಇದ್ದು, ಐದು ಲಕ್ಷ ಸಮೀಪದಲ್ಲಿ ನಡೆಸಬಹುದಾಗಿದೆ. ಇದಲ್ಲದೆ ಬಿಪಿಎಲ್ ಕಾರ್ಡ್ದಾರರಿಗೆ ಸಿಎಸ್ಆರ್ ನಿಧಿ, ಪ್ರಧಾನಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೂ ನೆರವು ದೊರೆಯುತ್ತದೆಂದರು.ಇದನ್ನು ಓದಿ –ಮಿಷನ್ ಆಸ್ಪತ್ರೆ ಕಾರ್ಯಕಲಾಪಕ್ಕೆ ಕಾರ್ಮಿಕರೇ ಅಡ್ಡಿ!
ಈ ನೂತನ ವಿಧಾನದ ಮೂಲಕ ಅಂಡಾಶಯದಲ್ಲಿನ ಕ್ಯಾನ್ಸರ್ ಪದರ ತೆಗೆಯಲಾಗುವುದು. ಉದರದಲ್ಲಿ ವಿಶೇಷ ಸಾಧನ ಇರಿಸಿ, ಕಿಮೊಥೆರಪಿ ಮೂಲಕ ಕ್ಯಾನ್ಸರ್ ಕೋಶ ನಾಶ ಪಡಿಸಲಾಗುವುದು. ಇದು ಅತ್ಯಾಧುನಿಕ ವಿಧಾನವಾಗಿದ್ದು, ಯಶಸ್ಸಿನ ಪ್ರಮಾಣ ಅತಿ ಹೆಚ್ಚಾಗಿರುತ್ತದೆ. ಹೀಗಾಗಿ ಅಂತಹವರು ಪ್ರಯೋಜನ ಪಡೆಯಬೇಕೆಂದು ಕೋರಿದರು. ಮತ್ತೋರ್ವ ತಜ್ಞ ವೈದ್ಯ ಡಾ.ಎಚ್.ಎಂ.ಲೋಕೇಶ್ ಇದ್ದರು.