ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಹಗರಣ ಸಂಬಂಧ ತನಿಖೆ ನಡೆಸುತ್ತಿರುವ ಅಧಿಕಾರಿಯನ್ನು ಬದಲಾಯಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ದೂರುದಾರರಾದ ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.
ಈ MUDA ಹಗರಣ ಪ್ರಕರಣದಲ್ಲಿ, ಮೈಸೂರು ಲೋಕಾಯುಕ್ತರು ಇಂದು ಜನ ಪ್ರತಿನಿಧಿ ನ್ಯಾಯಾಲಯದ ಆದೇಶದಂತೆ ಅಂತಿಮ ತನಿಖಾ ವರದಿಯನ್ನು ಸಲ್ಲಿಸಬೇಕಾಗಿದೆ.
ಈ ವರದಿಯಲ್ಲಿ ಉಲ್ಲೇಖವಾಗಬಹುದಾದ ಅಂಶಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಪರಿಣಾಮ ಬೀರಬಹುದಾದ ಸಾಧ್ಯತೆ ಇರುವುದರಿಂದ ಈ ಪ್ರಕರಣ ಪ್ರಮುಖವಾಗಿದ್ದು, ಗಮನಸೆಳೆದಿದೆ.
ಈ ಕುರಿತು ಮಾತನಾಡಿದ ಸ್ನೇಹಮಯಿ ಕೃಷ್ಣ, “ಲೋಕಾಯುಕ್ತ ಇಂದು ಅಂತಿಮ ವರದಿ ಸಲ್ಲಿಸುವಲ್ಲಿ ಅನುಮಾನವಿದೆ. ಅವರು ಮತ್ತೆ ಕಾಲಾವಕಾಶ ಕೇಳಬಹುದು ಎಂಬ ಶಂಕೆ ಇದೆ. ಇದನ್ನು ಓದಿ –ಪ್ರತಿ ಪಿಎಚ್ಸಿಗಳಲ್ಲೂ ಕ್ಯಾನ್ಸರ್ ಅರಿವು ಘಟಕ ಸ್ಥಾಪಿಸಲಿ:ಡಾ.ವೈ.ಎಸ್.ಮಾಧವಿ
ತನಿಖೆ ನಡೆಸುತ್ತಿರುವ ಲೋಕಾಯುಕ್ತ ಎಸ್ಪಿ ಅವರ ವಿರುದ್ಧ ನನಗೆ ನಿರಂತರ ಅನುಮಾನಗಳಿದ್ದು, ಅವರ ನಿಷ್ಠೆಯ ಕುರಿತು ಎದ್ದಿರುವ ಪ್ರಶ್ನೆಗಳನ್ನು ಮನಗಂಡು ನಾನು ತನಿಖಾಧಿಕಾರಿ ಬದಲಾಯಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಹಾಕಲು ನಿರ್ಧರಿಸಿದ್ದೇನೆ,” ಎಂದು ತಿಳಿಸಿದ್ದಾರೆ.