ಮೈಸೂರು: ರಾಜ್ಯದಲ್ಲಿ ಮರು ಜಾತಿಗಣತಿ ವಿಚಾರ ಇದು ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು ಮಾಡುತ್ತಿರುವ ತಂತ್ರ ಅಷ್ಟೇ ಎಂದು ಮಾಜಿ ಸಂಸದ ಪ್ರತಾಪಸಿಂಹ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ 150 ಕೋಟಿಗೂ ಹೆಚ್ಚು ಖರ್ಚು ಮಾಡಿ ಕಾಟಾಚಾರಕ್ಕೆ ಈ ಗಣತಿ ಮಾಡಿದ್ದರು. ಇದನ್ನು ಬಿಜೆಪಿ, ಜೆಡಿಎಸ್ ವಿರೋಧ ಮಾಡಿದ್ದರು. ಇದು ಅವೈಜ್ಞಾನಿಕ ಅಂತ ಎಲ್ಲಾರಿಗೂ ಗೊತ್ತಿತ್ತು. ಈಗ ರಾಹುಲ್ ಗಾಂಧಿ ಭೇಟಿ ಮಾಡಿದ ಬಳಿಕ ಮತ್ತೊಂದು ಬಾರಿ ಸಮೀಕ್ಷೆ ಮಾಡುತ್ತೇವೆ ಅಂತ ಹೇಳಿದ್ದಾರೆ. ಇದರಿಂದ 150 ಕೋಟಿಗೂ ಹೆಚ್ಚು ಖರ್ಚು ಮಾಡಿದ ಹಣ ವ್ಯರ್ಥವಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಜಾತಿಗಣತಿ ಮಾಡುತ್ತೀವಿ ಅಂತ ಹೇಳಿದೆ. ಹೀಗಿದ್ದಾಗ ಮತ್ತೊಂದು ಬಾರಿ ನಿಮ್ಮ ಗಣತಿ ಮಾಡೋದು ಬೇಡ ಎಂದರು.
ಜಾತಿಗಣತಿ ಬಗ್ಗೆ ಡಾ.ಯತೀಂದ್ರ ಸಿದ್ದರಾಮಯ್ಯ ಗೆ ಏನು ಗೊತ್ತು?, ಅವರು ಇನ್ನೂ ಇದರ ಬಗ್ಗೆ ತಿಳಿದುಕೊಳ್ಳಬೇಕು. ಸಾಮಾಜಿಕ, ಆರ್ಥಿಕ ಸಮೀಕ್ಷೆ ಬಗ್ಗೆ ಅವರಿಗೆ ಏನು ಗೊತ್ತಿಲ್ಲ.
ಲಿಂಗಾಯತರು ವಿರೋಧ ಮಾಡಿದ್ದರು. ಹಾಗಾಗಿ ಮತ್ತೊಮ್ಮೆ ಜಾತಿಗಣತಿ ಮಾಡುತ್ತೀವಿ ಅಂತಾರೆ?, 39 ಜನ ಶಾಸಕರು ಲಿಂಗಾಯತರು ಇದ್ದಾರೆ. ಸಿದ್ದರಾಮಯ್ಯ ಖುರ್ಚಿ ಬಿಟ್ಟು ಕೊಡ್ತಾರಾ?, ವಿರೋಧ ಇದ್ದರೆ ಖುರ್ಚಿ ಬಿಟ್ಟು ಕೊಡಲಿ. ಅದನ್ನು ಬಿಟ್ಟು ನಿಮ್ಮ ಉಳುಕು ಮುಚ್ಚಿಕೊಳಲ್ಲೂ ಏನೇನೋ ಹೇಳಬೇಡಿ ಎಂದರು.
ಕೇಂದ್ರ ಸರ್ಕಾರ ರಾಜಕೀಯವಾಗಿ ಬಲಾಡ್ಯ ತೋರಿಯಲು ಈ ಸರ್ವೇ ಮಾಡುತ್ತಿಲ್ಲ. ಜನರ ಆರ್ಥಿಕ ಸ್ಥಿತಿಗತಿ ಬಗ್ಗೆ ತಿಳಿಯಲು ಸರ್ವೇ ಮಾಡುತ್ತಿದೆ. ನಮ್ಮ ಸರ್ವೇ ಆಗತ್ತೆ ನೀವು ಸುಮ್ಮನೆ ಇರಿ, ನಿಮ್ಮ ಸರ್ವೇ ನಮಗೆ ಅಗತ್ಯವಿಲ್ಲ. ಕುರ್ಚಿ ಉಳಿಸಿಕೊಳ್ಳಲು ಪ್ರತಿದಿನ ಸಿದ್ದರಾಮಯ್ಯ ಜನರನ್ನು ದೈವರ್ಟ್ ಮಾಡುತ್ತಿದ್ದಾರೆ. ಒಬ್ಬರು ಕುರ್ಚಿ ಉಳಿಸಿಕೊಳ್ಳಲು ನೋಡುತ್ತಿದ್ದಾರೆ. ಇನ್ನೊಬ್ಬರು ಕುರ್ಚಿ ಎಳೆಯುತ್ತಿದ್ದಾರೆ. ಇಬ್ಬರ ಕುರ್ಚಿ ಗಲಾಟೆಯಲ್ಲಿ ನಮಗೇನಾದರೂ ಲಾಭ ಆಗತ್ತಾ ಅಂತ ಇನ್ನೊಂದು ಸ್ವಲ್ಪ ಜನ ಕಾಯುತ್ತಿದ್ದಾರೆ. ಸಿದ್ದರಾಮಯ್ಯ ಮೈಸೂರಿಗೆ ಏನು ಅಭಿವೃದ್ದಿ ಕೆಲಸ ಮಾಡಲಿಲ್ಲ. ಇದರಲ್ಲಿ ತಂತ್ರ ಮಂತ್ರ ಏನು ಮಾಡಿದ್ದಾರೋ ಗೊತ್ತಿಲ್ಲ. ನವೆಂಬರ್ ನಲ್ಲಿ ಬದಲಾವಣೆ ಅಗತ್ತೊ ಇಲ್ವಾ ಗೊತ್ತಿಲ್ಲ. ಆದರೆ ಇನ್ನೂ 3ವರ್ಷ ಇವರ ಕುರ್ಚಿ ಕಿತ್ತಾಟ ನಡೆಯುತ್ತಾನೆ ಇರತ್ತದೆ. ರಾಜ್ಯದ ಜನ ಅಂತೂ ಅವರಿಗೆ 136 ಸೀಟು ಕೊಟ್ಟಿದ್ದಾರೆ. ಹಾಗಾಗಿ ಇನ್ನು 3 ವರ್ಷ ಇವರ ಕಿತ್ತಾಟ ನೋಡಬೇಕು ಎಂದರು.
ರಾಜ್ಯದಲ್ಲಿ ಲಿಂಗಾಯತರ ಒಕ್ಕಲಿಗ ವಿರೋಧಕ್ಕೆ ಮರು ಜಾತಿಗಣತಿ ವಿಚಾರವಾಗಿದೆ. ಹಳೇ ಜಾತಿಗಣತಿ ಸರ್ವೇಯಿಂದ ನೂರಾರು ಕೋಟಿ ಹಣ ಪೋಲಾಗಿದೆ.ಇದನ್ನು ಓದಿ –ಪೌರಕಾರ್ಮಿಕರಿಗೆ ಉಚಿತ ಬಟ್ಟೆ ವಿತರಣೆ, ಸಹಪಂಕ್ತಿ ಭೋಜನ
ಜನರನ್ನು ಡೈವರ್ಟ್ ಮಾಡಲು ಸಿಎಂ ಹೊರಟಿದ್ದಾರೆ. ಈ ಹಿಂದೆಯೇ ಲಿಂಗಾಯತ ಒಕ್ಕಲಿಗರು ಗಣತಿಗೆ ಒಪ್ಪಿರಲಿಲ್ಲ. 10ವರ್ಷ ಹಳೆಯ ಗಣತಿ ಇದು ಅಂಕಿ ಅಂಶಗಳು ಸರಿಯಿಲ್ಲ ಅಂತ ಹೇಳಿದ್ದೇವು. ಆದರೆ, ನಾವು ಇದೇ ಜಾತಿಗಣತಿ ಬಿಡುಗಡೆ ಮಾಡ್ತೀವಿ ಅಂತ ಹೇಳಿದರು. ಈಗ ಹೈ ಕಮಾಂಡ್ ಹೇಳಿದೆ ಅಂತ ಮತ್ತೊಮ್ಮೆ ಗಣತಿ ಮಾಡಲು ಹೊರಟಿದ್ದಾರೆ. ಇದಕ್ಕೆ ಹಣ ಎಲ್ಲಿಂದ ತರುತ್ತಾರೆ, ಮ್ಯಾನ್ ಪವಾರ್ ಎಲ್ಲಿಂದ ಮಾಡುತ್ತಾರೆ. ರಾಜ್ಯದ ಜನರಲ್ಲಿ ಗೊಂದಲ ಮೂಡಿಸಲು ಸಿಎಂ ಹೊರಟಿದ್ದಾರೆಂದರು.