By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಬೇಸಿಗೆಯ ತಂಪಿಗೆ ಬಾರ್ಲಿ ಎಂಬ ಸಂಜೀವಿನಿ
    March 28, 2026
    ರಾಮ ನಾಮ ಜಪದ ಮಹಿಮೆ
    March 27, 2026
    ತನು -ಮನ ತಂಪಾಗಿಸೋ ತಂಪು ಬೀಜಗಳು
    March 21, 2026
    ಪತ್ರಿಕೋದ್ಯಮದ ದಿಗ್ಗಜ ಬ್ರಹ್ಮಪುರಿಯ ಅಲೆಮಾರಿ
    March 17, 2026
    ಅತಿಥಿ ದೇವೋಭವ 
    March 15, 2026
  • Sports
  • National
  • International
  • Crime
Reading: ರಾಮ ನಾಮ ಜಪದ ಮಹಿಮೆ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ರಾಮ ನಾಮ ಜಪದ ಮಹಿಮೆ
Articles

ರಾಮ ನಾಮ ಜಪದ ಮಹಿಮೆ

Team Varthaman
Last updated: March 27, 2026 1:24 PM
Team Varthaman
Published: March 27, 2026
Share
SHARE

ರಾಮ ಶಬ್ದದ ಅರ್ಥ ರಮಯತೇ ಇತಿ ರಾಮಂ, ಮನಸ್ಸಿಗೆ ಆನಂದ ನೀಡುವಂತಹದ್ದು ಎಂಬುದು ರಾಮ ಪದದ ಅರ್ಥವಾಗಿದೆ. ಭಗವಂತನ 7ನೇ ಅವತಾರವೇ ರಾಮಾವತಾರ. ರಾಮಾವತಾರದಲ್ಲಿ ಮನುಷ್ಯ ಜನ್ಮವನ್ನು ತಳೆದ ಭಗವಂತ ಮನುಷ್ಯನಾದವನು ಹೇಗೆಲ್ಲ ಬದುಕಬೇಕ ಎಂದು ತೋರಿಸಿ ಮನುಷ್ಯ ಜನ್ಮದಲ್ಲಿ ನಾವು ಅನುಸರಿಸಬೇಕಾದ ಜೀವನಶೈಲಿ ಮತ್ತು ಆದರ್ಶವನ್ನು ಜಗತ್ತಿಗೆ ತೋರಿಸಿ ನಮಗೆ ಮಾರ್ಗದರ್ಶಕನಾಗಿ ಜೀವನವನ್ನು ನಡೆಸಿದ್ದಾನೆ. ಸರ್ವಶಕ್ತನಾದ ಪರಮಾತ್ಮನು ಮನುಷ್ಯ ಜನ್ಮದಲ್ಲಿ ಪಿತೃವಾಕ್ಯ ಪರಿಪಾಲನೆ, ಬ್ರಾತೃಪ್ರೇಮ, ಗುರುಹಿರಿಯರಿಗೆ ಗೌರವ ಕೊಟ್ಟು ಅವರ ಆದೇಶಗಳನ್ನು ಸದಾ ಪಾಲಿಸುತ್ತಾ, ಏಕ ಪತ್ನಿ ವೃತಸ್ಥ%ನಾಗಿ, ಕ್ಷತ್ರೀಯ ಧರ್ಮದ ಪಾಲನೆ ಮಾಡುತ್ತಾ ಅಸಹಾಯಕರಿಗೆ ಸಹಾಯ ಮಾಡುತ್ತಾ ದುಷ್ಟ ಶಕ್ಷಣ ಮತ್ತು ಶಿಷ್ಟ ರಕ್ಷಣ ಮಾಡುತ್ತಾ ಆದರ್ಶ ಜೀವನದ ಮಾರ್ಗವನ್ನು ಪ್ರಪಂಚಕ್ಕೆ ತೋರಿಸಿದವನು. 4 ಯುಗಗಳಲ್ಲಿ ತೇತಾಯುಗದಲ್ಲಿ ಜನಿಸಿದ ರಾಮನು ಕಲಿಯುಗದ ಜನರಿಗೆ ಆದರ್ಶವನ್ನು ತೋರಿಸಿ ದೇವರಾಗಿ ಮನುಷ್ಯನನ್ನು ಉದ್ಧರಿಸಿದ ಶ್ರೀರಾಮಚಂದ್ರನ ನಾಮದ ಮಹಿಮೆ ಬಹಳವೇ ಇದೆ.

Join WhatsApp Group

ಬೇಡನಾಗಿದ್ದ ವಾಲ್ಮೀಕಿ ನಾರದರ ಬೋಧನೆಯಿಂದ ರಾಮನಾಮ ಜಪವನ್ನು ಮಾಡುತ್ತ ರಾಮನಾಮದ ಮಹಿಮೆಯ ಬಲದಿಂದಲೇ ಮಹರ್ಷಿಯಾದ ಎಂದು ಹೇಳಲಾಗುತ್ತದೆ. ಭಾರತೀಯರಲ್ಲಿ ನಾಮ ಸಂಕೀರ್ತನೆಗೆ ಬಹಳ ದೊಡ್ಡ ಸ್ಥಾನವನ್ನು ಕೊಡಲಾಗಿದೆ. ಯಾವುದೇ ನಿಯಮಿತವಾದ ಜಪಾನುಕ್ರಮವನ್ನು ಅನುಸರಿಸದೇ ಯಾವುದೇ ಸ್ಥಳದ ಶುದ್ಧಿಯನ್ನು ಪಾಲಿಸದೇ ಹಾಸಿಗೆಯ ಮೇಲೆ ಮಲಗಿದ್ದರೂ ಮಾಡ ಬಹುದಾದ ಜಪ ಒಂದಿದೆ ಎಂದರೆ ಅದು ಕೇವಲ ಶ್ರೀರಾಮನಾಮ ಜಪವಾಗಿದೆ. “ಶ್ರೀರಾಮ ಜಯರಾಮ ಜಯ ಜಯ ರಾಮ” ಎಂಬುದು ರಾಮ ತಾರಕ ಮಂತ್ರ. ಸೀತಾಮಾತೆಯನ್ನು ಹುಡುಕಲು ಹೊರಟ ಹನುಮಂತನು ಅಶೋಕವನದ ಮರದ ಮೇಲೆ ಕುಳಿತು ಸೀತಾದೇವಿಗೆ ತಾನು ರಾಮ ಭಕ್ತನೆಂದು ತಿಳಿಸಲು ರಾಮನಾಮ ಜಪವನ್ನೇ ಮಾಡುತ್ತಾನೆ. ವಿಭೀಷಣ ಧರ್ಮ ಪರಾಯಣ ಸಾತ್ವಿಕ ಎಂದು ಹನುಮಂತನು ಅವನ ರಾಮನಾಮ ಜಪದ ಮೂಲಕವೇ ತಿಳಿಯುತ್ತಾನೆ. ಇದು ರಾಮಾಯಣ ಕಾಲದ ರಾಮನಾಮ ಜಪದ ಮಹತ್ವವಾಗಿದೆ. ಇಷ್ಟೇ ಏಕೆ ರಾವಣನು ಸೀತೆಯನ್ನು ಅಪಹರಿಸಿದಾಗ ರೂಪ ಬದಲಿಸಿದಂತೆ ಅವಳನ್ನು ಒಲಿಸಿಕೊಳ್ಳಲು ರಾಮನ ವೇಷವನ್ನು ಧರಿಸಿ ಪ್ರಯತ್ನ ಮಾಡುವಂತೆ ಅವನ ಅಸುರ ಬಂಧುಗಳು ಸಲಹೆ ನೀಡಿದಾಗ ರಾವಣನು ಹೇಳುತ್ತಾನೆ, ರಾಮನ ವೇಷವನ್ನು ಧರಿಸಿದಾಗ ನನ್ನ ಮನದಲ್ಲಿ ಮನೋವಿಕಾರಗಳು ಆಗದೇ ಪರಸ್ತ್ರೀಯರನ್ನು ನೋಡಬಾರದೆಂಬ ಎಚ್ಚರಿಕೆ ಮನಸ್ಸಿಗೆ ಬರುತ್ತದೆ ಎನ್ನುತ್ತಾನೆ. ಇಂತಹ ಮಹಿಮೆ ರಾಮನಲ್ಲಿದೆ.

ಪದ್ಮ ಪುರಾಣದಲ್ಲಿ ಶಿವನು ಪಾರ್ವತಿಗೆ ರಾಮನಾಮದ ಮಹಿಮೆಯ ಬೋಧನೆಯನ್ನು ಮಾಡುತ್ತಾನೆ. ನೀನೆ ಪ್ರಪಂಚದ ಒಡೆಯನಾಗಿದ್ದೂ ಏಕೆ ರಾಮನಾಮ ಜಪ ಮಾಡುತ್ತಿರುವೀ ಎಂದು ಪಾರ್ವತಿ ದೇವಿಯು ಕೇಳಿದಾಗ ಈಶ್ವರನು ನಾನು ವಿಷ್ಣುವಿನ ಆಜ್ಞೆಯಂತೆ ವಿಷ್ಣು ಸಹಸ್ರನಾಮವನ್ನು ಜಪಿಸುತ್ತಿರುವೆ. ರಾಮನಾಮ ಜಪ ಮಾಡುವುದರಿಂದ ವೈಷ್ಣವ ವ್ರತ ಆಚರಿಸಿದಂತೆ ಎಂದು ಹೇಳಿ, ರುದ್ರದೇವರು ಪಾರ್ವತಿ ದೇವಿಗೆ ವಿಷ್ಣು ಸಹಸ್ರನಾಮದ ಉಪದೇಶ ಮಾಡುತ್ತಾರೆ. ಆಗ ಈ ವ್ರವನ್ನು ಮಾಡುತ್ತಿರುವಾಗ ನಿತ್ಯವೂ ಊಟಕ್ಕೆ ಮೊದಲು ವಿಷ್ಣು ಸಹಸ್ರನಾಮ ಪರಾಯಣ ಮಾಡದೇ ಊಟ ಮಾಡುತ್ತಿರುವುದಿಲ್ಲ. ಏಕಾದಶೀಯ ಮಾರನೆ ದಿನ ಮುಂಜಾನೆ ದ್ವಾದಶೀಯಂದು ಶಿವನು ಪಾರ್ವತಿಯನ್ನು ಊಟಕ್ಕೆ ಕರೆದಾಗ ವಿಷ್ಣು ಸಹಸ್ರನಾದ ಪಾರಾಯಣವಾಗದ ಕಾರಣ ತಾನು ಊಟ ಮಾಡುವುದಿಲ್ಲ ಎಂದು ಗೌರಿಯು ಹೇಳಿದಾಗ ರುದ್ರದೇವರು “ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ಪುಲ್ಯಂ ರಾಮನಾಮ ವರಾನನೇ” ಎಂದು ಹೇಳಿ ರಾಮನಾಮ ಜಪವು ವಿಷ್ಣು ಸಹಸ್ರನಾಮ ಜಪದ ಫಲವನ್ನೇ ನೀಡುತ್ತದೆ ಎಂದು ಹೇಳುತ್ತಾರೆ. ರಾಮ ನಾಮ ಜಪವು “ಲೌಕಿರಾಃ, ವೈದಿಕಾಃ ಶಬ್ದಾಃ ಯೇ ಕೇಚಿತ್ಸಂತಿ ಪಾರ್ವತಿ| ನಾಮಾನಿ ರಾಮಚಂದ್ರಸ್ಯ ಸಹಸ್ರಂ ಥೇಷು ಚಾದಿಕಂ|| ಜಪತಃ ಸರ್ವಮಂತ್ರಾಶ್ಚ ಸರ್ವ ವೇದಾಂಶ್ಚ ಪಾರ್ವತಿ| ತಸ್ಮಾತ್‌ ಕೋಟಿ ಗುಣ ಪುಣ್ಯಂ ರಾಮನಾಮೈವ ಲಭ್ಯತೇ|| ಎಂದು ಹೇಳುತ್ತಾರೆ. ದಾಸರು ಕೂಡ ರಾಮಮಂತ್ರವ ಜಪಿಸೋ ಹೇ ಮನುಜಾ , ಆ ಮಂತ್ರ ಈ ಮಂತ್ರ ಜಪಿಸಿ ಕೆಡಲು ಬೇಡ ಎಂದಿದ್ದಾರೆ. ರಾಮನಾಮ ಜಪದ ಮಹಿಮೆಯನ್ನು ಸಾರುವ ಅನೇಕ ಅನುಭವದ ಕಥೆಗಳು ಇವೆ. ತ್ರೇತಾಯುಗದಿಂದಲೂ ಕಲಿಯುಗದವರೆಗೂ ಅನೇಕ ಪವಾಡಗಳು ರಾಮನಾಮದಿಂದ ಜಪ ಮತ್ತು ರಾಮನ ಆರಾಧನೆಯ ಕಥೆಗಳನ್ನು ಕೇಳುತ್ತೇವೆ.

ರಾಮನಾಮ ಜಪದಿಂದ ಮನಸ್ಸಿನ ಆತಂಕ, ದುಃಖ ಮತ್ತು ಖಿನ್ನತೆ ದೂರವಾಗಿ ಶಾಂತಿ, ನೆಮ್ಮದಿ ಜೊತೆಗೆ ದೈಹಿಕ ಆರೋಗ್ಯವನ್ನು ಕೂಡ ನೀಡುತ್ತದೆ. ರಾಮನಾಮ ಜಪವು ದೇಹದಲ್ಲಿ ವಿಶೇಷವಾದ ಬಲವನ್ನು ನೀಡುತ್ತದೆ ನರಗಳಿಗೆ ಪ್ರಚೋದನೆ ನೀಡಿ ಸೃಜನಶೀಲತೆ ಹಾಗೂ ಕ್ರಿಯಾಶೀಲತೆಯನ್ನು ಪ್ರೇರೇಪಿಸುತ್ತದೆ. ರಾಮನಾಮ ಜಪದಿಂದ ಮನಸ್ಸು ಸದೃಢವಾಗಿ ಸ್ವತಃ ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳುವ ಆತ್ಮಬಲ ದೊರೆಯುತ್ತದೆ. ಮನುಷ್ಯನ ಮನದಲ್ಲಿರುವ ಕೆಟ್ಟ ಭಾವನೆಗಳನ್ನು ತೊಡೆದು ರಾಮನ ಜೀವನ ಮತ್ತು ವ್ಯಕ್ತಿತ್ವದಿಂದ ಪ್ರೇರಿತರಾಗಿ ಉತ್ತಮ ಗುಣಗಳ ಉಪಾಸನೆ ಮಾಡುವ ಭಕ್ತಿ ಭಾವವೂ ಮನದಲ್ಲಿ ಮೂಡುತ್ತದೆ. ಹೀಗಾಗಿ ನಿರಂತರ ರಾಮನಾಮ ಜಪವನ್ನು ಮಾಡುವುದರಿಂದ ಮಾನಸಿಕ ಒತ್ತಡ ಚಿಂತೆಗಳು ಪರಿಹಾರವಾಗಿ ನೆಮ್ಮದಿಯ ಜೀವನ ನಮ್ಮದಾಗುತ್ತದೆ.

ಮಾಧುರಿ ದೇಶಪಾಂಡೆ, ಬೆಂಗಳೂರು

  • ಮೈಸೂರಿನಲ್ಲಿ ಡ್ರಗ್ಸ್ ದಾಳಿ: 25 ಕೆಜಿ ಸಿಂಥೆಟಿಕ್ ವಶ
    by Team Varthaman
  • ಬೆಂ–ತಿರುಪತಿ ಮಾರ್ಗದಲ್ಲಿ ಭೀಕರ ಅಪಘಾತ: ಮೂವರ ದುರ್ಮರಣ
    by Team Varthaman
  • ಬೇಸಿಗೆಯ ತಂಪಿಗೆ ಬಾರ್ಲಿ ಎಂಬ ಸಂಜೀವಿನಿ
    by Team Varthaman
  • ಜನರ ಜೀವಕ್ಕಿಂತ VIP ಟಿಕೆಟ್‌ಗಳೇ ಮುಖ್ಯವೇ? ನಿಖಿಲ್ ಆಕ್ರೋಶ
    by Team Varthaman
  • SSLC ಪರೀಕ್ಷೆ ಅಂಕಗಳಲ್ಲಿ ಬದಲಾವಣೆ: 625ರಿಂದ 525ಕ್ಕೆ ಇಳಿಕೆ
    by Team Varthaman
ಅರಳುವ ಮೊಗ್ಗಿಗೆ ಬೇಕಿದೆ ಕಾನೂನು ಬಳ್ಳಿಯ ಆಸರೆ
ಮಕ್ಕಳು ತಾಯಿಯ ಪ್ರತಿಬಿಂಬ 
ಕರುಳಿನ ಉತ್ತಮ ಆರೋಗ್ಯಕ್ಕೆ ಪ್ರೊಬಯೋಟಿಕ್ಸ್ ಆಹಾರಗಳು
ಹತ್ತೂರಿನ ಸುಗ್ಗಿ ನೋಡುವ ಮೊದಲು ಹೆತ್ತೂರಿನ ಸುಗ್ಗಿ ನೋಡು
“ಆರೋಗ್ಯ, ಆಧ್ಯಾತ್ಮದ ಮೂಲ ಯೋಗ”
TAGGED:ramanavami
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Articles

ಪವಿತ್ರ ಪುರಿ: ಜಗತ್ತಿಗೆ ಜಗನ್ನಾಥನ ದರ್ಶನ

Team Varthaman
Team Varthaman
June 27, 2025
ಜೆಡಿಎಸ್‌ನಲ್ಲೇ ಮುಂದುವರಿಯುತ್ತೇನೆ: ಜಿ.ಟಿ.ದೇವೇಗೌಡ ಭಾವನಾತ್ಮಕ ಹೇಳಿಕೆ
ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮನೆ ಮೇಲೆ ಇ.ಡಿ. ದಾಳಿ
ಚಿನ್ನದ ಬೆಲೆ ಇಳಿಕೆ – ಖರೀದಿಗೆ ಇದೇ ಉತ್ತಮ ಸಮಯ!
ಮದ್ದೂರು : ಧರ್ಮಸ್ಥಳ ವಿರುದ್ಧದ ಅಪಪ್ರಚಾರ ಖಂಡಿಸಿ ಬಂದ್
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?