By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಸಾಧನೆಗೆ ಇರಬೇಕು ಆತ್ಮವಿಸ್ವಾಸ ಎಂಬ ದೃಢವಾದ ನಂಬಿಕೆ
    September 16, 2025
    ವಿಶ್ವಮಾನ್ಯ ವಿಶ್ವವಂದಿತ ವಿಶ್ವೇಶ್ವರಯ್ಯನವರು
    September 14, 2025
    ವಿಟಮಿನ್ ಬಿ 12 ಕೊರತೆಯಾದ್ರೆ ಹಲವು ಆರೋಗ್ಯ ತಾಪತ್ರಯ
    September 13, 2025
    ಕಾರ್ಡಿಯೋ ಫೋಬಿಯ
    September 6, 2025
    ಕಳೆದು ಹೋದ ಸಂಪತ್ತು ಪ್ರದಾಯಕ ‘ಅನಂತ ಪದ್ಮನಾಭ ವ್ರತ”
    September 6, 2025
  • Sports
  • National
  • International
  • Crime
Reading: ನಿಸ್ವಾರ್ಥ ಜೀವಿ ಜ್ಞಾನದ ಭುವಿ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ನಿಸ್ವಾರ್ಥ ಜೀವಿ ಜ್ಞಾನದ ಭುವಿ
Articles

ನಿಸ್ವಾರ್ಥ ಜೀವಿ ಜ್ಞಾನದ ಭುವಿ

Team Varthaman
Last updated: September 5, 2025 10:17 AM
Team Varthaman
Published: September 5, 2025
Share
SHARE

“ಗುರುವಿನ ಗುಲಾಮನಾಗುವ ತನಕ ದೊರೆಯದೆನ್ನ ಮುಕುತಿ”ಎಂಬಂತೆ ವಿದ್ಯಾರ್ಥಿಗಳು ಗುರುವಿನ ಗುಲಾಮನಾದಾಗಲೇ ಅಪ್ರತಿಮ ಬದುಕು ರೂಪಿಸಿಕೊಳ್ಳುವನು ಎಂಬುದು ಅಕ್ಷರಶಃ ಸತ್ಯ.

ಅಕ್ಷರಗಳ ಕಲಿಸುತ ಪಾಠವ ಬೋಧಿಸುತ ತಿದ್ದಿ ತೀಡಿ ಸುಂದರ ಶಿಲ್ಪಿಯನ್ನಾಗಿ ರೂಪಿಸುತ ಮೆಣದಂತೆ ಉರಿಯುತ ತನ್ನೆಲ್ಲ ಜ್ಞಾನವನ್ನು ಧಾರೆಯೆರೆಯುವವನೆ ಶಿಕ್ಷಕ.ವಿದ್ಯಾರ್ಥಿಗಳಿಗಾಗಿ ತನ್ನ ಬದುಕನ್ನೇ ಮೀಸಲಿಡುತ ತನ್ನ ಮಕ್ಕಳಿಗಿಂತ ಹೆಚ್ಚಾಗಿ ಕಾಳಜಿ ವಹಿಸುವ ವಾತ್ಸಲ್ಯದ ಸಾಕಾರಮೂರ್ತಿ.ಕಪ್ಪು ಹಲಗೆಯ ಮೇಲೆ ಬಳಪದಿಂದ ಬರೆಯುತ್ತಾ ನಮ್ಮೊಳಗೆ ಜ್ಞಾನದ ದೀಪವನ್ನು ಬೆಳಗಿಸುವ ಪ್ರಕಾಶಮಾನತೆಯ ಪ್ರತೀಕ.ಎಷ್ಟೇ ಕಷ್ಟಗಳಿದ್ದರೂ ನುಂಗಿ ವಿದ್ಯಾರ್ಥಿಗಳ ಬಾಳಿಗೆ ಸನ್ಮಾರ್ಗದ ದಾರಿ ತೋರುವ ದಾರಿದೀಪ.ನಮ್ಮೊಳಗಿನ ಅಜ್ಞಾನದ ಅಂಧಕಾರ ಅಳಿಸಿ ಸುಜ್ಞಾನದ ಜ್ಯೋತಿ ಹೊತ್ತಿಸುವ ಕಾರುಣ್ಯದ ಕರುಣಾಕರ.ಎಂತಹ ವಿದ್ಯಾರ್ಥಿಯೇ ಇದ್ದರೂ ಅವನನ್ನು ಒಳ್ಳೆಯ ಮೂರ್ತಿಯನ್ನಾಗಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿ ರಾಷ್ಟ್ರದ ನಿರ್ಮಾತೃನಾಗಿ ನಿಷ್ಠೆಯಿಂದ ಕಾರ್ಯ ಮಾಡುತ ದೇಶದ ಏಳಿಗೆಗೆ ಸದಾ ತುಡಿಯುವವ ಭಗವಂತನ ಸ್ವರೂಪಿಯೇ ಶಿಕ್ಷಕರು.

Join WhatsApp Group

ರಾಷ್ಟ್ರದ ಶಕ್ತಿಯಾಗಿ ಸದಾ ಕಾರ್ಯತತ್ಪರರಾಗುತ ಪ್ರೀತಿ ಮಮತೆಗೆ ಆದಿಯಾಗಿ ನಿಷ್ಠೆ ಪ್ರಾಮಾಣಿಕತೆಯಿಂದ ವಿದ್ಯೆ ಧಾರೆ ಎರೆಯುತ ಮಾನವೀಯ ಮೌಲ್ಯಗಳನು ಬಿತ್ತುತ ಭರವಸೆಯ ತುಂಬುತ್ತಾ ಗುರಿಯತ್ತ ಮುನ್ನಡೆಯಲು ಧೈರ್ಯ ತುಂಬುತ್ತಾನೆ ಜೊತೆಗೆ ಆ ಗುರಿ ಸಾಧಿಸಲು ಬೇಕಾದ ಮಾರ್ಗಗಳನ್ನು ತನ್ನ ಜ್ಞಾನ ವಿವೇಚನೆಗೆ ಅನುಗುಣವಾಗಿ ಅರಿವು ಮೂಡಿಸಿ ಆದರ್ಶ ಬದುಕಿಗೆ ಬೆಳಕಾಗುತ್ತಾನೆ.ಪ್ರತಿ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ ಅವರ ಬುದ್ಧಿ ಮಟ್ಟಕ್ಕೆ ಅನುಸಾರದಂತೆ ಸರಳ ಸುಲಲಿತವಾಗಿ ಮನ ಮುಟ್ಟುವಂತೆ ಉದಾಹರಣೆಗಳ ಮೂಲಕ ಯಾವುದೆ ಪರಿಕಲ್ಪನೆಯನ್ನು ಧಾರಾಳವಾಗಿ ಅರ್ಥೈಸುವ ಶಕ್ತಿ ಇರುವುದು ಶಿಕ್ಷಕನಿಗೆ ಮಾತ್ರ.ಹಾಗಾಗಿ ಪ್ರತಿ ಮಗುವಿನ ಏಳಿಗೆಯಲ್ಲಿ ತಂದೆ ತಾಯಿ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ಪಾತ್ರ ಗುರುವಿನದ್ದೂ ಇದ್ದೆ ಇದೆ.ಪಾಲಕರು ಸಂಸ್ಕಾರ ಸಂಸ್ಕೃತಿ ಕಲಿಸಿದರೆ ಗುರುಗಳು ಸಮಯ ಪ್ರಜ್ಞೆ,ಕೌಶಲ್ಯಗಳು,ಶಿಸ್ತು ಸಂಯಮ ,ಜೊತೆಗೆ ಪರಿಪೂರ್ಣ ವ್ಯಕ್ತಿತ್ವದ ನಿರ್ಮಾಣಕ್ಕೆ ಪೂರಕವಾದ ಸಕಲ ರೀತಿಯಿಂದ ಸಲಹುವವರು ಗುರುಗಳು.

ವಿಭಿನ್ನ ರೀತಿಯ ವಿದ್ಯಾರ್ಥಿಗಳು ತರಗತಿಯಲ್ಲಿರುವರು ಅವರಲ್ಲಿ ಹುದುಗಿರುವ ಪ್ರತಿಭೆಯನ್ನು ಹೆಕ್ಕಿ ತೆಗೆದು ಸದಾ
ಮಾರ್ಗದರ್ಶನ ಮಾಡುತ್ತ ಹುರುಪು ಆತ್ಮವಿಶ್ವಾಸ ತುಂಬುವವರು ಗುರುಗಳು.ಪಠ್ಯಪುಸ್ತಕ ಅಷ್ಟೇ ಅಲ್ಲದೆ ಪ್ರಪಂಚದ ಆಗು ಹೋಗುಗಳ ಬಗೆಗಿನ ಪ್ರಚಲಿತ ವಿಷಯಗಳನ್ನು ತಿಳಿಸುತ್ತಾ ನಮ್ಮೊಳಗೆ ಜ್ಞಾನದ ಜ್ಯೋತಿಯನ್ನು ಬೆಳಗಿಸುತ್ತ ಜಗತ್ತಿನ ಬದಲಾವಣೆಯನ್ನು ತಿಳಿಸುವರು.ಯಾವುದೇ ವಿದ್ಯಾರ್ಥಿ ತಪ್ಪು ದಾರಿ ಹಿಡಿದರೂ ಅವನನ್ನು ಒಳ್ಳೆಯ ದಾರಿಗೆ ತಂದು ಆದರ್ಶ ವಿದ್ಯಾರ್ಥಿಯಾಗಿ ಬೆಳೆಸುವ ಚಾಣಾಕ್ಷತನ ಮತ್ತು ಅವನೊಳಗೆ ಪರಿವರ್ತನೆ ತರುವ ಅಧಮ್ಯ ಶಕ್ತಿ ಇರುವುದು ನಿಸ್ವಾರ್ಥ ಜೀವಿ ಗುರುವಿಗೆ.

ಯಾವುದೇ ಶಿಕ್ಷಕರು ತಮ್ಮ ತನು ಮನ ದಿನದಿಂದ ಮಕ್ಕಳ ಏಳಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸತ್ಪ್ರಜೆಗಳನ್ನಾಗಿ ನಿರ್ಮಾಣ ಮಾಡುವ ಹೊಣೆಗಾರಿಕೆ ಇರುತ್ತದೆ.ಶಿಕ್ಷಕರು ವಿದ್ಯಾರ್ಥಿಗಳ ಏಳಿಗೆಯಲ್ಲಿ ಅನುಸರಿಸಬೇಕಾದ ಕೆಲವು ಮಾರ್ಗಸೂಚಿಗಳು ಅಥವಾ ಸಲಹೆಗಳು

1.ವಿದ್ಯಾರ್ಥಿಗಳ ಬೌಧಿಕ ಮಟ್ಟ ಅರಿಯಬೇಕು.
2.ವಿದ್ಯಾರ್ಥಿಗಳಿಗೆ ಹೇಳುವ ವಿಧಾನದಲ್ಲಿ ಬದಲಿಸಬೇಕು.
3.ಉದಾಹರಣೆ ಮೂಲಕ ಪಾಠವನ್ನು ಹೇಳುವುದರಿಂದ ಬೆಗನೇ ವಿಷಯ ಗ್ರಹಿಸಬಹುದು
4.ಸೃಜನಶೀಲತೆ ಅರಿವು ಮೂಡಿಸಬೇಕು
5.ವಿದ್ಯಾರ್ಥಿಗಳ ಆಸಕ್ತಿ,ಕುತೂಹಲತೆಯ ಬಗ್ಗೆ ಅಭ್ಯಸಿಸಬೇಕು
6.ಅವರೊಳಗಿನ ಪ್ರತಿಭೆಯನ್ನು ಹುಡುಕಿ ಅದಕ್ಕೆ ಪೂರಕ ಮಾರ್ಗದರ್ಶನ ನೀಡಬೇಕು.
7.ಪಠ್ಯದ ಜೊತೆ ನೀತಿ ಕಥೆಗಳನು ಹೇಳಬೇಕು
8.ಪ್ರಸ್ತುತತೆಗೆ ತಕ್ಕಂತೆ ವಿಷಯಗಳನು ಮನದಟ್ಟು ಮಾಡಬೇಕು.
9.ಪ್ರೇರಕ ಮತ್ತು ಸ್ಫೂರ್ತಿದಾಯಕ ವ್ಯಕ್ತಿಗಳ ಬಗ್ಗೆ ಹೇಳಬೇಕು
10.ಸಾಧಕರ ಬಗ್ಗೆ ತಿಳಿಸುತ್ತ ಅವರೊಳಗೆ ಬದುಕಿನ ಬಗ್ಗೆ ಛಲವನ್ನು ಉತ್ತಬೇಕು.

ಇವೆಲ್ಲ ಅಂಶಗಳಿಗೆ ಅನುಗುಣವಾಗಿ ಎಲ್ಲ ಗುರುಗಳು ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದೆ ಆದರೆ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುವುದಲ್ಲದೆ ಅಸಂಖ್ಯಾತ ವಿದ್ಯಾರ್ಥಿಗಳ ಬಾಳು ಬಂಗಾರವಾಗಿ ದೇಶದ ಮಾದರಿ ವ್ಯಕ್ತಿಗಳಾಗಿ ಬಾಳಿ ಕಲಿಸಿದ ತಂದೆ ತಾಯಿಗೆ ತಪ್ಪಿದಾಗ ತಿದ್ದಿ ಬೈದು ಶಿಕ್ಷಿಸಿ ಸರಿ ದಾರಿ ತೋರಿದ ಗುರುವಿಗೆ.ಊರಿಗೆ ಅಲ್ಲದೆ ನಾಡಿಗೆ ಹೆಸರು ತಂದು ಆದರ್ಶ ವಿದ್ಯಾರ್ಥಿಯಾಗಿ ಸಮಾಜದಲ್ಲಿ ಗೌರವಿಸಲ್ಪಡುತ್ತಾನೆ.ಹಾಗಾಗಿ ಒಬ್ಬ ವಿದ್ಯಾರ್ಥಿ ಒಂದು ದೇಶದ ಆಸ್ತಿ ಇದ್ದಂತೆ.ಇದೆಲ್ಲವೂ ಪ್ರತಿ ಶಿಕ್ಷಕರ ಮೂಲ ಜವಾಬ್ದಾರಿ.

ಇಷ್ಟೆಲ್ಲ ಗುರುವಿನ ಬಗ್ಗೆ ಹೇಳಲು ಕಾರಣವಿಷ್ಟೇ ಪ್ರತಿವರ್ಷ ಸೆಪ್ಟೆಂಬರ್ 5 ರಂದು ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಆಚರಿಸುತ್ತಾರೆ .ಈ ದಿನ ನಾವೆಲ್ಲ ನೆನೆಯಬೇಕಾದದ್ದು ಶ್ರೇಷ್ಠ ಧೀಮಂತ ಮುತ್ಸರ್ಜಿ,ಶಿಕ್ಷಣ ತಜ್ಞ ತತ್ವಜ್ಞಾನಿ ಶಿಕ್ಷಕರಲ್ಲೇ ದೇವರನ್ನು ಕಂಡ ದೈವ ಸ್ವರೂಪಿ ಭಾರತದ ಮೊದಲ ಉಪರಾಷ್ಟ್ರಪತಿ,ಮತ್ತು ಎರಡನೇ ರಾಷ್ಟ್ರಪತಿಯಾದ ಸರ್ವಪಲ್ಲಿ ರಾಧಾಕೃಷ್ಣನ ಅವರನ್ನು ಏಕೆಂದರೆ ಒಂದು ದಿನ ವಿದ್ಯಾರ್ಥಿಗಳು ರಾಧಾಕೃಷ್ಣನ್ ಅವರನ್ನು ಸರ್ ನಾವು ನಿಮ್ಮ ಹುಟ್ಟು ಹಬ್ಬ ಆಚರಿಸಬೇಕೆಂದು ತೀರ್ಮಾನಿಸಿದ್ದೇವೆ ಅನುಮತಿ ನೀಡುವಿರಾ ಎಂದು ಕೇಳಲು ಹೋದಾಗ ರಾಧಾಕೃಷ್ಣನ್ ಅವರು ಹೇಳಿದರಂತೆ ನನ್ನ ಜನ್ಮದಿನವೆಂದು ಆಚರಿಸುವ ಬದಲು ಶಿಕ್ಷಕರ ದಿನಾಚರಣೆ ಎಂದು ಆಚರಿಸಿ ಎಂದು ಹೇಳಿದ್ದರಂತೆ ಅವರ ಅಣತಿಯಂತೆ ವಿದ್ಯಾರ್ಥಿಗಳು ಶಿಕ್ಷಕರ ದಿನಾಚಾರಣೆಯಾಗಿ ಆಚರಿಸಲು ಆರಂಭಿಸಿದರು. ಅಂದಿನಿಂದ ಇಂದಿನವರೆಗೂ ಪ್ರತಿಯೊಬ್ಬ ವಿದ್ಯಾರ್ಥಿ ಸೆಪ್ಟೆಂಬರ್ 5 ತಮಗೆ ವರ್ಷಪೂರ್ತಿ ವಿದ್ಯೆಯನ್ನು ಕರುಣಿಸಿದ ಗುರುವಿಗೆ ಶುಭಾಶಯ ತಿಳಿಸಿ ಧನ್ಯವಾದಗಳನ್ನು ಅರ್ಪಿಸುತ್ತಾರೆ.

ನಾವು ಎಷ್ಟೇ ದೊಡ್ಡವರಾಗಿ,ಉನ್ನತ ಹುದ್ದೆ ಏರಿದರೂ ಎಂದಿಗೂ ಗುರುವಿನ ಸ್ಥಾನ ಬದಲಾಗದು ಯಾವಾಗಲೂ ಗುರುವೇ ದೊಡ್ಡವನು ಅವನ ಆಶೀರ್ವಾದವೇ ಸಾಧನೆಗೆ ಬಲವು ಬದುಕಿಗೆ ವರವು.ಗುರುವನ್ನು ನೆನೆದಾಗಲೇ ದಿನಕೆ ಅರ್ಥವು.ಒಂದೊಂದು ತುತ್ತು ಸವಿಯುವಾಗ ನೆನೆಯುವೆ ಗುರುವೇ ನೀವಿಲ್ಲದಿದ್ದರೆ ನಮ್ಮ ಬದುಕಿಗೆ ಅರ್ಥವಾದರೂ ಸಿಕ್ಕಿತೆ ನೀವು ಅಂದು ಹೊಡೆದು ಕಲಿಸಿದ್ದಕ್ಕೆ ನಾವಿಂದು ಒಳ್ಳೆಯ ಉದ್ಯೋಗದಲ್ಲಿದ್ದೇವೆ.

ಗುರುವೇ ನಿಮ್ಮನು ನೆನೆವೆ ಅನುದಿನ.ನೀವೇ ಎನ್ನ ಬಾಳಿಗೆ ಪ್ರೇರಣ ಬರಡಾದ ಬದುಕಿಗೆ ತುಂಬಿದಿರಿ ಆತ್ಮವಿಶ್ವಾಸದ ಹೂರಣ.ಬೆಳಗಿತು ಬದುಕಿನ ಹೊಂಗಿರಣ.ತೀರಿಸಲಾಗದು ಗುರುವೇ ನಿಮ್ಮ ಋಣ ಸದಾ ಸ್ಮರಿಸುವೆ ನಿಮ್ಮ ನಿಸ್ವಾರ್ಥದ ಗುಣ.ಎಲ್ಲರೂ ಗುರುವನ್ನು ಗೌರವಿಸಿ ದೇವರಂತೆ ನಿತ್ಯ ನಮಿಸಿ.ಗುರುವೇ ನಿನ್ನ ಕಾರ್ಯಕೆ ನಮೋನಮ.

ಅವಿನಾಶ ಸೆರೆಮನಿ

  • ಬಾನು ಮುಷ್ತಾಕ್ ದಸರಾ ಉದ್ಘಾಟನೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ
    by Team Varthaman
  • ಯುವರಾಜ್‌ ಸಿಂಗ್, ರಾಬಿನ್‌ ಉತ್ತಪ್ಪಗೆ ED ನೋಟಿಸ್‌
    by Team Varthaman
  • ಸಾಧನೆಗೆ ಇರಬೇಕು ಆತ್ಮವಿಸ್ವಾಸ ಎಂಬ ದೃಢವಾದ ನಂಬಿಕೆ
    by Team Varthaman
  • ರಾಮನಗರ, ಚನ್ನಪಟ್ಟಣ ಸೇರಿ 40 ಕಿ.ಮೀ. ವರೆಗೂ BMTC ಸೇವೆ ವಿಸ್ತರಣೆ
    by Team Varthaman
  • ವಿಶ್ವಮಾನ್ಯ ವಿಶ್ವವಂದಿತ ವಿಶ್ವೇಶ್ವರಯ್ಯನವರು
    by Team Varthaman
ವಿಶ್ವ ಸಂಗೀತ ದಿನದ ಶುಭಾಶಯಗಳು
ಅಂಪೈರ್ ಮೇಡಂ
ಕಣ್ಣಿನ ಮೇಕಪ್ ಬದಿಗೊತ್ತಿ ಕಣ್ಣನ್ನು ಕಾಪಾಡಿ
ತುಪ್ಪ ಎಂಬ ಮಹಾ ಔಷಧಿ
ರಾಮಾನುಜಾಚಾರ್ಯರು
TAGGED:GuruKannada Articleknowledgepower of educationselflessteachers Day 2025
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Trending

ಲಷ್ಕರ್-ಎ-ತೊಯ್ಬಾ ಸಹ-ಸಂಸ್ಥಾಪಕ ಅಮೀರ್ ಹಮ್ಜಾ ಗಾಯಗೊಂಡು ಆಸ್ಪತ್ರೆಗೆ ದಾಖಲು

Team Varthaman
Team Varthaman
May 21, 2025
ಇಸ್ರೇಲ್ ದಾಳಿ: ಇರಾನ್ ಪ್ಯಾರಾಮಿಲಿಟರಿ ಮುಖ್ಯಸ್ಥ ಸೇರಿದಂತೆ 3 ಜನ ಸಾವು
88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬಾನು ಮುಷ್ತಾಕ್ ಆಯ್ಕೆ
ಭಾರತಕ್ಕೆ 6 ರನ್‌ಗಳ ರೋಚಕ ಗೆಲುವು
ಪಾಕಿಸ್ತಾನ ಸೇನೆಯ ಆಪ್ತನು ಪಹಲ್ಗಾಮ್ ಹತ್ಯಾಕಾಂಡದ ಮಾಸ್ಟರ್‌ಮೈಂಡ್: ಸೈಫುಲ್ಲಾ ಖಾಲಿದ್ ಎಂಬುದು ದೃಢ!
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?