By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಕೋಪವೆಂಬುದನರ್ಥ
    July 2, 2026
    ಉಡುಗೊರೆ ಹೊರೆಯಾಗದಿರಲಿ
    May 16, 2026
    ಅಸಹಾಯಕತೆಗೆ ಸ್ಪಂದಿಸುವ ಕನ್ನಡಿಗರ ಸೌಜನ್ಯಕ್ಕೆ ಸಾಟಿಯುಂಟೇ……?
    May 16, 2026
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
  • Sports
  • National
  • International
  • Crime
Reading: ಬಂದದ್ದೆಲ್ಲ ಬರಲಿ…. ಭಗವಂತನ ದಯೆ ಒಂದಿರಲಿ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಬಂದದ್ದೆಲ್ಲ ಬರಲಿ…. ಭಗವಂತನ ದಯೆ ಒಂದಿರಲಿ
ArticlesTrending

ಬಂದದ್ದೆಲ್ಲ ಬರಲಿ…. ಭಗವಂತನ ದಯೆ ಒಂದಿರಲಿ

Team Varthaman
Last updated: April 16, 2025 12:08 PM
Team Varthaman
Published: April 16, 2025
Share
SHARE
  • ಮುಖ ಪುಸ್ತಕದಲ್ಲಿ ಓದಿದ ಈ ಕಥೆ ನಿಜವಾಗಿಯೂ ಬದುಕಿನ ಕುರಿತ ವಿಭಿನ್ನ ಚಿಂತನೆಗೆ ಅವಕಾಶ ಮಾಡಿಕೊಟ್ಟಿದೆ.

ಇದೊಂದು ಚೀನಿ ಕಥೆ. ಓರ್ವ ರೈತ ಕುದುರೆ ಯೊಂದನ್ನು ಸಾಕಿದ್ದ. ಒಂದು ದಿನ ಆತನ ಕುದುರೆ ಕಾಣೆಯಾಯಿತು. ಆತನ ಮನೆಯ ಸುತ್ತಲ ಜನ ಬಂದು ಆತನನ್ನು ಭೇಟಿಯಾಗಿ ಆತನಿಗೆ ನಿನ್ನ ಕುದುರೆ ಕಳೆದುಹೋದದ್ದನ್ನು ಕೇಳಿ ದುಃಖವಾಯಿತು, ಸಮಾಧಾನ ತಂದುಕೊ ಎಂದು ಸಾಂತ್ವನ ಹೇಳಿದರು. ಸುಮ್ಮನೆ ಗೋಣಾಡಿಸಿದ ರೈತನನ್ನು ಕಂಡು ಆತನ ನೋವು ತೀವ್ರವಾಗಿದೆ ಎಂದು ಭಾವಿಸಿದ ಅವರು ಇದಕ್ಕಿಂತ ನಿನಗೆ ಒಳ್ಳೆಯ ಕುದುರೆ ಸಿಗಬಹುದು ಎಂದು ಸಮಾಧಾನ ಹೇಳಿದರು. ಇದಕ್ಕೆ ಆ ರೈತ ಅತ್ಯಂತ ಸರಳವಾಗಿ ‘ಹೌದು ಇರಬಹುದು’ ಎಂದು ಹೇಳಿದ.

ಮರುದಿನ ಆತನ ಕುದುರೆ ಮರಳಿ ಬಂತು… ಆದರೆ ಆ ಕುದುರೆಯ ಜೊತೆ ಏಳು ಕಾಡು ಕುದುರೆಗಳು ಕೂಡ ಬಂದಿದ್ದವು. ಸುತ್ತಲ ಮನೆಯವರು ನೋಡಿದೆಯಾ ನಾವು ಹೇಳಿದಂತೆಯೇ ಆಯಿತು, ನಿನಗೆ ಒಂದು ಕುದುರೆಯ ಬದಲಾಗಿ ಏಳು ಕುದುರೆಗಳು ದೊರೆಯಿತು ಒಳ್ಳೆಯದೇ ಅಲ್ವಾ ಎಂದು ಹೇಳಿದ.

Join WhatsApp Group

ಇರಬಹುದು ಎಂದು ಮತ್ತೆ ಅಷ್ಟೇ ಸರಳವಾಗಿ ರೈತ ಉತ್ತರಿಸಿದ.

ಮರುದಿನ ರೈತನ ಮಗ ಕಾಡು ಕುದುರೆಗಳಲ್ಲಿ ಒಂದು ಕುದುರೆಯನ್ನು ಊರಲು ಪ್ರಯತ್ನಿಸಿ ವಿಫಲನಾಗಿ ಕುದುರೆಯ ಮೇಲಿಂದ ಬಿದ್ದು ಕಾಲು ಮುರಿದುಕೊಂಡ. ಆಗ ಆತನ ಸುತ್ತಣ ಜನ ಅಯ್ಯೋ ನಿನಗೆ ಈ ಕಾಡು ಕುದುರೆಗಳಿಂದ ತೊಂದರೆಯಾಯಿತು ಅಲ್ಲವೇ ಎಂದು ಕೇಳಿದರು. ರೈತನದು ಮತ್ತದೇ ಉತ್ತರ ‘ಇರಬಹುದು’ ಎಂದಾಗಿತ್ತು.

ಕೆಲ ದಿನಗಳ ನಂತರ ಚೀನಾದ ಸೇನೆಯ ಮುಖಂಡನ ನೇತೃತ್ವದಲ್ಲಿ ಎಲ್ಲ ಯುವಕರನ್ನು ಸೇನೆಗೆ ಸೇರಿಸಿಕೊಳ್ಳಲು ಕರೆದೊಯ್ದರು. ಆದರೆ ಕಾಲು ಮುರಿದ ಕಾರಣ ರೈತನ ಮಗನನ್ನು ಬಿಟ್ಟು ಹೋದರು.
ತಮ್ಮ ಮಕ್ಕಳನ್ನು ಕಳಿಸಿದ ನೆರೆಹೊರೆಯ ಜನ ರೈತನ ಮಗ ಸೇನೆಯನ್ನು ಸೇರುವುದು ತಪ್ಪಿದ ಕಾರಣ ಆತನನ್ನು ಅಭಿನಂದಿಸಿದರು.ರೈತ ಮತ್ತದೇ ಮುಗ್ಧ ನಗುವನ್ನು ಸೂಚಿಸುತ್ತಾ ಹೇಳಿದ ಇರಬಹುದು ಎಂದು.

ಇಂದು ಯಾವ ವಿಷಯಗಳು ನಮ್ಮನ್ನು ಹಿಂಜರಿಯುವಂತೆ ಮಾಡುತ್ತವೆಯೋ ಅದೇ ಮುಂದೆ ನಮಗೆ ಗೆಲುವಿಗೆ ದಾರಿಯಾಗುತ್ತದೆ. ಇಂದು ಗೆಲುವೆಂದು ತೋರಿದ್ದು ಮುಂದೆ ಸೋಲಿಗೆ ದಾರಿಯಾಗಬಹುದು ಮತ್ತು ಇಂದು ಸೋಲಾಗಿದ್ದು ನಾಳೆ ಗೆಲುವಿಗೆ ದಾರಿಯಾಗಬಹುದು.. ಯಾವುದೇ ವಿಷಯಕ್ಕೂ ಅತ್ಯಂತ ತೀವ್ರವಾಗಿ ಪ್ರತಿಕ್ರಿಯಿಸುವುದಾಗಲಿ, ನಿರ್ಣಯಿಸುವುದಾಗಲಿ ಮಾಡಬಾರದು. ಇಂದಿನ ಸೋಲೇ ನಾಳಿನ ಗೆಲುವಿಗೆ ಸೋಪಾನ. ಶಾಂತವಾಗಿ ಗುರಿಯೆಡೆಗೆ ತೀವ್ರವಾದ ಲಕ್ಷವಿಟ್ಟು ಸಮಾಧಾನದಿಂದ ನಿಮ್ಮ ಪ್ರಯತ್ನವನ್ನು ನಿರಂತರವಾಗಿ ಮಾಡಿ, ಫಲ ಖಂಡಿತವಾಗಿಯೂ ದೊರೆಯುತ್ತದೆ.

ಬೇಕಿದ್ದಂತಹ ಬದುಕು ನಮಗೆ ಯಾವಾಗಲೂ ಸಿಗುವುದಿಲ್ಲ ಬದುಕಿನಲ್ಲಿ ಬರುವ ಕಷ್ಟಗಳನ್ನು ನಮಗೆ ಒದಗಿದ ಪರೀಕ್ಷೆಗಳೆಂದು, ಸುಖವನ್ನು ನಾವು ಮಾಡಿರುವ ಪರಿಶ್ರಮಕ್ಕೆ ತಕ್ಕ ಫಲವೆಂದು ಅರಿತು ಜೀವಿಸಬೇಕು. ‘ಸುಖ-ದುಃಖ ಸಮೇಕೃತಾ’ ಎಂಬ ಸಂಸ್ಕೃತ ಉಕ್ತಿಯಂತೆ ಬದುಕಿನಲ್ಲಿ ಬರುವ ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಿ ಸುಖಕ್ಕೆ ಹಿಗ್ಗದೆ ಕಷ್ಟಕ್ಕೆ ಕುಗ್ಗದೆ ಬದುಕಿ ತೋರಬೇಕು.

ಇದ್ದಾಗ ಅತಿಯಾಗಿ ವರ್ತಿಸದೆ ಕಳೆದುಕೊಂಡಾಗ ಗೋಳಾಡದೆ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಬೇಕು.
ಬಡವನನ್ನು ತಿರಸ್ಕರಿಸದೆ ಶ್ರೀಮಂತರನ್ನು ಪುರಸ್ಕರಿಸದೆ ಅವರ ಗುಣಕ್ಕೆ ಬೆಲೆ ನೀಡಬೇಕೆ ಹೊರತು ಅವರ ಐಹಿಕ ಜೀವನ ಶೈಲಿಗೆ ಅಲ್ಲ ಎಂಬ ಮಾತು ಸದಾ ನೆನಪಿನಲ್ಲಿರಬೇಕು.
ಎಲ್ಲ ಬಡವರನ್ನು ನಿಕೃಷ್ಟವಾಗಿ ಎಲ್ಲ ಶ್ರೀಮಂತರನ್ನು ಉತ್ಕೃಷ್ಟರಾಗಿ ಒಂದೇ ತಕ್ಕಡಿಯಲ್ಲಿ ತೂಗಬಾರದು. ಇಲ್ಲಿ ಗುಣವೇ ಮುಖ್ಯ, ಉಳಿದೆಲ್ಲವೂ ಗೌಣ.

ಹಂಸವೊಂದು ನೀರನ್ನು ಬೆರೆಸಿದ ಹಾಲಿನಲ್ಲಿ ಕೇವಲ ಹಾಲನ್ನು ಮಾತ್ರ ಸ್ವೀಕರಿಸುವ ಹಂಸಕ್ಷಿರ ನ್ಯಾಯದಂತೆ ನಾವು ಕೆಟ್ಟವರಲ್ಲಿನ ಒಳ್ಳೆಯ ಗುಣಗಳನ್ನು ಮಾತ್ರ ಗುರುತಿಸಬೇಕು.

ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಸಾಯಲೇಬೇಕು. ರಾಜಾಧಿರಾಜರು ಧನ-ಕನಕಗಳನ್ನು, ವಜ್ರ- ವೈಡೂರ್ಯಗಳನ್ನು, ಕುದುರೆ ಆನೆಗಳ ಚತುರಂಗ ಬಲವನ್ನು ತಮ್ಮ ಸಾವಿನೊಂದಿಗೆ ಒಯ್ಯುವುದಿಲ್ಲ. ಬಡವರೂ ಅಷ್ಟೇ. ಹುಟ್ಟುವಾಗ ನಗ್ನತೆಯನ್ನು ಹೊತ್ತು ಬಂದಷ್ಟೇ ಸಹಜವಾಗಿ ಸಾವಿನಲ್ಲೂ ಕೂಡ ನಾವು ಎಲ್ಲವನ್ನು ತೊರೆದೇ ಹೋಗುತ್ತೇವೆ.

ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ
ಮಳೆ ಸುರಿಸಿ ಹಗುರಾದ ಮುಗಿಲಿನಂತೆ

ಎಂಬ ಕವನದಂತೆ ನಾವು ಕೂಡ ನಮ್ಮ ಬದುಕಿನಲ್ಲಿ
ಮುನ್ನಡೆಯಬೇಕು.
ಅಲ್ಲವೇ ಸ್ನೇಹಿತರೆ??

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

  • ಹಾಸ್ಟೆಲ್, ಪಿಜಿಗಳಲ್ಲೂ ಫುಡ್ ಟೆಸ್ಟ್‌ಗೆ ಖಾದರ್ ಸೂಚನೆ
    by Team Varthaman
    August 13, 2026
  • ಇಂದಿನಿಂದ ಮುಂಗಾರು ಅಧಿವೇಶನ; ಸರ್ಕಾರಕ್ಕೆ ಸವಾಲೊಡ್ಡಲು ವಿಪಕ್ಷಗಳ ಸಜ್ಜು
    by Team Varthaman
    August 13, 2026
  • ಬಂದ್‌ಗೂ ಮುನ್ನವೇ ವಾಟಾಳ್ ನಾಗರಾಜ್ ವಶಕ್ಕೆ
    by Team Varthaman
    August 13, 2026
  • ನೂತನ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವ ಇಲಾಖೆ?
    by Team Varthaman
    August 12, 2026
  • ಮುಂಬೈ ಭೂಕುಸಿತ: ಇಬ್ಬರು ಸಾವು, ಹಲವರು ಸಿಲುಕಿರುವ ಶಂಕೆ
    by Team Varthaman
    August 12, 2026
ರಾಜ್ಯದ ಹಲವೆಡೆ ವಾರಪೂರ್ತಿ ಮಳೆಯ ಮುನ್ಸೂಚನೆ
ನಕಲಿ ಮದ್ಯ ಸೇವಿಸಿ 12 ಮಂದಿ ಸಾವು, ಐವರು ಸ್ಥಿತಿ ಗಂಭೀರ
ಮೈಸೂರಿನಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು
ಸಚಿವ ಸುಧಾಕರ್ ಆರೋಗ್ಯದ ಬಗ್ಗೆ ಸತ್ಯಾಂಶ ತಿಳಿಸಿ: ಹೆಚ್.ಡಿ.ಕೆ ಆಗ್ರಹ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಮೆಸ್ಕಾಂ ಜೆಇ
TAGGED:ArticleGods graceKannada Article
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BelgaviCrimeKarnataka

IPL ಹೆಸರಿನಲ್ಲಿ ಯುವ ಕ್ರಿಕೇಟಿಗನಿಗೆ 23 ಲಕ್ಷ ವಂಚನೆ

Team Varthaman
Team Varthaman
May 23, 2025
KRS ಡ್ಯಾಂನಿಂದ ನೀರು ಬಿಡುಗಡೆ – ತಗ್ಗು ಪ್ರದೇಶದ ಜನರಿಗೆ ಪ್ರವಾಹ ಎಚ್ಚರಿಕೆ
ಮಕರ ಸಂಕ್ರಾಂತಿ : ಸೌರಪಥದ ಬದಲಾವಣೆ
ಮಹಿಳೆಯರಿಗೆ ವೇತನ ಸಹಿತ ಮಾಸಿಕ ಋತು ಚಕ್ರ ರಜೆಗೆ ಸರ್ಕಾರ ಅಸ್ತು
ಮಧುಮೇಹವನ್ನ ಬುಡದಿಂದಲೇ ಕಿತ್ತೆಸೆಯುವ ದಿವೌಷಧ ಹಸಿರು ಹಲಸಿನ ಪುಡಿ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?